Thursday, March 4, 2010
ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ ಮಗಾ?
ನಿತ್ಯಾನಂದ ಅಂದರೆ ಏನಪ್ಪಾ?
ಯಾವಾಗಲೂ ಆನಂದವಾಗಿರೋದು
ಸ್ವಾಮಿ ನಿತ್ಯಾನಂದವಾಗಿರೋದು ಅಂದ್ರೆ
ರಾಸಲೀಲೆಯಲ್ಲಿರೋದು ಅಂತಾರಲ್ಲಪ್ಪಾ?
ನಂಗೊತ್ತಿಲ್ಲ ಮಗು.
ಅಪ್ಪಾ...
ಏನೋ ಮಗಾ?
ನನ್ನನ್ನ ಸ್ಕೂಲಿನಲ್ಲಿ ಬಿ.ಟಿ. ಅಂತಾರಲ್ಲಪ್ಪ..
ಯಾಕೋ..? ನೀನೇನ್ಮಾಡ್ದೆ..??
ಕ್ಲಾಸ್ನಲ್ಲೂ ಹೀಗೇ ಪ್ರಶ್ನೆ ಕೇಳ್ತೀನಿ ಅಂತ ಹಾಗಂತಾರೆ..
ಅಂದ್ರೆ ಬಲು ತರಲೆ...ಅಂತ ಕಣೋ...
ಅದಕ್ಕೇನಾ ರೈತರು ಬಿ.ಟಿ. ಬದನೆ ಬೇಡ ಅಂತ ಪ್ರತಿಭಟಿಸಿದ್ದು
ನಂಗೊತ್ತಿಲ್ಲ ಮಗು.
ಅಪ್ಪಾ ...
ಇನ್ನೂ ಏನೋ ತರಲೆ ನಿಂದು...?
ನೋಡಿದ್ಯಾ ನೀನೂ ನನ್ನ ಬಿ.ಟಿ. ಅನ್ತೀಯ..!
ಸಾರಿ ಕಣೋ..ಪುಟ್ಟ..ಹೇಳು ಏನು ಪ್ರಶ್ನೆ ನಿಂದು..?
ಒಬ್ಬ ಮಿನಿಸ್ಟ್ರು ಬಿ.ಟಿ. ಬದನೆ ಬೇಕು ಅಂತಾರೆ ಇನ್ನೊಬ್ರು ಬೇಡ ಅಂತಾರೆ
ಹೌದು ಕಣೋ ರೈತರಿಗೆ ಬೇಡ ಆದ್ರೆ ವ್ಯಾಪಾರಿಗೆ ಬೇಕು..
ಹಾಗದ್ರೆ ಈರುಳ್ಳಿ ಒಂದು ರಾಜ್ಯ ಸರ್ಕಾರಾನ ಬೀಳಿಸ್ತು
ಹಾಗೇನೆ..ಈ ಬದನೆಕಾಯಿ ಕೇಂದ್ರ ಸರ್ಕಾರಾನ ಬೀಳ್ಸುತ್ತಾ..?
ನಂಗೊತ್ತಿಲ್ಲ ಮಗು.
Subscribe to:
Posts (Atom)