ಕೇಳ್ಬ್ಯಾಡಿ ನನ್ಹತ್ರ ನನ್ ಕತಿ
ತಿಂಗ್ಳಿಗ್ ಬರೋದ್ಸಂಬ್ಳ ಒಂದೇ ಸತಿ
ಎಲ್ಲಾದಕೂ ಕಾಯ್ಬೇಕ್ರೀ ಅದ್ಕೇನೇ
ಪರಿಹಾರಕ್ಕೆ ಪಾಲಿಸ್ತಾಯಿವ್ನಿ ಬೇರೆ ನೀತಿ.
ಹೆಡ್ಗುಮಾಸ್ತೆ ದೊಡ್ ಕೆಲ್ಸ ಏನಲ್ಲ
ದುಡ್ಗೂನೂ ಒಂದ್ರಸ್ತೆ ಕಂಡೌವ್ನೇ ಬಲ್ಲ
ಸ್ನೇಯಿತ್ರು ಕೇಳಿದ್ರು, ಲೋಕಾಯುಕ್ತ್ರು ಬಂದ್ರಂತೆ
ನಿಮ್ ಸಾಹೇಬ್ರನ್ನ ತಿನ್ನೋವಾಗ್ ಹಿಡ್ದ್ರಂತೆ
ಹೆಂಗಲಾ ಬಚಾವಾದೆ ನೀನು?
ನಿನ್ ಮನೆ, ತ್ವಾಟ ಸೋದ್ನ ಮಾಡಿದ್ರಂತೆ
ನಾನಂದೆ, ಅದ್ಕೇ ಯೋಳೋದು ಅಡ್ಕಸ್ಬೀಗ್ಳೂಂತ
ತಿಂದ್ರೆ ಸಾಲ್ದು ಬಚಾವಾಗೋಕೂ ಕಲೀಬೇಕು ತಂತ್ರ
ಲೋಕಾಯುಕ್ತ್ರಿಗೆ ಇಲ್ವಾ ಹೆಡ್ಗುಮಾಸ್ತ್ರು?
ಅವ್ರಿಗೇ ತಿನ್ನಿಸ್ದೇ ಅವ್ರ್ ಮನೇಲೇ ಅಡಗ್ಸಿಟ್ಟೆ
ಪ್ರಾಣಿ ಪಕ್ಷಿಗ್ಳ ತಂತ್ರ ನಮ್ಮಂತೋರಮುಂದೆ ನಡೆಯೊಲ್ಲ
ಒಬ್ಬನ್ನ ಹಿಡ್ದ್ ಬುಟ್ರೆ ಮಿಕ್ಕೋರು ಮಂಕಾಗೊಲ್ಲ
ಯಾಕಂದ್ರೆ ನಮ್ಮತ್ರ ತಿನ್ನೋರು ಮ್ಯಾಲ್ಕುಂತವ್ರೆ
ಅವರತ್ರ ತಿನ್ನೋಕೆ ಅವ್ರಮ್ಯಾಲ್ನವ್ರು ಕಾದವ್ರೆ
ಲೋಕಾಯುಕ್ತ್ರು ಒಬ್ಬ್ರು, ಕಳ್ಳ ಖದೀಮ್ರು ಕೋಟ್ಯಾಂತ್ರ
ಒಬ್ಬನ್ನ ಹಿಡಿದ್ರೆ ಸಾಕು ಸಾವ್ರ ಹುಟ್ಕಳ್ತಾರೆ
ಲೋಕಾಯುಕ್ತರೂ ಅಸಹಾಯಕ್ರು ಪಾಪ ಏನುಮಾಡ್ತಾರೆ?
ದಿನಾ ಸಾಯೋರ ಸಂತೆ ಇದು ಅಂತ ಸುಮ್ನಾಗ್ತಾರೆ.