ಚಿತ್ರಗಳು ಅಂತರ್ಜಾಲ ಕೃಪೆ...
(ಒಂದು ಚಿತ್ರ ಅಚಾತುರ್ಯದಿಂದ ಕ್ಲಿಕ್ ಆಗಿತ್ತು ಕ್ಷಮೆ ಇರಲಿ)
ಅಂಕಲ್
ಏನು ಪುಟ್ಟಾ..?
ಬಿಡದಿಗೆ ಹೋಗಿದ್ರಾ...?
ಇಲ್ಲಲ್ಲಪ್ಪಾ..ಯಾಕೋ..ಹಾಗೆ ಕೇಳ್ದೆ..?
ಅಲ್ಲ ಯಾರೋ ಎಳೆ ವಯಸಿನ ಸ್ವಾಮಿಗಳು ಅವ್ರಂತೆ ಅಲ್ಲಿ...!!
ಏನೋ ಗೊತ್ತಿಲ್ಲ ಪುಟ್ಟ...ಹೂಂ..ಯಾರೋ ಹೇಳಿದ್ದು ನೆನಪೈತೆ...
ಅಲ್ಲ ಅಂಕಲ್ ಟಿವಿ, ಪೇಪರ್ ಎಲ್ಲದ್ರಲ್ಲೂ ಅದೇ ಸುದ್ದಿ ನೀವು ನೋಡಿಲ್ಲ್ವಾ..?
ಇಲ್ಕಣ್ ಪುಟ್ಟ...ಕಬ್ಬು ಕೊಯ್ಲಾಗೈತೆ ..ಗಾಣ ಆಡಿಸ್ಬೇಕು...ಪುರ್ಸತ್ತಿಲ್ಲ
ಅದೇ ಅಂಕಲ್ ಅಲ್ಲಿ ಉಗಾದಿ ಸಮಯದಲ್ಲಿ ರಾಸಲೀಲೆ ಯಾಕಾಯ್ತು ನಿಮ್ಮನ್ನ ಕೇಳೋಕೆ..
ಜನ್ಮಾಷ್ಠಮೀಲೀ..ರಾಸಲೀಲೆ ಓಕೆ...ಉಗಾದಿ ಸಮಯದಲ್ಲಿ ಯಾಕೆ...?
ಅಯ್ಯೋ ಅಂಕಲ್ ನಿಮಗೆ ಬೇಸಾಯ..ನೈಸ್ ರೋಡು ಹೊಲ ಗದ್ದೆ ಕಬಳಿಕೆ ಇದೇ ಚಿಂತೆ
ಅಯ್ಯೋ ದೊಡ್ಡ ಕತೇನೇ ಆಗಿದೆ ಅಲ್ಲಿ ....ಗೊತ್ತಿಲ್ಲವಾ...?
ನಮ್ಗೊತ್ತಿಲ್ಲ ಮಗು... ಅಗೋ ನಿಮ್ಮಪ್ಪ ಬಂದ ಅವ್ರನ್ನೇ ಕೇಳು...
ಅಯ್ಯೋ ನಮ್ಮಪ್ಪಂಗೆ ಇವೆಲ್ಲಾ ಗೊತ್ತಾಗೊಲ್ಲ..ನಂಗೊತ್ತಿಲ್ಲ ಮಗು ಅಂತಾರೆ..
ಏನೋ ಅದು ತರ್ಲೆ ನಿಂದು....ಏನು ಶಂಕರೇಗೌಡ್ರ ತಲೆ ತಿನ್ತಾ ಇದ್ದಾನೆ ,,?
ಅಯ್ಯೋ ಅದೇನೋ ಸ್ವಾಮಿ ಅಂತೆ ಯುಗಾದಿ ಸಮಯದಾಗೆ ರಾಸಲೀಲೆ ಅಂತೆ...
ನನಗೇನೂ ಗೊತ್ತಿಲ್ಲ ಅಂದೆ.......
ಏನದು...ಮೇಷ್ಟ್ರೆ...?
ಅಯ್ಯೋ ಅದೊಂದು ಅವಾಂತರ ಬಿಡಿ ವಾಕ್ ಹೋಗ್ತೀವಲ್ಲ ಆಗ ಹೇಳ್ತೀನಿ..
ಅದಲ್ಲಪ್ಪಾ.....!!!
ಅದೇನೋ ನಿನ ರಾಗ....?
ಮತ್ತೆ ಟಿವಿ ಸಂದರ್ಶನ ಕೊಟ್ಟು ಸ್ವಾಮಿಗಳು ಎರಡೇ ಮಾತು ಕನ್ನಡದಲ್ಲಿ ಹೇಳಿದ್ದು
ಆಮೇಲೆ ಪೂರ್ತಿ ಇಲಿ ತಿಂದಹಾಗೆ ಇಂಗ್ಲೀಷು..ಯಾಕಪ್ಪಾ ಬಿಡದಿ ಕರ್ನಾಟಕದಲ್ಲೇ ಅಲ್ವಾ ಇರೋದು..?
ಹೌದು ಕಣೋ...
ಮತ್ತೆ ಅವ್ರಿಗೆ ಸರಿಯಾಗಿ ಕನ್ನಡಾನೇ ಬರೋಲ್ಲ ಇನ್ನು ಭಕ್ತರಿಗೆ ಏನು ಉಪದೇಶ ಮಾಡ್ತಾರೆ..?
ಗೊತ್ತಿಲ್ಲ ಕಣೋ...
ಮತ್ತೆ..ಯಾಕೆ ಹೀಂಗಾಯ್ತು ಅಂತ ಟಿ.ವಿ.ಯವರು ಕೇಳಿದ್ರೆ...ಇನ್ನುಮುಂದೆ ಕೇರ್ಫುಲ್ ಆಗಿ ಇರ್ತೀನಿ..
ಎಲ್ಲಾ ಕೇರ್ ಫುಲ್ ಆಗಿ ಮಾಡ್ತೀನಿ ಅಂದ್ರಲ್ಲಾ...??
ಅಂದ್ರೆ..ವೀಡಿಯೋ ..ಫೋಟೋ ತೆಗೆಯೋಕೆ ಆಗದ ಹಾಗೆ ಅಂತಾನಾ...?
ಲೇ...ತರ್ಲೆ ಕಣೋ ನೀನು,..ಹೋಗು ಓದ್ಕೋ....
...................ನಿಜಕ್ಕೂ ಆಗ್ತಾ ಇರೋದು ಏನು...ಯಾರನ್ನ ಕೇಳಿದ್ರೂ ನಮಗೆ ಗೊತ್ತಿಲ್ಲ ಅಂತಾರಲ್ಲಾ ಈ ವಿಷಯದಲ್ಲಿ.....ಹಾಂ....??!!