Saturday, June 12, 2010

ಗೊತ್ತಿಲ್ಲ ಮಗು

ಅಪ್ಪಾ ..



ಏನು ಮಗು?


ಮಳೆಗಾಲ ಮತ್ತೆ ಶುರು ಆಗಿದೆ ಅಲ್ಲಪ್ಪಾ


ಹೌದು ಮಗು, ಒಳ್ಳೆದಲ್ವೇ..?


ಮತ್ತೆ ಅದೇ ಉತ್ತರ ಕರ್ನಾಟಕದ ಕಡೆ..


ಹೌದು ಕಣೋ ರೈತರಿಗೆ ಖುಷಿ ತರುತ್ತೆ ಕೃಷಿ ಅದಕ್ಕೆ...


ಮತ್ತೆ ಹೋದ ವರ್ಷದ ಅತಿ ವೃಷ್ಠಿ ಪರಿಹಾರಾನೇ ತಲುಪಿಲ್ಲ ಅಂತಾರೆ..


ಗೊತ್ತಿಲ್ಲ ಮಗು.




ಮತ್ತೆ ಅಪ್ಪಾ..


ಹೇಳು ಮಗು..


ವಿರೋಧ ಪಕ್ಷದವರೂ ನಿಧಿ ಸಂಗ್ರಹ ಮಾಡಿದ್ರಲ್ಲಾ..?


ಹೌದು ಕಣೋ ಬಂದಿತ್ತಲ್ಲ ಪೇಪರಲ್ಲಿ.


ಮತ್ತೆ ಅದೇ ಪೇಪರಲ್ಲಿ ನಿಧಿ ಪರಿಹಾರಕ್ಕೆ ಹೋಗಿಲ್ಲ


ಮತ್ತೆ ಯಾವುದೋ ವ್ಯವಹಾರಕ್ಕೆ ಹೋಗಿದೆ ಅಂತ ಇತ್ತಲ್ಲಾ?


ಗೊತ್ತಿಲ್ಲ ಮಗು.






ಅಲ್ಲಪ್ಪಾ ..


ಮತ್ತೆ ಇನ್ನೇನೋ ..?


ಅದೇ ವಿರೋಧ ಪಕ್ಷದ್ದು ಕೇಂದ್ರದಲ್ಲಿ ಸರ್ಕಾರ


ಹೌದು ನಿನಗೂ ಗೊತ್ತಲ್ಲಾ


ಕೇಂದ್ರ ಕಳುಹಿಸಿದ ಪ್ರವಾಹ ಪರಿಹಾರದ ಖರ್ಚೂ


ನಮ್ಮ ಸರ್ಕಾರ ಮಾಡಿಲ್ಲ ಅಂತ ಲೋಕಾಯುಕ್ತರೂ ಹೇಳಿದ್ದಾರೆ


ಮತ್ತೆ ಆಕಡೆ, ಈ ಕಡೆ ಹಣ ಎಲ್ಲಾ ಯಾವ ಕಡೆ ಹೋಯ್ತು

ನಂಗೊತ್ತಿಲ್ಲ ಮಗು