Saturday, January 1, 2011

ದೀಕ್ಷೆ

ಈ ವರ್ಷ ಪ್ರತಿ ವರ್ಷ
ಹೊಸ ಹೊಸತು ತರಲಿ
ಈ ಬೆಳಗಿನಾನಂದ ಪ್ರತಿ ಬೆಳಗೂ ಇರಲಿ

ಕನ್ನಡತೆ ನನ್ನಡತೆ
ಎಲ್ಲರಲೂ ಬರಲಿ
ದಿನದೀಕ್ಷೆ ಬೇಕಿಲ್ಲ ಎಲದಿನವೂ ಇರಲಿ

ನಿನ್ನಿಂದ ಆನಂದ
ನಂದನವ ಬೆಳೆಸು
ಚಂದನದ ನಾಡಲ್ಲಿ ಕನ್ನಡವನುಳಿಸು

ನಾಡಲ್ಲಿ ನೋಡಿಂದು
ಅಳುತಿಹಳು ತಾಯಿ
ಉಳುವವನ ಗೇಯ್ಮೆಯಲಿ ನಡುವನದೇ ಬಾಯಿ

ಒಳಹೊರಗೂ ಪ್ರತಿಭೆಯಿದೆ
ಪ್ರಜ್ವಲಿಸಿ ಮೆರೆಸು
ಮೆರೆದಿಹರು ನಮ್ಮವರು, ಹೆಸರಿಂದು ಉಳಿಸು

ಆಳುವವ ಬೀಳುತಿಹ
ಗೋಳಾಯ್ತು ಹಗಲು
ನೀನಾರಿಸಿ ಕಳಿಸಿರುವೆ ನಿನದಾಯ್ತು ಸೋಲು

ನಿನ ಕೈಲೇ ಇದೆಯಲ್ಲ
ಎಲ್ಲದಕೂ ಕೀಲಿ
ಒತ್ತಿ ಬಿಡು, ಬಿತ್ತಿ ಬಿಡು, ಹಾಕಿಬಿಡು ಬೇಲಿ