Wednesday, October 28, 2009

ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!!




ಮನುಯುಗ-ಪ್ರಳಯ ವೇದಗಳು
(www.bhavamanthana.blogspot.com
)
‘ರೀ ಗೋಪಾಲ್ ನಿಮ್ಮ ಮಗಳ ಮದುವೆ 2011 ಕ್ಕೆ ಮಾಡ್ಬೇಕು ಅಂದ್ಕೊಂಡಿದ್ದರಲ್ಲವಾ? ಈ ವರ್ಷನೇ ಮಾಡ್ಬಿಡಿ...ಪ್ರಳಯ ಆಗುತ್ತಂತ್ರೀ...2012 ಡಿಸೆಂಬರ್ 21ಕ್ಕೆ...!!?? ಮೊಮ್ಮಗೂನಾದರೂ ನೋಡ್ಕೊಂಡು ಹೋಗಬಹುದು ನೀವು..‘ ಎಲ್ಲೋ ಊರಿಗೆ ಹೋಗೋರಿಗೆ..ಮಧ್ಯಾನ್ಹದ ಊಟ ಮಾಡ್ಕೊಂಡು ಹೋಗಿ ಅನ್ನೋರೀತಿ... ಹೇಳ್ದ ನಿಂಗಣ್ಣ ..ತನ್ನ ಎದುರು ಮನೆ ಗೋಪಾಲ್..ಗೆ ಇದ್ದ ಬದ್ದ ಎರಡು ಕೂದಲನ್ನ ಕೆರೀತಾ ....
‘ರೆಡ್ಡಿ ರಂಪಾಟ - ಎಡ್ಡಿ ಎಗರಾಟ‘ ಅನ್ನೋ ಸ್ವಾರಸ್ಯಕರ ತಲೆಬರಹ ನೋಡಿ ಆ ದಿನದ ದಿನಪತ್ರಿಕೆ ಹಿಡಿದು ತನ್ನ ಪೋರ್ಟಿಕೋದಲ್ಲಿ ಈಸೀ ಛೇರಿನಲ್ಲಿ ಆಸೀನನಾಗಿ..ಬೆಳಗಿನ ಹಬೆಯಾಡುವ ಕಾಫಿಯನ್ನು ಗುಟುಕಿಸುತ್ತಾ ಕೂತಿದ್ದ ಗೋಪಾಲ್ ಗೆ ಒಂದು ಬಾಂಬೆಸೆದ....
ಎಡ್ಡಿ-ರೆಡ್ಡಿ ವಿಷಯ ಹಾರೇ ಹೋಯ್ತು..ಗೋಪಾಲ್ ತಲೆಯಿಂದ ನಿಂಗಣ್ಣ ಸಿಡಿಸಿದ ಬಾಂಬು ಕೇಳಿ...ಏನು..?? ಏನು ನಿಂಗಣ್ಣ ನೀನು ಹೇಳಿದ್ದು?..ಪ್ರಳಯ ಆಗುತ್ತಂತಾ?? ಯಾವ ನ್ಯೂಸ್ನಲ್ಲೂ ಬರ್ಲಿಲ್ಲವೇ?? ನಿನಗ್ಯಾರು ಹೇಳಿದ್ದು..?? ಇದೇನಪ್ಪ ಇದ್ದಕ್ಕಿದ್ದಂಗೆ ಪ್ರಳಯ ಗಿಳಯ ಅಂತೀಯ?? ಆಗೋಂದ್ಸಾರಿ..ಸ್ಕೈಲ್ಯಾಬ್ ಬೆಂಗಳೂರ್ ಮೇಲೆ ಬೀಳ್ಸೋಕೆ ಅಮೇರಿಕಾದವ್ರು ಪ್ಲಾನ್ ಮಾಡವ್ರಂತೆ ಅಂತ ನೀನೇ ಅಲ್ವಾ ಗುಲ್ಲೆಬ್ಬಿಸಿದ್ದು..!!?? ಹಂಗೇನಾ ಇದೂನೂ..??
ಯೇ..ಬಿಡ್ರಪ್ಪಾ ನೀವು..ಉಪಕಾರ ಮಾಡೊರ ಬುಡಕ್ಕೇ ಈಡ್ತೀರ ನೀವು ಬತ್ತೀನಾ..!! ಇದು ನಿಜ ಕಣಪ್ಪಾ..ವಿಜ್ಜಾನಿಗಳೂ ಹೇಳವರಂತೆ..ಅದೇನೋ ಆಕಾಶ ಕಾಯ ಅನ್ನೋದು ಭೂಮಿಗೆ ಬಡಿತದಂತೆ.. ಯಾರೂ ಉಳಿಯಲ್ಲವಂತೆ..ಅದನ್ನೇ ಮಾಯಾ ಜನಾಂಗದ ಕ್ಯಾಲಂಡರೂ ಹೇಳೋದಂತೆ..ಆ ಕ್ಯಾಲಂಡರ್ ನಲ್ಲಿ ೨೦೧೨, ಡಿ. ೨೧ ನಂತರ ಯಾವುದೇ ದಿನ ಇಲ್ಲಂತೆ..ಅಲ್ಲೀಗೇ ಮುಗೀತದಂತೆ ಎಲ್ಲಾ??....
ಒಂದೇ ಉಸಿರಿಗೆ ತನಗೆ ಗೊತ್ತಿದ್ದನ್ನ ಒದರಿದ ನಿಂಗಣ್ಣ.
ಈಗ ನಿಜವಾಗೂ ಯೋಚನೆಗೆ ಬಿದ್ದ ಗೋಪಾಲ...ತಕ್ಷಣ ಅವನಿಗೆ ssಛಿieಟಿಣisಣ ರಾಮಣ್ಣ ನೆನಪಿಗೆ ಬಂದ. ತನ್ನ ಬಾಲ್ಯದ ಗೆಳೆಯ, ಮೊನ್ನೆ ಮೊನ್ನೆವರೆಗೂ ಅಮೇರಿಕಾದಲ್ಲಿದ್ದು ಈಗ ಕರ್ನಾಟಕ ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ವಾತಾವರಣ ಶಾಸ್ತ್ರದ ಎಕ್ಸ್ಪರ್ಟ್ ಆಗಿ ಬೆಂಗಳೂರಿಗೆ ಬಂದಿದ್ದ. ಪಕ್ಕದ ಬೀದೀಲೇ ಅವನ ಮನೆ, ಭಾನುವಾರ ಆಗಿದ್ದರಿಂದ ಮನೇಲೇ ಇರ್ತಾನೆ ಅಂತ ರಾಮಣ್ಣನ ಮನೆಕಡೆ ಹೆಜ್ಜೆ ಹಾಕ್ದ.
ಗಾಬರಿ ಗಾಬರಿಯಾಗೇ ಮನೆಗೆ ಬಂದ ಗೋಪಾಲನ್ನ ನೋಡಿ ರಾಮಣ್ಣ..ಏನೋ ಗೋಪಾಲ ಗಾಬರಿ...ಎಲ್ಲಾ ಆರಾಮ ಹೌದಲ್ಲೋ? ಎನ್ನುತ್ತ ಗೆಳೆಯನನ್ನ ಬರಮಾಡಿಕೊಂಡ.
ಏ..ಏನಿಲ್ಲೋ ರಾಮು...ಎನ್ನುತ್ತಾ ತನ್ನ ಗಾಬರಿಯನ್ನು ಇಲ್ಲವೆನ್ನುವಂತೆ...ಅದೇ..ನಿಂಗಣ್ಣ ...ಏನೋ ೨೦೧೨......
ಓ ಅದಾ..ನಿನ್ಗೂ ಬಿಟ್ಟವನೆ ಭೂತಾನ..?? ಹಹಹ..ಎಂದ ರಾಮಣ್ಣ ಎಲ್ಲ ಗೊತ್ತಿರುವಂತೆ.
ನಿನಗೆ ಗೊತ್ತಾ.. ರಾಮು..? ಕೇಳಿದ ಗೆಳೆಯನ್ನ ಆಶ್ಚರ್ಯದಿಂದ ಗೋಪಾಲ.
ಊಂ ನಪ್ಪಾ..ಎಲ್ಲ ಕಡೆ ಇದೇ ಡಿಸ್ಕಶನ್ನು...ಮಾಡೋಕೆ ಕೇಮೆಯಿಲ್ಲ...ಎಂದ ಉದಾಸೀನತೆಯಿಂದ..
ಅಲ್ಲೋ ಏನೂ ಇಲ್ಲ ಅನ್ನೋ ತರಹ ಹೇಳ್ತಿದ್ದೀಯಾ ನೀನು..ಎಂದ ಗೋಪಾಲ ಈಗ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾ
ಗೆಳೆಯನ್ನ ತನ್ನ ಪಕ್ಕದ ಸೋಫಾದಲ್ಲಿ ಕೂರಿಸಿಕೊಳ್ಳುತ್ತಾ...ಕೂತ್ಕೋ ಹೇಳ್ತೀನಿ ನಾನು..ಎಂದ ರಾಮಣ್ಣ. ನೋಡು ಗೋಪಾಲ..ಎಲ್ಲಾ ಪ್ರಾರಂಭ ಆಗಿದ್ದು ಮಾಯನ್ ಪಂಚಾಂಗ ಅಥವಾ ಕ್ಯಾಲಂಡರ್ ನಿಂದ.
ಮಾಯಾನ್ ಜನಾಂಗ ಆಕಾಶಕಾಯ, ಸೂರ್ಯ ಚಂದ್ರ ಹೀಗೆ ಹಲವು ವಿಷಯ ಅರಿತ ಹಗೂ ಗಣಿತವನ್ನೂ ಅರಿತ ನಾಗರಿಕ ಜನಾಂಗ..ಅದು ಈಗಲೂ ಮಾಯನ್ ಕ್ಯಾಲಂಡರ್ ಅನ್ನು ಬಳಸುತ್ತೆ. ಅದರ ಪ್ರಕಾರ ೨೧ ದಿಸೆಂಬರ್ ೨೦೧೨ ರ ನಂತರ ದಿನವಿಲ್ಲ, ದಿನಾಂಕವಿಲ್ಲ..ನಿನ್ನ ಕಾರಿನ ಸ್ಪೀಡಾ ಮೀಟರ್ ೯೯,೯೯೯ಕ್ಕೆ ಬಂದ ನಂತರ ಓಡೋದನ್ನ ನಿಲ್ಲುಸುತ್ತಾ ಹೇಳು??..
ಏನೋ ರಾಮು ಹೀಗ್ ಕೇಳ್ತೀಯಾ..ಮತ್ತೆ ೦೦೦೦೧ಕ್ಕೆ ಬರುತ್ತೆ...ಅಲ್ಲವಾ...ಅದರಲ್ಲಿ ನಿಲ್ಲೋದು ಏನು?
ನೋಡಿದ್ಯಾ..ಇಲ್ಲೇ ಇದೆ ಉತ್ತರ..ಮಾಯನ್ ಕ್ಯಾಲಂಡರ್ ತನ್ನ ಮೂಲ ಸಂಖ್ಯೆಗಳಾದ ೧೩ ಮತ್ತು ೧೯ ನು ಉಪಯೋಗಿಸಿ ೦.೦.೦.೦.೦. ಉದ್ದ ಎಣಿಕೆ- ಎಂದು‌, ಕರೆಯುತ್ತೆ, ಅಂದರೆ ಅವರ ೦.೦.೦.೦.೦ ರೂಪದ ಕಡೆಯ ಸಂಖ್ಯೆ ೧೩.೦.೦.೦.೦. ಹಾಗಾದ್ರೆ ಈ ಸಂಖ್ಯೆ ಬಂದ ನಂತರ ನಿಂತರೆ ಭೂಮಿ ನಾಶ ಆದಂತೆ ಆಗುತ್ತಾ..?
ಇಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಯೋಣ. ಅವರ ಕ್ಯಾಲಂಡರ್ ನಲ್ಲಿ.. ೦.೦.೦.೦.೦ ..ಹೀಗೆ ಐದು ಸೊನ್ನೆಗಳು..ಪ್ರತಿಸೊನ್ನೆ (ಮೂಲದ ಮೊದಲ ಸೊನ್ನೆ ೧೩ಕ್ಕೆ ನಿಲ್ಲುತ್ತೆ) ೧ರಿಂದ ೧೯ ರವರೆಗೆ ಹೋಗುತ್ತೆ...ಅಂದರೆ ಮೊದಲದಿನ ೦.೦.೦.೦.೧ ಹಾಗೇ ೧೯ನೇ ದಿನ ೦.೦.೦.೦.೧೯, ಅದೇ ೨೦ನೇ ದಿನ ೦.೦.೦.೧.೦ ಆಗುತ್ತೆ ...ಹಾಗೆಯೇ..ಒಂದು ವರ್ಷಕ್ಕೆ -೦.೦.೧.೦.೦, ಇಪ್ಪತ್ತು ವರ್ಷಕ್ಕೆ ೦.೧.೦.೦.೦. ಇದನ್ನೇ ಮುಂದುವರೆಸಿದರೆ .. ೧.೦.೦.೦.೦ ಅಂದರೆ ೪೦೦ ವರ್ಷ (೨೦ *೨೦). ಇದೇ ರೀತಿ ಕ್ಯಾಲಂಡರಿನ ಕೊನೆಯ ಸಂಖ್ಯೆ...೧೩.೦.೦.೦.೦ ಇದನ್ನು ನಮ್ಮ
ಸೌರ್ಯ ಮಾನದಲ್ಲಿ ಹೇಳಿದರೆ ೫೧೨೬ ವರ್ಷ. ಮಾಯನ್ ಕ್ಯಾಲಂಡರ್ ನ ೦.೦.೦.೦.೧ ರ ನಮ್ಮ ಲೆಕ್ಕದ ದಿನಾಂಕ ಕ್ರಿ,ಪೂ. ೩೧೧೪ರ ಆಗಸ್ಟ್ ೧೧. ಅಲ್ಲಿಂದ ೫೧೨೬ ವರ್ಷ ಅಂದರೆ ೨೦೧೨ ಡಿಸೆಂಬರ್ ೨೧..!!!! ಅಂದ್ರೆ ನಿನ್ನ ಕಾರು ನಿಲ್ಲುತ್ತಾ..? ಹೇಳು..?
ಓ... ಅದ್ಕಾ ಇವರು ಹೇಳೋದು ಡಿ.೨೧ ೨೦೧೨ ಕ್ಕೆ ಪ್ರಳಯ ಅಂತಾ..??!! ..ಅಲ್ಲಪ್ಪ ನಮ್ಮ ಕ್ಯಾಲಂಡರ್ ಡಿ.೩೧ಕ್ಕೆ ಪ್ರತಿವರ್ಷ ನಿಲ್ಲುತ್ತಲ್ಲಾ..ಮತ್ತೆ ಜನವರಿ ೧ಕ್ಕೆ ಹೊಸವರ್ಷ ಆಚರಿಸೊಲ್ಲವೇ ನಾವು?...!!! ಸರಿ..ಸರಿ..ಬಿಡು ಅರ್ಥ ಆಯ್ತು..
ನೋಡು ಗೋಪಾಲ..ಇನ್ನೊಂದೆರಡು ವಿಷಯಾನೂ ಇದೆ..ಅವ್ರು ಹೇಳೋದು...
ಆ ದಿನಕ್ಕೆ ಭೂಮಿಯ ಗುರುತ್ವ ಮತ್ತು ಕಾಂತಗುಣ ಅದಲು ಬದಲಾಗುತ್ತೆ ಅಂತ...ಅಂದರೆ..ಉತ್ತರ ದೃವ ದಕ್ಷಿಣ ದೃವಗಳಲ್ಲಿ ವ್ಯತ್ಯಯ ಆಗುತ್ತೆ ಅಂತ...ಇದರಿಂದ ಸಮುದ್ರ ಅಲ್ಲೋಲಕಲ್ಲೋಲ ಆಗುತ್ತೆ, ಜೀವಿಗಳ ಮೇಲೆ ಅಪಾರ ಪ್ರಭಾವ ಬೀಳುತ್ತೆ ಅಂತ... ಇದೂ..ಅಸಾಧ್ಯ ಅಂತ ನಾನು ಹೇಳ್ತೀನಿ...
ಯಾಕೆ ಗೊತ್ತಾ? ಕಾಂತಗುಣ ಬದಲಾವಣೆ ಹೊಸದೇನಲ್ಲ. ಇದು ನಿಯಮಿತವಲ್ಲ ಹಾಗೂ ಇದ್ದಕ್ಕಿದ್ದಂತೆ..ನೀನು ಮಲಗಿದ್ದು ಬೆಳಿಗ್ಗೆ ಏಳುವಾಗ ಬದಲಾಗುವಂತಹುದೂ ಅಲ್ಲ... ಕ್ರಮೇಣ ಆಗುವುದು.. ಲೆಕ್ಕದ ಪ್ರಕಾರ ೩೦೦,೦೦೦ ವರ್ಷಕ್ಕೆ ಒಮ್ಮೆ ಆಗುತ್ತದಂತೆ. ಹೀಗೆ ಆಗಿ ೭೮೦,೦೦೦ ವರ್ಷ ಆಗಿದೆಯಂತೆ..ಅಂದರೆ ಆಗಬೇಕಿತ್ತು ಆಗಿಲ್ಲ..ಯಾವಾಗ ಬೇಕಾದರೂ ಆಗಬಹುದು...ಮತ್ತು ಇದು ಕ್ರಮೇಣ ಆಗುವುದಾದ್ದರಿಂದ ಮತ್ತು ಇದು ಪೂರ್ಣವಾಗಲು ಸುಮಾರು ೫೦೦೦ ವರ್ಷಗಳೇ ತಗಲಬಹುದು ಎನ್ನುವುದರಿಂದ....ನಮ್ಮ ಇಡೀ ನಾಗರೀಕತೆಯೂ ಇಷ್ಟು ಸಮಯವನ್ನು ನೋಡಿಲ್ಲ ಇನ್ನು ಆ ಸಮಯದ ಅವಧಿಯ ತೃಣಸಮಾನವೂ ಇಲ್ಲ ನಮ್ಮ ಜೀವಿತಾವಧಿ...ಇದರ ಬಗ್ಗೆ ಯೋಚಿಸುವ ಅಗತ್ಯವಾದರೂ ಏನು...?? ಹಾಗೆಯೇ ನಮ್ಮ ಭೂಮಿಯ ಕಾಂತೀಯ ಗುಣ ಶೂನ್ಯವಾಗುವುದು ಎನ್ನುವ ಮಾತೂ ಅಸಾಧ್ಯವಾದದ್ದು...ಕಾಂತ ಕ್ಷೇತ್ರ..ಏರುಪೇರಾದರೂ ಅದರ ಒಟ್ಟಾರೆ ರಕ್ಷಕಗುಣ ಹಾಗೆಯೇ ಇರುತ್ತೆ..ಹೀಗಾಗಿ..ಸೂರ್ಯ ಅಥವಾ ಇನ್ನಿತರ ಆಕಾಶಕಾಯದ ಕ್ಷಕಿರಣ ಬೆಂಕಿ ನಮ್ಮನ್ನು ತಟ್ಟುತ್ತೆ ಎನ್ನುವುದೂ ಬರೀ ಬುರುಡೆ...ಇದಕ್ಕೆ ಅಮೇರಿಕೆಯ ನಾಸಾ ಸ್ಸಿನೆತಿಸ್ತ್ಸ್ ಸಹಾ ಪೂರಕ ತರ್ಕ ಒದಗಿಸಿ ಭೂಕಾಂತತೆ ಹೇಗೆ ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.




ಇನ್ನು ಮೂರನೇ ಸಾಧ್ಯತೆ...ಇದು ಎಲ್ಲದಕ್ಕಿಂತ ಅತಿ ಬಾಲಿಶ ಮತ್ತು ಮೂರ್ಖ ತರ್ಕದ ಸಾಧ್ಯತೆ... ಯಾವುದೋ ಎಕ್ಸ್ ಎನ್ನುವ ಆಕಾಶಕಾಯ ಭೂಮಿಯತ್ತ ಬರುತ್ತಿದ್ದು ೨೦೧೨ ಡಿ.೨೧ಕ್ಕೆ ಭೂಮಿಯನ್ನು ಬಲವಾಗಿ ಹೊಡೆಯುತ್ತೆ,....!! ಅದೂ ..ಡಿ.೨೧ಕ್ಕೇ ಏಕೆ? ಅದರ ಗಾತ್ರ ಏನು? ಮೂರುದಿನ ಭೂಮಿಯ ಚಲನೆಯನ್ನೇ ನಿಲ್ಲಿಸುವಷ್ಟು ಶಕ್ತಿಯುತವಾಗಿದ್ದರೆ ಅದರ ಗಾತ್ರ ಬೃಹದಾಕಾರದ್ದಾಗಿ‌ಅರಬೇಕು...ನಮ್ಮಲ್ಲಿ ಲಕ್ಷಾಂತರ ಖಗೋಳ ಶಾಸ್ತ್ರಿಗಳು ಅಕಾಶ ವೀಕ್ಷಕರು ಇದ್ದು ಇಷ್ಟು ದೊಡ್ದ ಆಕಾಶಕಾಯವನ್ನು ಗಮನಿಸಿಲ್ಲವೇ..?? ಅದರ ಗಾತ್ರದ ಬಗ್ಗೆ ಗೊತ್ತಿಲ್ಲ ಎಂದರೆ...ಅದರ ವೇಗ ಹೇಗೆ ತಿಳಿಯಿತು? ವೇಗ ಗೊತ್ತಿಲ್ಲ ಎಂದರೆ ಅದು ಡಿ,೨೧ಕ್ಕೇ ಢೀ ಹೊಡೆಯುತ್ತೆ ಎನ್ನುವುದು ಯಾವ ತರ್ಕ..??!! ಇದರ ಸುತ್ತ ಸಂಶಯಗಳೇ ಹೆಚ್ಚು...ಅಸಲು ಹೀಗೊಂದು ಆಕಾಶ ಕಾಯ ಇರುವುದೇ ಯಾವ ದೇಶದ ಖಗೋಳಜ್ನ ನಿಗೂ ಗೊತ್ತಾಗಿಲ್ಲ..!!! ಇದಕ್ಕೆ ಇನ್ನೊಂದು ಹಾಗಲಕ್ಕೆ ಬೇವು ಸಾಕ್ಷಿ ತರಹ...ಸರ್ಕಾರಗಳು ವಿಷಯವನ್ನು ತಿಳಿದಿದ್ದೂ ಬಯಲು ಮಾಡುತ್ತಿಲ್ಲ...!!! ಇದು ಸಣ್ಣ ಪುಟ್ಟದ್ದಲ್ಲ...ಇಡೀ ಭೂಮಿಯೇ ಇಲ್ಲವಾಗುತ್ತೆ ಎನ್ನುವುದಾದರೆ...ಯಾವುದೇ ಕುರುಹೇ ಇರುವುದಿಲ್ಲವೇ..??!! ಭೂಮಿ, ಸೂರ್ಯ, ಆಕಾಶಕಾಯ ಎಲ್ಲ ಚಾಲನೆಯ ನಿಯಮಕ್ಕೆ ಬದ್ಧ ಎನ್ನುವುದಾದರೆ ...ಅತಿಘೋರ ಒಮ್ಮೆಗೇ ಆಗುತ್ತೆ ಎನ್ನುವುದನ್ನು ನಂಬುವುದಾದರೂ ಹೇಗೆ..??




ಇದಕ್ಕೆಲ್ಲ ಒಂದೇ ಉತ್ತರ ಸಾಧ್ಯ...ಇದು ಮೂಲತಃ ಮಾಯನ್ ಹುಟ್ಟುಹಾಕಿದ ಜನಗೊಂದಲ್ಕ್ಕೀಡುಮಾಡುವುದು...ತಮ್ಮ ಸ್ಪೀಡಾ ಮೀಟರ್ ಕೊನೆಯಾದ್ದರಿಂದ ಜಗತ್ತೂ ಕೊನೆಯೆನ್ನುವುದು...ಹೇಗೆಂದರೆ...ಅಜ್ಜಿ ಹುಂಜ ಕೂಗದಿದ್ದರೆ ಸೂರ್ಯ ಮೂಡುವುದಿಲ್ಲ ಬೆಳಕಾಗುವುದಿಲ್ಲ ಎನ್ನುವಂತೆ...
ಏನಂತೀಯ ಗೋಪಾಲ???
ಏಯ್ ಬಿಡು ಮಾರಾಯಾ..ಒಳ್ಳೆ ಮಾಹಿತಿ ಕೊಟ್ಟೆ ನೀನು..., ಬರ್ಲಿ ಆ ನಿಂಗಣ್ಣ ನನ್ನ ಹತ್ರ ಹೇಳ್ತೀನಿ ಅವನಿಗೆ ಸರಿಯಾಗಿ...ಬರ್ಲಾ...ಅಂದಹಾಗೆ ...ನನ್ನ ಕಾರಿನ ಸ್ಪೀಡಾ ಮೀಟರು ನಿಜಕ್ಕೂ ಕೆಟ್ಟೈತೆ ೫೦೦೦ ಕಿ.ಮೀ ಓಡಿದೆ ಕಾರು..೦೦೦೦೦ ತೋರಿಸ್ತಾ ಇದೆ....ಬರ್ಲಾ...


ಸ್ನೇಹಿತರೇ ಇಲ್ಲಿ ನಿಮಗೆ ಮಾಯನ್ ಕ್ಯಾಲೆಂಡರ್ ಲಿಂಕ್ ಕಳುಹಿಸುತ್ತಿದ್ದೇನೆ...ಇದರಲ್ಲಿ ನಮ್ಮ ಕ್ಯಾಲಂಡರ್ ನಲ್ಲಿ ಡಿಸೆಂಬರ್ ೨೧, ೨೦೧೨ ಟೈಪ್ ಮಾಡಿ.....ನೀವೇ ನೋಡಿ ಇದು...ಮ್ಯಾಯನ್ ಕ್ಯಾಲಂಡರ್ ನ ಮೂಲ ಸೊನ್ನೆಯ ಗರಿಷ್ಟ್ ಸಂಖ್ಯೆ ೧೩ ಕ್ಕೆ ನಿಲ್ಲುತ್ತೆ ಮತ್ತು ..ಕ್ಯಾಲಂಡರ್....೧೩.೦.೦.೦.೦ ಗೆ ನಿಲ್ಲಿತ್ತೆ..!!!!
http://www.diagnosis2012.co.uk/mlink.htm

Friday, October 16, 2009

ಶಾಯರಿ-ಗುಟುಕು

ಖುದ್ ಖುಷಿ
ನ ಕರೋ ವಾರ್
ಕರ್ಕೆ ದಿಲ ಕೆ ಪಾರ್
ಮೀಠಿ ನಜ಼ರೋಂಕೆ ತೀರ್
ಬೈಠಿಹೋ ದಿಲ್ ಮೇ ಮೇರೆ
ಬನಾಕೆ ಉಸ್ಕೋ ಅಪ್ನಾ ಘರ್
ನ ಮಾನೋಗಿ ತುಮ ಅಗರ್
ತೊ ಹೋಜಾನ ತುಮ್
ಖುದ್-ಖುಷಿಕೋ ತಯ್ಯಾರ್

ಆತ್ಮಹತ್ಯೆ
ನನ್ನೆದೆ ಗೂಡಿಗೆ ಚುಚ್ಚಿ
ಕೊಲ್ಲಬೇಡವೇ ಹುಚ್ಚಿ
ಅದುವೆ ಗೂಡು ಅಲ್ಲಿಹಳೆನ್ನ ಗುಬ್ಬಚ್ಚಿ
ಕೇಳದೇ ಹೋದರೆ ಪೋರಿ
ನಿನ್ನಾತ್ಮಹತ್ಯೆಗೆ ನೀನೇ
ಮಾಡಿಕೊಳ್ಳುವೆ ದಾರಿ

ಇನ್ನೊಂದು ಜುಗಲ್ ಬಂದಿ - ಶೋಕಿ
ಶೌಖ್ ಥಾ ಸಿರ್ಫ್ ಬಾತ್ ಕರ್ನೇಕ
ಲಿಯಾ ಮೊಬೈಲ್ ಶಾದೀಸೆ ಪಹಲೆ
ಅಬ್ ಕ್ಯೊಂ ಐಸೆ ಲಗ್ ರಹಾ ಹೈ?
ಹೋಗಯೀ ಮಾಡಲ್ ಪುರಾನಿ
ಕ್ಯೋಂ ನ ಇಸ್ಕೋ ಬದಲ್ಲೇಂ?

ಮದುವೆಗೆ ಮುಂಚೆ ಶೋಕಿ ಮಾತನಾಡಲು
ಕೊಂಡಾಯ್ತು ಮೊಬೈಲೊಂದು ಮಾಡಲ್ಲು
ಇತ್ತೀಚಿಗೇಕೆ ಕೆರೆತ ಮನದಲ್ಲೂ ?
ಹೊಸದೊಂದು ಕೊಳ್ಳೋಣವೇ
ಹಳತಾಯ್ತು ಮಾಡಲ್ಲು.

ಭಂಡ
ದಸ್ ಮಿನಟ್ ಸೆ ಚೀಖ್-ಚೀಖ್
ಪೂಛ್ ರಹಾ ಹೂಂ ತುಮ್ಕೋ ಗುಂಡ
ಕೌನ್ ಆಯಾ ಪಹಲೆ
ಮುರ್ಗಿ ಕಿ ಅಂಡ?
ಚುಪ್-ಚಾಪ್ ಬೋಲಾ ಗುಂಡ
ಮುರ್ಗಿ ಹೊ ಯಾ ಅಂಡ
ಅಪ್ ಹೀ ನೆ ಕಹಾ ಥಾ ಮಾಸ್ಟರ್ ಜೀ
ಚುಪ್ ಹೋಜಾನ ತುಮ್ ಗುಂಡ
ಗರ್ ಪಾಲ ಪಡೆ ತುಮ್ಕೋ
ಕಿಸೀ ಮೂರ್ಖ್ ಸೆ
ಔರ್ ಸಾಮನೆ ಹೋ ಕೋಯಿ ಭಂಡ

ತುಂಟ
ಬೇಡ ನನಗವು ಓಲೆಯುಂಗುರ
ತೋಡಲಾರೆ ನೀನೇನೇ ಹೇಳು ಸುಂದರ
ದುಗುಡತುಂಬಿ ಕೇಳಿದ ಏಕೆ ನನ್ನ ಚಂದಿರ?
ನಿನ್ನ ತುಂಟತನ ಇವುಗಳದೂ
ಎಳೆದು ಪೀಡಿಸ್ತಾವಲ್ಲ ನನ್ನ ಕೂದಲ-ಗುಂಗುರ
(ಗೀತಾ ಅವರ ಮ್ಯೂಸಿಂಗ್ಸ್ ಪೋಸ್ಟ್ ಪ್ರಭಾವಿತ)

Wednesday, October 7, 2009

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ















(ಚಿತ್ರ: ಕೃಪೆ ಅಂತರ್ಜಾಲ)

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ.


ನಮ್ಮೆಲ್ಲರಿಗೆ ಇದು ಹೆಮ್ಮೆಯ ವಿಷಯ.
ಜೈಹಿಂದ್
ಇವರು ಪ್ರೊಟೀನುಗಳ ಉತ್ಪಾದನೆಗೆ ಬೇಕಾಗುವ ರೈಬೋಸೋಮು ಎಂಬ ನಮ್ಮ ಜೀವಕೋಶಾಂಶಗಳ ಕ್ರಿಯಾ-ಪ್ರಕ್ರಿಯಾ ವಿಧಾನಗಳ ಅಧ್ಯಯನ ಮಾಡಿದ್ದಾರೆ. ಈ ಪಾರಿತೋಷಕವನ್ನು ಮೂವರು ಹಂಚಿಕೊಳ್ಳುತ್ತಿದ್ದು, ಇವರು ಮಿಕ್ಕವರಿಗಿಂತ ಕಿರಿಯರು ಎನ್ನುವುದು ಗಮನಿಸಬೇಕಾದ ಅಂಶ. ಇವರ ಅಧ್ಯಯನ ಆಂಟೀಬಯೋಟಿಕ್ ಗಳು ರೈಬೋಸೋಮುಗಳ ಜೊತೆ ಕೂಡಿಕೊಳ್ಳುವ ಪ್ರಕ್ರಿಯೆಗೆ ಬೆಳಕನ್ನು ಚೆಲ್ಲಿದೆ ಆ ಮೂಲಕ ವಿವಿಧ ಜೀವರಕ್ಷಕ ಔಷಧಿಗಳಿಗೆ ಅದರ ಆವಿಷ್ಕಾರಕ್ಕೆ ದಾರಿಮಾಡಿಕೊಟ್ಟಿದ್ದಾರೆ.
ನಮ್ಮೆಲ್ಲರ ಅಭಿನಂದನೆಗಳು ಡಾ. ರಾಮಕೃಷ್ಣನ್ ಗೆ ಮತ್ತು ಅವರ ಪರಿವಾರಕ್ಕೆ..ಇಡೀ ದೇಶಕ್ಕೆ.

Tuesday, October 6, 2009

ಗೊತ್ತಿಲ್ಲ ಮಗು



ಅಪ್ಪಾ
ಏನುಮಗು?
ಮಳೆ ಬರಲಿಲ್ಲ ಅಂತ
ಹೋಮ ಹವನ ಮಾಡಿದ್ರಲ್ಲಾ
ಹೌದು ಮಗು
ಮತ್ತೆ ಮಳೆ ಜಾಸ್ತಿ ನಿಲ್ಲಲಿ ಅಂತ
ಹೋಮ ಹವನಾನ ಅಪ್ಪಾ?
ಹೌದು ಮಗು...
ಈಗ ದೇವರುಗಳಿಗೆ ಕನ್ಪ್ಯೂಸ್
ಆಗೊಲ್ಲವೇ?
ಗೊತ್ತಿಲ್ಲ ಮಗು?

ಅಪ್ಪಾ..ಮುಂದಕ್ಕೆ ..
ಹೇಳಪ್ಪಾ ನೀನು..
ಟೀವಿ-ನೈನ್ನೋರಿಗೆ
ಹವಾಮಾನ ಅಂತ ಹೇಳೋಕೆ ಬರೊಲ್ಲವೇ?
ಬರುತ್ತೆ ಮಗು
ಮತ್ತೆ ಯಾಕೆ ? ಅವಮಾನ ಇಲಾಖೆ ಅಂತಾರೆ?
ತಾವು ಅತಿ ಮಳೆ ಮಾಹಿತಿ ಸರ್ಕಾರಕ್ಕೆ
ಕೊಟ್ಟಿದ್ದೀವಿ ಅಂತಾರೆ..ಆದ್ರೂ ಜನಹಾನಿ ಆಯ್ತು
ಅದಕ್ಕೇ ಸರ್ಕಾರ ಅವಮಾನ ಇಲಾಖೆ ಅಂತ
ಹೆಸರು ಬದಲಾಯಿಸ್ತೇ?
ನಿಜವಾಗ್ಲೂ ಗೊತ್ತಿಲ್ಲ ಮಗು

ಹೋಗ್ಲಿ ಬಿಡು ಅಪ್ಪ..
ಮತ್ತೇನೋ ತರ್ಲೆ ನಿಂದು..?
ಮಳೆ ಬರ್ತಾಯಿದ್ದು..ಜನ ಪಡಬಾರದ ಅವಸ್ಥೆ
ಮನಸ್ಸು ಆಳುತ್ತಲ್ಲಪ್ಪಾ
ಹೌದು ಮಗನೇ
ಮತ್ತೆ ಬೆಳೆ-ಮನೆ-ಜೀವ ಹನಿಯಾಗ್ತಿದ್ದರೂ
ಅಧಿಕಾರಿಗಳು ರಜ-ಮಜಾ ಮಾಡ್ತಿದ್ದರಂತೆ?
ಹೌದು..ಹಬ್ಬದ ರಜೆಗಳಿದ್ದವಲ್ಲಾ..?
ಮತ್ತೆ ಸರ್ಕಾರ ಚಿಂತನೇಲಿ ಇತ್ತಂತೆ..?
ಗೊತ್ತಿಲ್ಲ ಮಗು.

Thursday, October 1, 2009

ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!!

ಸಿತಾರಾಂ ರವರ ಬ್ಲಾಗ್ ಓದಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು ಅದಕ್ಕೇ ಈ ಪೋಸ್ಟ್....
ಆದರೆ ನನ್ನ ಅನುಭವವೇ ಬೇರೆ. ನಾನು ಮೊದಲಿಗೆ ನೌಕರಿ join ಆಗಲು ಮಣಿಪುರಕ್ಕೆ ಹೋಗಿತ್ತಿದ್ದೆ. ಗೌಹಾತಿಯಿಂದ ದೀಮಾಪುರಕ್ಕೆ ಬೇರೆ ಟ್ರೈನನ್ನು ಹಿಡಿದು ಲೇಟಾಗಿ ತಲುಪಿದರಿಂದ ಆ ದಿನದ ಮಣಿಪುರಕ್ಕೆ ಹೋಗುವ ಬಸ್ಸುಗಳು ಹೋಗಿಯಾಗಿತ್ತು (ಬೆಳಿಗ್ಗೆ ೭.೩೦ ಒಳಗೆ ಬಸ್ ಸಿಗದಿದ್ದರೆ ಮತ್ತೆ ಮರು ದಿನವೇ). ಸರಿ ಅಲ್ಲಿಯೇ ಇದ್ದ ಸದರ್ನ ಹೋಟೆಲ್ (ಮದ್ರಾಸಿ ಹೋಟೆಲ್ ಅಂತಲೇ ಅದು ಪ್ರಸಿದ್ಧಿ) ನಲ್ಲಿ ರೂಂ ತಗೊಂಡೆ. ಆಗಲೇ ..ಈ ಗೋಪಾಲ ಅನ್ನುವವರ ಪರಿಚಯ ಆಗಿದ್ದು ..ಅವರು ತೀನ್ಸುಕಿಯಾ (ಪೂರ್ವ ಅಸ್ಸಾಂ) ಗೆ ಹೋಗಬೇಕಿತ್ತಂತೆ..ಆದ್ರೆ ದೀಮಾಪುರದಲ್ಲಿ ಇಳಿವಾಗ ಅವರ ಒಂದು ಬ್ಯಾಗನ್ನು ಯಾರೋ ಲಪಟಾಯಿಸಿದ್ದರಂತೆ..ವಾಪಸ್ ಟಿಕೆಟ್ ಸಹಾ ಬ್ಯಾಗಲ್ಲಿದ್ದು ಈಗ ವಾಪಸ್ಸಿಗೆ ಹಣ ಮತ್ತು ಟಿಕೆಟ್ ಇರಲಿಲ್ಲವಂತೆ..ಅವರು ನಾಗಮಂಗಲ (ಮಂಡ್ಯ) ಕಡೆಯವರು ತಮ್ಮ ತಮ್ಮನನ್ನು ನೋಡಲು ಹೋಗುತ್ತಿದ್ದುದು..ಮುನ್ನೂರು ರೂಪಾಯಿ ಕೊಡಿ ನನ್ನ ರಿಟರ್ನ್ ಟಿಕೆಟ್ ಮಾಡಿಸಿಕೊಂಡು ನನ್ನ ತಮ್ಮನ ಬಳಿ ಹಣ ತಗೊಂಡು ನಿಮಗೆ ಕಳುಹಿಸುತ್ತೆನೆ..ಅಂತ.. ಸರಿ ಕನ್ನಡಿಗರು ಅನ್ನೋ ಒಂದೇ ಕಾರಣಕ್ಕೆ (ದೂರದ ಊರಲ್ಲಿ ಕನ್ನಡ ಕೇಳಿಯೂ ಇರಬೇಕು) ನನ್ನ ಮಣಿಪುರದ ಆಡ್ರೆಸ್ ಸಹಾ ಕೊಟ್ಟೆ. ಮಾತನಾಡುತ್ತಾ ನನ್ನ ಹೊಸ ಕೆಲಸದ ಬಗ್ಗೆಯೂ ಹೇಳಿದ್ದೆ. ಸರಿ ..ಆ ಹಣದ ವಿಚಾರ ಎರಡು ತಿಂಗಳ ನಂತರ ಮರೆತೇ ಹೋಯಿತು..ನೀವು ಹೇಳಿದರಲ್ಲಾ ಹಾಗೇ ..ಇದು ನಡೆದದ್ದು ೧೯೮೬ ಮಾರ್ಚ್ ೧೯ರಂದು. ಮುಂದೆ..೧೯೮೬ರ ಡಿಸೆಂಬರ್ ನಲ್ಲಿ ಊರಿಗೆ ಅಕಸ್ಮಾತ್ ಹೋಗಬೇಕಾಗಿ ಬಂತು.. ಕಲ್ಕತ್ತಾವರೆಗೆ ಫ್ಲೈಟ್ ನಲ್ಲಿ ಹೋಗಿ ಅಲ್ಲಿಂದ ಟ್ರೈನ್ ಹಿಡಿಯುವ ಎಂದುಕೊಂಡೆ ಆದರೆ ಅಷ್ಟು ಹಣವಿರಲಿಲ್ಲ..ಸಂಬಳಕ್ಕೆ ಕಾಯುವ ಸಮಯವಿಲ್ಲ...ನನ್ನ ಸ್ನೇಹಿತರಲ್ಲಿ ಕೇಳಿ ತೆಗೆದುಕೊಳ್ಳೋಣ ಎಂದುಕೊಳ್ಳುವಾಗ ಮನಿ ಆರ್ಡರ್ ಬಂತು.ಗೋಪಾಲ್ ಅನ್ನೋರು ೫೦೦ ರೂಪಾಯಿ ಕಳುಹಿಸಿದ್ದಾರೆ ಎಂದ ಪರಿಚಯವಾಗಿದ್ದ ಪೋಸ್ಟ್ ಮ್ಯಾನ್. ನನಗೆ ನೆನಪೇ ಹೋಗಿತ್ತು..ನಂತರ ನೆನಪಾಯ್ತು..ಆದ್ರೆ ಇದೇನು ಸುಮಾರು ೮-೯ ತಿಂಗಳು ಬೇಕಾಯ್ತೇ ? ಕೇಳಿದೆ..ಆಗ ಪೋಸ್ಟ್ ಮ್ಯಾನ್ ಸಾರ್...ಈ ನಿಮ್ಮ ಮನಿಆರ್ಡರ್ ಪೂರ್ತಿ ಪೂರ್ವೋತ್ತರ ಏಳು ರಾಜ್ಯ ನೋಡಿ ಬಂದಿದೆ ಎಂದು ಅದರ ಮೇಲಿದ್ದ ಸೀಲುಗಳನ್ನೆಲ್ಲ ತೋರಿಸಿದ... ನಂತರ ತಿಳಿಯಿತು, ಗೋಪಾಲ್ ನನ್ನ ಆಡ್ರೆಸ್ ಚೀಟಿಯನ್ನು ಕಳೆದುಕೊಂಡಿದ್ದರಂತೆ...ಬರೀ ಹೆಸರು ಅದರಲ್ಲೂ ಪೂರ್ತಿ ಇಲ್ಲ ಆಜಾದ್, scientist, ICAR, Dimapur. ದಿಮಾಪುರ್ ಗೆ ಬಂದ MO ಅಲ್ಲಿನವರು ನಾಗಾಲ್ಯಾಂಡ್ ನ ನಮ್ಮ ICAR ಗೆ ಕಳುಹಿಸಿದರಂತೆ..ಅವರು ಇಲ್ಲಿ ಯಾರೂ ಇಲ್ಲ ಬಹುಷಃ ಇದು ಅರುಣಾಚಲ ICAR ಕೇಂದ್ರದ್ದಿರಬೇಕು ಅಂತ ರೀ ಡೈರೆಕ್ಟ್ ಮಾಡಿದ್ದರಂತೆ..ಅಲ್ಲಿ ಹೊಸದಾಗಿ ಸೇರಿದ್ದ ನನ್ನಂತಹ ಮಿತ್ರರೊಬ್ಬರು ನಮ್ಮ ICAR North-East ಮುಖ್ಯ ಕಚೇರಿ, ಷಿಲಾಂಗಿಗೆ redirect ಮಾಡಿದ್ದಾರೆ..ಅಲ್ಲಿ ನನ್ನ ವಿವರ ತಿಳಿದಿದ್ದರಿಂದ ಮತ್ತೆ redirect ಆಗಿ ಮಣಿಪುರಕ್ಕೆ ಬಂದಿತ್ತು.....!!!! ಅವರಿಗೆ ನನ್ನಿಂದ ೩೦೦ ತೆಗೆದುಕೊಂಡಿದ್ದೂ ಗೊತ್ತಾಗದೇ..೫೦೦ ಕಳುಹಿಸಿದ್ದರು..ಅವರ Adress ಇದ್ದಿದರಿಂದ ನಾನು ಬೆಂಗಳೂರು ತಲುಪಿದ ಮೇಲೆ..ಆ ೨೦೦ ರೂಪಾಯಿಯ ಜೊತೆಗೆ ದೊಡ್ದದೊಂದು ಪತ್ರ ಬರೆದೆ...ಮೊನ್ನೆ ಮೊನ್ನೆವರೆಗೂ ಅವರು letter ಬರೆಯುತ್ತಿದ್ದರು....
ಹೇಗೆ..?? ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!! ನನಗೆ ಇನ್ನೊಂದು ಸ್ನೇಹಿತರಲ್ಲಿ ಹೆಮ್ಮೆಯಾಗುವಂತೆ ಮಾಡಿದ ವಿಷಯ ಅವರು ಕನ್ನಡಿಗರು ಎಂಬುದು.