(ಚಿತ್ರಕೃಪೆ: ಅಂತರ್ಜಾಲ)
(ನನ್ನ ಮಿತ್ರ ರೆಲ್ಲರಿಗೆ ಶಿವರಾತ್ರಿಯ ಶುಭಕಾಮನೆಗಳು)
ಕ್ಷೀರ ಸಾಗರ ಮಂಥನ, ಎಂಥ ಚಿಂತನ?
ಮನದ ದುಗುಡಗಳ ನಿರಂತರ ಕದನ
ನಿನ್ನ-ಅವಳ, ನಿಮ್ಮ-ಮನೆಯವರ
ನಿನ್ನಮನೆ ಮನಗಳ-ಊರ ಮನದಂಗಳ
ನಿನ್ನ ಧರ್ಮ-ಪರ ಧರ್ಮ ಯಾಕೀ ಕರ್ಮ?
ನಿನ್ನಲ್ಲಿ ನೀನೇ ಹುಟ್ಟಿಸಿ ಬೆಳೆದು
ಎಲ್ಲೆಡೆ ಹರಿಸಿ ಸಲ್ಲ ಜಗವನೇ ಹಳಿದು
ಕೊನೆಯಾಗಲಿ ಚಿರವಾಗಲಿ ಮನು ಧರ್ಮ
ಅಂದು ಸುರಾಸುರ ಮನು ಕಲ್ಯಾಣಕೆ
ಕುಡಿದ ಶಿವ ಹಾಲಾಹಲವ ವಿಷಕಂಠನಾದ
ಬೂಟಾಟಿಕೆ ತೋರುವರು ಶಿವನ ಪೂಜೆ ಮಾಡಿ
ಕಾಟಾಚಾರ, ಢಾಂಬಿಕರು ಸಮಾಜವ ಕಾಡಿ
ಸುಡುವರು ಆಸ್ತಿ, ಕೋಲಾಹಲವೇ ಪೂಜೆ
ತಿಳಿಯದೇ ಕೊನೆಗಿದು ಬಡವನಿಗೇ ಆಗುವ ಸಜೆ?
ಲಯಕ್ಕೆ ಶಿವನ ಹೆಸರು ಕೊಟ್ಟವನು ನೀನಲ್ಲವೇ?
ನಿನಗೆ ಬೇಕು ನೆವ ಅವನ ಹೆಸರಲಿ ಮುಗ್ಧರ ಕಾಡಲಿಲ್ಲವೇ?
ಬಿಡು ಮಾನವ ಸ್ವಾರ್ಥವ, ಕಲಿ ಪಾರಮಾರ್ಥವ
ಮನೆ ಮನ ಸಮಾಜ ದೀನ ದಲಿತಂಗೆ ಆಗು ಪರಮಶಿವ
ಇದಲ್ಲವೇ ನಿನ್ನ ದೇವನೊಲಿಸಿಕೊಳ್ಳುವರೀತಿ?
ಮರೆತು ಕೋಲಾಹಲ, ಕಾದಾಟ ಕಾಡುವ ನೀತಿ.
(ನನ್ನ ಮಿತ್ರ ರೆಲ್ಲರಿಗೆ ಶಿವರಾತ್ರಿಯ ಶುಭಕಾಮನೆಗಳು)
ಕ್ಷೀರ ಸಾಗರ ಮಂಥನ, ಎಂಥ ಚಿಂತನ?
ಮನದ ದುಗುಡಗಳ ನಿರಂತರ ಕದನ
ನಿನ್ನ-ಅವಳ, ನಿಮ್ಮ-ಮನೆಯವರ
ನಿನ್ನಮನೆ ಮನಗಳ-ಊರ ಮನದಂಗಳ
ನಿನ್ನ ಧರ್ಮ-ಪರ ಧರ್ಮ ಯಾಕೀ ಕರ್ಮ?
ನಿನ್ನಲ್ಲಿ ನೀನೇ ಹುಟ್ಟಿಸಿ ಬೆಳೆದು
ಎಲ್ಲೆಡೆ ಹರಿಸಿ ಸಲ್ಲ ಜಗವನೇ ಹಳಿದು
ಕೊನೆಯಾಗಲಿ ಚಿರವಾಗಲಿ ಮನು ಧರ್ಮ
ಅಂದು ಸುರಾಸುರ ಮನು ಕಲ್ಯಾಣಕೆ
ಕುಡಿದ ಶಿವ ಹಾಲಾಹಲವ ವಿಷಕಂಠನಾದ
ಬೂಟಾಟಿಕೆ ತೋರುವರು ಶಿವನ ಪೂಜೆ ಮಾಡಿ
ಕಾಟಾಚಾರ, ಢಾಂಬಿಕರು ಸಮಾಜವ ಕಾಡಿ
ಸುಡುವರು ಆಸ್ತಿ, ಕೋಲಾಹಲವೇ ಪೂಜೆ
ತಿಳಿಯದೇ ಕೊನೆಗಿದು ಬಡವನಿಗೇ ಆಗುವ ಸಜೆ?
ಲಯಕ್ಕೆ ಶಿವನ ಹೆಸರು ಕೊಟ್ಟವನು ನೀನಲ್ಲವೇ?
ನಿನಗೆ ಬೇಕು ನೆವ ಅವನ ಹೆಸರಲಿ ಮುಗ್ಧರ ಕಾಡಲಿಲ್ಲವೇ?
ಬಿಡು ಮಾನವ ಸ್ವಾರ್ಥವ, ಕಲಿ ಪಾರಮಾರ್ಥವ
ಮನೆ ಮನ ಸಮಾಜ ದೀನ ದಲಿತಂಗೆ ಆಗು ಪರಮಶಿವ
ಇದಲ್ಲವೇ ನಿನ್ನ ದೇವನೊಲಿಸಿಕೊಳ್ಳುವರೀತಿ?
ಮರೆತು ಕೋಲಾಹಲ, ಕಾದಾಟ ಕಾಡುವ ನೀತಿ.