Saturday, June 19, 2010

ವಿಸ್ವಾಮಿತ್ರನ ಎಡ್ವಟ್ಟು

“ನಮ್ಸ್ಕಾರ ಕಣಣ್ಣೋ ವಿಸ್ವಾಮಿತ್ರಣ್ಣ...ಸಂದಾಕಿದ್ದೀಯಾ..? ಏನು ಎರಡ್ತಿಂಗ್ಳು ಸರ್ಕಾರಿ ಮೇಜ್ವಾನಿ ಆಯ್ತಂತೆ...?? ಎಂಗಿತ್ತು...?? ಅದೂ ನಿನ್ನ ತಗೊಂಡೋಗಿ ಎಂಗ್ಸರ್ ಕ್ವಾಣ್ಯಾಕ್ಕೆ ಆಕುದ್ರಂತೆ..? ಅದ್ಕೇಯಾ ಯೋಳಿದ್ದು ಕೂದ್ಲು ಆ ಪಾಟಿ ಬುಡ್ಬ್ಯಾಡಾ ಅಂತ ಕೇಳ್ದ್ಯಾ ನನ್ ಮಾತ್ನ...ಅಲ್ಲ ...ಮೀಸೆ ಬೋಳಿಸ್ಬಿಟ್ಟು..ಆ ಪಾಟಿ ಊದ್ದಕ್ಕೆ ಕೂದ್ಲು ಬಿಟ್ಟು ..ನಿಲುವಂಗಿ ಆಕ್ಕಂಡ್ರೆ...ಅದ್ಯಾವ್ನನ್ ಮಗ ನಿನ್ನ ಗಂಡ್ಸು ಅಂದಾನು....? ಆ ಪ್ಯಾದ್ಗುಳ್ಗೆ ಎಂಗ್ ಗೊತ್ತಾದದು...?! ಪಾಪ...!!”

ವಿಸ್ವಾಮಿತ್ರನಿಗೆ ಕೋಪ ನೆತ್ತಿಗೇರಿತ್ತು....ಎಷ್ಟು ರೋಪಿತ್ತು ..??!! ಆರು ತಿಂಗಳಿಗೆ ಮುಂಚೆ....ಎಲ್ಲಾರೂ...ಆ ಪೋಲೀಸು ಆಫೀಸರ್ರು ಬಂದಿರ್ಲಿಲ್ಲವಾ..ನನ್ನ ಪ್ರಮೋಶನ್ ನಿಂತೋಗಿದೆ..ಮಿನಿಸ್ಟ್ರು ಎಡವಟ್ಟು ಕೆಲಸ ಮಾಡ್ತಾ ಇದಾರೆ, ನೀವಾದರೂ ಸ್ವಲ್ಪ ಶಿಫಾರಸು ಮಾಡಿ ಸ್ವಾಮೀಜಿ ಅಂತ ಉದ್ದಕ್ಕೆ ನನ್ನ ಕಾಲು ನೆಕ್ತಾ ಬಿದ್ದಿರಲಿಲ್ಲವಾ ಎದ್ದೇಳು ಅನ್ನೋತನಕ...?? ಧ್ಯಾನ ದಲ್ಲಿದ್ರೂ ಈ ಮೂರು ತಿಂಗಳಲ್ಲಿ ತನ್ನ ಮಾನ ಮೂರು ಕಾಸಿಗೆ ಹರಾಜಾದ ಮಾಹಿತಿ ದಪ್ಪ ದಪ್ಪ ಅಕ್ಷರಗಳಲ್ಲಿ ಅಚ್ಚು ಹಾಕಿದ್ದ ..ಹತ್ತಿರ ಬಿದ್ದಿದ್ದ‘ಘಂಟಾನಾದ‘ ಪತ್ರಿಕೆಯ ಮೇಲೆ ಕಣ್ಣಾಡಿಸಿದ್ದ ..ವಿಸ್ವಾಮಿತ್ರ. ಹೌದು ಅವನೇ..ಅದೇ ವರದಿಗಾರ..ನನ್ನ ಖಾಸ ಕೋಣೆಗೆ ಬಂದು..ವಿಲಾಯಿತಿ ..ದ್ರಾಕ್ಷಾರಸವನ್ನು ಜೊಲ್ಲು ಸುರಿಸಿಕೊಂಡು ಕುಡಿದವ, ಕುಡಿದದ್ದು ಸಾಲ್ದು ಅನ್ನೋ ಹಾಗೆ ಕಪ್ ನೆಕ್ಕಿದ್ದ ನಿರ್ಭಯ ಕುಮಾರ್...!!!?? ಛೇ ನಾಯಿಗಾದರೂ ನಿಯತ್ತಿರುತ್ತೆ ..ಇವರಿಗಿಲ್ಲದಾಯಿತೇ...?? ಅಕಟಕಟ...!!!


ಕಣ್ಣು ತೆರೆದು ತನ್ನ ಗೆಳೆಯ ... ಸಿಂಗ್ರುನ ನೋಡಿದ ವಿಸ್ವಾಮಿತ್ರ.....ಹೌದು...ಕ್ಲಾಸ್ ಮೇಟು ಸಿಂಗ್ರು ಇವನಿಗಿಂತಾ ಎರಡು ವರ್ಷ ಜೂನಿಯರ್ರು...ಆದ್ರೂ ಕ್ಲಾಸ್ ಮೇಟು ಹ್ಯಾಗೆ ಅಂತೀರಾ..? ನಮ್ ವಿಸ್ವಾಮಿತ್ರ 8, 9 ನೇ ಕ್ಲಾಸಿನಲ್ಲಿ ಒಂದೊಂದು ಸಲ ಡುಮ್ಕಿ ಹೊಡೆದಿದ್ದಕ್ಕೆ ಸಿಂಗ್ರು ಕ್ಲಾಸ್ ಮೇಟ್ ಆದ....ಎಸ್ಸೆಸೆಲ್ಸಿ ಬೆಟ್ಟ ಹತ್ತಾಕಾಗ್ದೆ...ವಿಸ್ವಾಮಿತ್ರ ಹಿಮಾಲಯ ಹತ್ತಿ ಬಂದಮೇಲೇನೆ ಈ ಅವತಾರ!!.....ಶ್ರೀ..ಶ್ರೀ..ವಿಸ್ವಾಮಿತ್ರ ಗುರು ಆಗಿದ್ದು....ಸಿಂಗ್ರ ..ಬಿ,ಇ, ಮಾಡಿ ಪಕ್ಕದ ನಲ್ಲಗೆರೆ ಡ್ಯಾಮ್ ನ ಪ್ರಾಜೆಕ್ಟ್ ಇಂಜನೀಯರ್ ಆಗಿದ್ರೂ ಮಿತ್ರನ್ನ ..ಸಾರಿ...ಗುರೂಜೀನ ನೋಡಿ ಆಶೀರ್ವಾದ ಪಡಕೊಂಡು ಹೋಗ್ತಿದ್ದ...ಖಾಸಗಿಯಲ್ಲಿ ಇಬ್ರೇ ಇದ್ದಾಗ...ವಿಸ್ವಾಮಿತ್ರನ ಜೊತೆ ಅದೇ ಹಳ್ಳಿ ಭಾಷೇಲೇ ಇಬ್ರೂ ಮಾತನಾಡ್ತಿದ್ದದ್ದು. ಹಾಗೂ ಇಬ್ರೇ ಇದ್ದಾಗ ವಿಸ್ವಾಮಿತ್ರ ಹೇಳಿದ್ದುಂಟು...ಸಿಂಗ್ರು ನಮ್ಮ ಗುಟ್ಟು ನಮ್ಮಲ್ಲೇ ಇರ್ಲಪ್ಪ... ಅಂತ.....

ವಿಸ್ವಾಮಿತ್ರ ಹೇಳಿದ ...ನೋಡೋ ಸಿಂಗ್ರ....ಆ ಮಿನಿಸ್ಟ್ರು ನನ್ ತಾವ ಎಸ್ಟ್ ದಪ ಬಂದಿಲ್ಲ .. ಏನೋ ಒಂದ್ ಸಣ್ಣ ಎಡವಟ್ಟು ಆಗೋಯ್ತು...ಗುಟ್ಟಾಗಿರ್ಬೇಕಾದದ್ದು ಬಯಲಾಗೋಯ್ತು...ನಾಯಿ ಎಂಜಲ್ ಕಾಸಿಗೆ ಆಸೆ ಬಿದ್ದು ನನ್ನ ಕಚ್ಚಿಬಿಡ್ತು...ನನ್ನ ಸೆಲ್ ಗೆ ಮಿನಿಸ್ಟ್ರು ಬಂದಿದ್ದಾಗ ಗುಟ್ಟಾಗಿ ಯೋಳಿದ್ದೆ...ಅತ್ಗ್ಯಮ್ಮನಿಗೆ ಯೋಳಿಬಿಡ್ತೀನಿ ನನಗೆ ನೀನೀಗ ಸಹಾಯ ಮಾಡ್ದೆ ಇದ್ರೆ..ಅಂತ...ಅದಕ್ಕವನು ಏಯ್..ಬಿಡ್ ಬಿಡು ಅಳ್ಳಕ್ಕೆ ಬಿದ್ದಿದ್ದೀಯಾ ಆಳಿಗೊಂದು ಕಲ್ಲು ಆಕ್ತಾವ್ರೆ...ನನ್ನೆಂಡ್ರಿಗೂ ಯೋಳೀವ್ನಿ...ಎಲ್ಲಾರ ವಿರುದ್ಧಾನೂ ಆಪಾದ್ನೆ ಮಾಡ್ತಾ ಅವ್ನೆ ಆ ಗುರು..ನನ್ ಬಗ್ಗೆ ಯೋಳಿದ್ರೆ ನಂಬ್ಗಿಂಬೀಯಾ ಅಂತ....ನಿನ್ ಮಾತು ಯಾರೂ ನಂಬಾಕಿಲ್ಲ ಈವಾಗ....ಅಂತ ಲೇವಡಿ ಮಾಡಿಬುಟ್ಟ... ತನ್ನ ಅಳಲನ್ನ ಸ್ನೇಹಿತನ ಹತ್ರ ತೋಡಿಕೊಂಡ ವಿಸ್ವಾಮಿತ್ರ.

ಹೌದು..ಇದು ಸುಮಾರು ಆರು ತಿಂಗಳಿಗೆ ಮುಂಚೆ ಬಹಳ ಪ್ರಸಿದ್ಧವಾಗಿದ್ದ ಶ್ರೀ ಶ್ರೀ ವಿಶ್ವಾಮಿತ್ರ ಗುರೂಜಿ ಕಥೆಯ ತುಣುಕಿದು...ಎಂಥೆಂಥ ಕಚಡಾ ಕೆಲಸ ಮಾಡೋ ಅಧಿಕಾರಿಗಳು ರಾಜಾರೋಷವಾಗಿ ಓಡಾಡ್ತಾರೆ...ಸಿಕ್ಕಿಬಿದ್ರೆ ಸಸ್ಪೆಂಡ್ ಆಗ್ತಾರೆ...ಆಮೇಲೆ ಹೇಗೋ ಸಸ್ಪೆನ್ಶನ್ ರಿವೋಕ್ ಮಾಡಿಸ್ಕೊಂಡು ಅಲ್ಲೇ ಬಮ್ದು ಮತ್ತೆ ಮೆರೀತಾರೆ...ಜನರ ಓಟನ್ನ ತಿನ್ನೋದೂ ಅಲ್ದೇ ಅಧಿಕಾರದ ಕುರ್ಚಿ ಹಿಡಿಯೋ ರಾಜಕಾರಣಿ ಮಾಡಬಾರದ್ದನ್ನೆಲ್ಲ ಮಾಡ್ತಾನೆ...ಕೊಲೆ ಸುಲಿಗೆ..ಹೆಣ್ಣು ಮಕ್ಕಳ ಅಸಹಾಯಕತೆನಾ ಕ್ಯಾಶ್ ಮಾಡ್ತಾನೆ...ಆದ್ರೂ...ಮೆರೀತಾನೆ...ಮತ್ತೆ ದುಡ್ಡು ಸುರೀತಾನೆ ಅದೇ ಮಂದಿ ಓಟ್ ತಗೋತಾನೆ ಮತ್ತೆ ಅದೇ ಗದ್ದುಗೆ ಹಿಡೀತಾನೆ...ಇವರೆಲ್ಲರ ತಪ್ಪುಗಳಿಗೆ...ಹೋಲಿಸಿದರೆ ನಮ್ಮ ವಿಸ್ವಾಮಿತ್ರಂದು ಬಹಳ ಜುಜುಬಿ ...ಆದ್ರೂ ....

ನಿಜ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು....... ಆದ್ರೆ ವಿಶ್ವಾಮಿತ್ರ ತಪ್ಪು ಮಾಡಿಲ್ಲ ಅನ್ನೋದಲ್ಲಾ ನನ್ನ ವಾದ...ಇಂತಹ ತಪ್ಪಿಗೆ ಈ ತರಹದ ಶಿಕ್ಷೆಯಾದರೆ....ಅಮಾಯಕ ಜನರ ಪ್ರಾಣ ಹೀರಿ ಮತೀಯ ಗಲಭೆ ಮಾಡಿಸೋ ರಾಜಕಾರಣಿಗೆ ಯಾಕಿಲ್ಲ ಶಿಕ್ಷೆ... ತಿಂದು ತಿಂದು ಹಂದಿಯಾಗಿ ಮೆರೆಯೋ .. ಲೋಕಾಯುಕ್ತರು ಹಿಡಿದ್ರೂ...ಶಿಕ್ಷೆಯಿಲ್ಲ ಅಂತ ತಿಳ್ಕೊಂಡು ಲಂಗು ಲಗಾಮಿಲ್ಲದೇ ಮೆರೆಯೋ ಅಧಿಕಾರಿಗಳಿಗೆ ಯಾಕಿಲ್ಲ ಶಿಕ್ಷೆ...?? ಯೋಚಿಸಬೇಕಾದ್ದೇ ಅಲ್ವೇ..?