Friday, September 18, 2009

ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ














All hopes lost, search for drowned Bangalore boy called off

1 post - 1 author - Last post: 17 hours agoThe entire episode has brought to light the callous attitude of Bangalore's civic authorities in failing to fence the open storm water ...www.thaindian.com/.../all-hopes-lost-search-for-drowned-bangalore-boy-called-off_100249261.html - 17 hours ago - Similar -
All hopes lost, search for drowned Bangalore boy called off ...

18 Sep 2009 ... Bangalore, Sep 18 (IANS) The search operation to find the body of ... Vijay is the second boy to die in the last few months after falling in a drain. ... in failing to fence the open storm water drains that dot the city. ...www.sindhtoday.net/news/1/51635.htm - 17 hours ago - Similar -
All hopes lost, search for drowned Bangalore boy called off
ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ
ಎಲ್ಲಿದೆ ವ್ಯವಸ್ಥೆ? ಯಾರು ಹೊಣೆ? ಮತ ಹಾಕಿ ಮತು ಕೆಡಿಸಿಕೊಳ್ಳಬೇಕೆ? ಯಾಕಂದ್ರೆ ಮತ ಹಾಕದವರಿಗೆ ಇದು ಅರಿವಾಗದು..ಎತ್ತರದ ಮಹಡಿಗಳಲ್ಲೋ..ವಿಪತ್ತುಗಳೆಂದರೇನೆಂಬ ಅರಿವೇ ಇಲ್ಲದೆ ಬೆಳೆವಲ್ಲೋ ಇರುತ್ತಾರೆ..ಬಡವ ಮತವನ್ನು ತನ್ನ ಹೊಟ್ತೆಗೆ ಹಾಕುವ ಅನ್ನವೆನ್ನುವಷ್ಟರ ಮಟ್ಟಿಗೆ ನಿಯ್ಯತ್ತಿನಿಂದ ಹಾಕಿ --ಈ ಪಾಡು ಪಡುತ್ತಾನೆ......
ಹೌದು ಸ್ವಾಮಿ...ಮನಸ್ಸು ಅತ್ತು ಅತ್ತು ಹರಿದು ಹಂಚಿಹೋಗಿರುವ ದುಃಖ ತಪ್ತ ಲಕ್ಷ್ಮಮ್ಮ ಮತ್ತು ವರದರಾಜು ದಂಪತಿಗಳನ್ನು ಕೇಳಿ...ಕೇವಲ ಹದಿನೆಂಟು ತಿಂಗಳ ಕರುಳ ಕುಡಿ ನೀರಿನಲ್ಲಿ ಕೊಚ್ಚಿಹೋಗಿ ಇಂದಿಗೆ ಮೂರು ದಿನ...ಬದುಕಿರುತ್ತಾನೆಂಬ ಭ್ರಮೆಯೂ ಈಗ ಬತ್ತಿಹೋಗಿದೆ...ಇನ್ನು ದೇಹ ಸಿಕ್ಕರೂ..ಅದನ್ನು ನೋಡುವ ಮನೋಸ್ಥೈರ್ಯ ಅವರಿಗಿರಲಾರದು..ತಾಯಿ ಕರಳು ಇಂಚಿಂಚೂ ಕತ್ತರಿಗೆ ಸಿಕ್ಕಂತೆ..ರಕ್ತ ಸಿಕ್ತವಾಗಿದ್ದರೂ ಅತಿಶ್ಯೋಕ್ತಿ ಅಲ್ಲ...(ಈ ಬ್ಲಾಗ್ ಬರಿಯುವಾಗ ದೂರದ ಕುವೈತಿನಲ್ಲಿರುವ ನನ್ನ ಕಣ್ಣಲ್ಲಿ ನೀರು ಹನಿಯಾಗುವುದನ್ನು ನಾನು ತಡೆಯಲಾಗಲಿಲ್ಲ..ಇನ್ನು ಆ ತಂದೆ ತಾಯಿಯ ಪಾಡೇನು..?? ದೇವರೇ..ಆ ದಂಪತಿಗಳಿಗೆ..ದುಃಖ ತಡೆಯುವ ಶಕ್ತಿ ಕೊಡು...).
ನಮ್ಮ ಸರ್ಕಾರ ನಿದ್ರಿಸುತ್ತಿದೆಯೇ?? ನಮ್ಮ ಬೊಬ್ಬಿರಿಸಿ ಬೊಬ್ಬಿಡುವ (ಬಾಡೂಟದ ಬೊಂಬಾಯಿಗಳು) ಮಹಾನಗರ ಪಾಲಿಕೆಯ ಮಹಾ ವೈಫಲ್ಯಗಳಿಗೆ...ಏನು ಹೇಳ ಬೇಕು. ಪ್ರತಿಷ್ಟೆಯನ್ನೇ ಬಂಡವಾಳವೆನ್ನುವ ಸರ್ಕಾರ ಅತಂತ್ರದ ಆಡಳಿತವಿರುವ ಬಿ.ಬಿ.ಎಂ.ಪಿ. ಚುನಾವಣೆಗಳನ್ನು ಮುಂದೂಡುತ್ತಲೇ ಇದೆ...ಗೊತ್ತು ಗುರಿಯಿಲ್ಲದ ಮ.ನ.ಪಾ. ಕೆಯ ಅಧಿಕಾರಿಗಳು ತಮ್ಮನ್ನಾಳುವ ಭಾವೀ ಕಾರ್ಪೊರೇಟರುಗಳ ಜೀ-ಹುಜೂರಿಯಲ್ಲಿರುವಾಗ ಎಳೆ ಕಂದಮ್ಮಗಳ ಆರ್ತ ನಾದ ಎಲ್ಲಿ ಕೇಳಿಸುತ್ತೆ???
ಹೋಗಲಿ..ಬಿಡಿ..ಏನೋ ಆಯಿತು ಎನ್ನಲು ಹೊಸದಲ್ಲವಲ್ಲಾ..ಇದು.. ಈಗ ೧೯ ತಿಂಗಳ ಹಸುಗೂಸು ವಿಜಯ ಯಮಕೂಪದಂತೆ ಬಾಯ್ದೆರೆದು ಗುಮ್ಮನಂತಿರುವ ಚರಂಡೀ ಡ್ರೌನ್ ಮ್ಯಾನ್ ಹೋಲುಗಳ ಬಲಿಯಾದ ಮೂರೇ ತಿಂಗಳಿಗೆ ಮುಂಚೆ ಆರು ವರ್ಷದ ಅವಿನಾಶ್ ಎಂಬ ಇನ್ನೊಂದು ಕಂದಮ್ಮ ಬಲಿಯಾಗಿದ್ದು ನೆನಪಿಂದ ಮಾಸೇ ಇಲ್ಲ ಅಷ್ಟರಲ್ಲೇ ಈ ಅವಘಡ. ಪ್ರಕಾಶ್ ಮತ್ತು ಭಾರತೀದೇವಿಯರ ಏಕಮಾತ್ರ ಪುತ್ರನನ್ನು ನುಂಗಿ ನೀರ್ಕುಡಿದ ಈ ವ್ಯವಸ್ಥೆಯನ್ನು ಸರಿಪಡಿಸುವ ಆಶ್ವಾಸನೆಗಳ ಸುರಿಮಳೆಯೇ ಆಯಿತು. ಅಷ್ಟೇ ಏಕೆ ಇದಕ್ಕೆ ಐದು ದಿನ ಮುಂಚೆ ಅರವತ್ತರ ಇಳಿವಯಸ್ಸಿನ ಹಿರಿಯರೊಬ್ಬರು ತಮ್ಮ ಸ್ಕೂಟರ್ ಸಮೇತ ಇಂತಹುದೇ ಕೂಪದೊಳಕ್ಕೆ ಬಿದ್ದು ಸತ್ತದ್ದು ನೆನೆಪಿಲ್ಲವೇ? ಇನ್ನು ನೀರಾವರಿ ಬೋರ್-ಬಾವಿಗಳ ಕಥೆಯೂ ಒಂದು ದುರಂತವೇ..ಆಟವಾಡುವ ಕಂದಮ್ಮಗಳು ಬಲಿಯಾಗಿವೆ. ಏಕೆ ಈ ಪರಿ ನೀರವ ಮೌನ ಅಧಿಕಾರಿಗಳಿಂದ..?? ನಮ್ಮ ಶ್ರೇಯೋಭಿಲಾಷೆಯೇ ತನ್ನ ಜೀವಾಳ ಎನ್ನುವ ಸರ್ಕಾರದಿಂದ...???!! ಇನ್ನೂ ಎಷ್ಟು ಬಲಿ ಬೇಕು ಇವರಿಗೆ??
ಅಲ್ಲಿ ನಾಡಿನಲ್ಲಿರುವ ನಮ್ಮವರು ಎಚ್ಚೆತ್ತುಕೊಳ್ಳಬೇಕು...ಬಡಿದೆಬ್ಬಿಸಬೇಕು..ವ್ಯವಸ್ಥೆಯನ್ನು...ಆದರೆ ಕಣ್ತೆರೆದು ನಿದ್ರಿಸುವವರನ್ನು ಹೇಗೆ ತಾನೆ ಎಚ್ಚರಿಸುವುದು..ಹೇಗೆ..ಹೇಗೆ..ಹೇಗೆ..ತಿಳಿಸುವುದು ಇವರಿಗೆ...ನಮ್ಮ ಮಗುವೂ ಮಗುವೇ..ನಮ್ಮ ಕನಸುಗಳೂ ನಿಮ್ಮ ಕನಸುಗಳಂತೆಯೇ..ಎಂದು.????