Thursday, October 1, 2009

ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!!

ಸಿತಾರಾಂ ರವರ ಬ್ಲಾಗ್ ಓದಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು ಅದಕ್ಕೇ ಈ ಪೋಸ್ಟ್....
ಆದರೆ ನನ್ನ ಅನುಭವವೇ ಬೇರೆ. ನಾನು ಮೊದಲಿಗೆ ನೌಕರಿ join ಆಗಲು ಮಣಿಪುರಕ್ಕೆ ಹೋಗಿತ್ತಿದ್ದೆ. ಗೌಹಾತಿಯಿಂದ ದೀಮಾಪುರಕ್ಕೆ ಬೇರೆ ಟ್ರೈನನ್ನು ಹಿಡಿದು ಲೇಟಾಗಿ ತಲುಪಿದರಿಂದ ಆ ದಿನದ ಮಣಿಪುರಕ್ಕೆ ಹೋಗುವ ಬಸ್ಸುಗಳು ಹೋಗಿಯಾಗಿತ್ತು (ಬೆಳಿಗ್ಗೆ ೭.೩೦ ಒಳಗೆ ಬಸ್ ಸಿಗದಿದ್ದರೆ ಮತ್ತೆ ಮರು ದಿನವೇ). ಸರಿ ಅಲ್ಲಿಯೇ ಇದ್ದ ಸದರ್ನ ಹೋಟೆಲ್ (ಮದ್ರಾಸಿ ಹೋಟೆಲ್ ಅಂತಲೇ ಅದು ಪ್ರಸಿದ್ಧಿ) ನಲ್ಲಿ ರೂಂ ತಗೊಂಡೆ. ಆಗಲೇ ..ಈ ಗೋಪಾಲ ಅನ್ನುವವರ ಪರಿಚಯ ಆಗಿದ್ದು ..ಅವರು ತೀನ್ಸುಕಿಯಾ (ಪೂರ್ವ ಅಸ್ಸಾಂ) ಗೆ ಹೋಗಬೇಕಿತ್ತಂತೆ..ಆದ್ರೆ ದೀಮಾಪುರದಲ್ಲಿ ಇಳಿವಾಗ ಅವರ ಒಂದು ಬ್ಯಾಗನ್ನು ಯಾರೋ ಲಪಟಾಯಿಸಿದ್ದರಂತೆ..ವಾಪಸ್ ಟಿಕೆಟ್ ಸಹಾ ಬ್ಯಾಗಲ್ಲಿದ್ದು ಈಗ ವಾಪಸ್ಸಿಗೆ ಹಣ ಮತ್ತು ಟಿಕೆಟ್ ಇರಲಿಲ್ಲವಂತೆ..ಅವರು ನಾಗಮಂಗಲ (ಮಂಡ್ಯ) ಕಡೆಯವರು ತಮ್ಮ ತಮ್ಮನನ್ನು ನೋಡಲು ಹೋಗುತ್ತಿದ್ದುದು..ಮುನ್ನೂರು ರೂಪಾಯಿ ಕೊಡಿ ನನ್ನ ರಿಟರ್ನ್ ಟಿಕೆಟ್ ಮಾಡಿಸಿಕೊಂಡು ನನ್ನ ತಮ್ಮನ ಬಳಿ ಹಣ ತಗೊಂಡು ನಿಮಗೆ ಕಳುಹಿಸುತ್ತೆನೆ..ಅಂತ.. ಸರಿ ಕನ್ನಡಿಗರು ಅನ್ನೋ ಒಂದೇ ಕಾರಣಕ್ಕೆ (ದೂರದ ಊರಲ್ಲಿ ಕನ್ನಡ ಕೇಳಿಯೂ ಇರಬೇಕು) ನನ್ನ ಮಣಿಪುರದ ಆಡ್ರೆಸ್ ಸಹಾ ಕೊಟ್ಟೆ. ಮಾತನಾಡುತ್ತಾ ನನ್ನ ಹೊಸ ಕೆಲಸದ ಬಗ್ಗೆಯೂ ಹೇಳಿದ್ದೆ. ಸರಿ ..ಆ ಹಣದ ವಿಚಾರ ಎರಡು ತಿಂಗಳ ನಂತರ ಮರೆತೇ ಹೋಯಿತು..ನೀವು ಹೇಳಿದರಲ್ಲಾ ಹಾಗೇ ..ಇದು ನಡೆದದ್ದು ೧೯೮೬ ಮಾರ್ಚ್ ೧೯ರಂದು. ಮುಂದೆ..೧೯೮೬ರ ಡಿಸೆಂಬರ್ ನಲ್ಲಿ ಊರಿಗೆ ಅಕಸ್ಮಾತ್ ಹೋಗಬೇಕಾಗಿ ಬಂತು.. ಕಲ್ಕತ್ತಾವರೆಗೆ ಫ್ಲೈಟ್ ನಲ್ಲಿ ಹೋಗಿ ಅಲ್ಲಿಂದ ಟ್ರೈನ್ ಹಿಡಿಯುವ ಎಂದುಕೊಂಡೆ ಆದರೆ ಅಷ್ಟು ಹಣವಿರಲಿಲ್ಲ..ಸಂಬಳಕ್ಕೆ ಕಾಯುವ ಸಮಯವಿಲ್ಲ...ನನ್ನ ಸ್ನೇಹಿತರಲ್ಲಿ ಕೇಳಿ ತೆಗೆದುಕೊಳ್ಳೋಣ ಎಂದುಕೊಳ್ಳುವಾಗ ಮನಿ ಆರ್ಡರ್ ಬಂತು.ಗೋಪಾಲ್ ಅನ್ನೋರು ೫೦೦ ರೂಪಾಯಿ ಕಳುಹಿಸಿದ್ದಾರೆ ಎಂದ ಪರಿಚಯವಾಗಿದ್ದ ಪೋಸ್ಟ್ ಮ್ಯಾನ್. ನನಗೆ ನೆನಪೇ ಹೋಗಿತ್ತು..ನಂತರ ನೆನಪಾಯ್ತು..ಆದ್ರೆ ಇದೇನು ಸುಮಾರು ೮-೯ ತಿಂಗಳು ಬೇಕಾಯ್ತೇ ? ಕೇಳಿದೆ..ಆಗ ಪೋಸ್ಟ್ ಮ್ಯಾನ್ ಸಾರ್...ಈ ನಿಮ್ಮ ಮನಿಆರ್ಡರ್ ಪೂರ್ತಿ ಪೂರ್ವೋತ್ತರ ಏಳು ರಾಜ್ಯ ನೋಡಿ ಬಂದಿದೆ ಎಂದು ಅದರ ಮೇಲಿದ್ದ ಸೀಲುಗಳನ್ನೆಲ್ಲ ತೋರಿಸಿದ... ನಂತರ ತಿಳಿಯಿತು, ಗೋಪಾಲ್ ನನ್ನ ಆಡ್ರೆಸ್ ಚೀಟಿಯನ್ನು ಕಳೆದುಕೊಂಡಿದ್ದರಂತೆ...ಬರೀ ಹೆಸರು ಅದರಲ್ಲೂ ಪೂರ್ತಿ ಇಲ್ಲ ಆಜಾದ್, scientist, ICAR, Dimapur. ದಿಮಾಪುರ್ ಗೆ ಬಂದ MO ಅಲ್ಲಿನವರು ನಾಗಾಲ್ಯಾಂಡ್ ನ ನಮ್ಮ ICAR ಗೆ ಕಳುಹಿಸಿದರಂತೆ..ಅವರು ಇಲ್ಲಿ ಯಾರೂ ಇಲ್ಲ ಬಹುಷಃ ಇದು ಅರುಣಾಚಲ ICAR ಕೇಂದ್ರದ್ದಿರಬೇಕು ಅಂತ ರೀ ಡೈರೆಕ್ಟ್ ಮಾಡಿದ್ದರಂತೆ..ಅಲ್ಲಿ ಹೊಸದಾಗಿ ಸೇರಿದ್ದ ನನ್ನಂತಹ ಮಿತ್ರರೊಬ್ಬರು ನಮ್ಮ ICAR North-East ಮುಖ್ಯ ಕಚೇರಿ, ಷಿಲಾಂಗಿಗೆ redirect ಮಾಡಿದ್ದಾರೆ..ಅಲ್ಲಿ ನನ್ನ ವಿವರ ತಿಳಿದಿದ್ದರಿಂದ ಮತ್ತೆ redirect ಆಗಿ ಮಣಿಪುರಕ್ಕೆ ಬಂದಿತ್ತು.....!!!! ಅವರಿಗೆ ನನ್ನಿಂದ ೩೦೦ ತೆಗೆದುಕೊಂಡಿದ್ದೂ ಗೊತ್ತಾಗದೇ..೫೦೦ ಕಳುಹಿಸಿದ್ದರು..ಅವರ Adress ಇದ್ದಿದರಿಂದ ನಾನು ಬೆಂಗಳೂರು ತಲುಪಿದ ಮೇಲೆ..ಆ ೨೦೦ ರೂಪಾಯಿಯ ಜೊತೆಗೆ ದೊಡ್ದದೊಂದು ಪತ್ರ ಬರೆದೆ...ಮೊನ್ನೆ ಮೊನ್ನೆವರೆಗೂ ಅವರು letter ಬರೆಯುತ್ತಿದ್ದರು....
ಹೇಗೆ..?? ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!! ನನಗೆ ಇನ್ನೊಂದು ಸ್ನೇಹಿತರಲ್ಲಿ ಹೆಮ್ಮೆಯಾಗುವಂತೆ ಮಾಡಿದ ವಿಷಯ ಅವರು ಕನ್ನಡಿಗರು ಎಂಬುದು.