Thursday, March 3, 2011

ನಂಗೊತ್ತಿಲ್ಲ ಮಗು

(ಚಿತ್ರ ಕೃಪೆ: ಅಂತರ್ಜಾಲ)
ನಂಗೊತ್ತಿಲ್ಲ ಮಗು

ಅಪ್ಪಾ ..
ಏನು ಪುಟ್ಟಾ?
ಕನಸಿನ ಕನ್ಯೆ ಅಂದ್ರೆ ಏನಪ್ಪಾ..?
ಅಂದ್ರೆ ,.. ಡ್ರೀಮ್ ಗರ್ಲ್ ಅಂತಾ
ಹಂಗಂತ ನಮ್ಮ ಎಮ್ಮೆ ಎಲ್ಲೇ ಒಬ್ರು ಇಲ್ಲಿಗೆ
ಬಂದಿದ್ರಲ್ಲಾ ಆಂಟಿ ಒಬ್ರು ಅವರನ್ನ ಕೇಳಿದ್ದಕ್ಕೆ
ಅವ್ರು ಮಂಕಾಗಿ ಮೇಲೆ ಕೆಳಗೆ ನೋಡಿದ್ರು...??!!
ಅವ್ರಿಗೆ ಕನ್ನಡ ಬರೊಲ್ಲ ಅಲ್ವಾ ಅದಕ್ಕೆ..
ಮತ್ತೆ ಅವರನ್ನ  ಕನ್ನಡಿಗರು ಯಾಕೆ ಆಯ್ಕೆ ಮಾಡಿದ್ದು ಅಪ್ಪಾ
ನಮ್ಮಲ್ಲಿ ಅಂತಹ ಕನ್ನಡಿಗರೇ ಇಲ್ವಾ...?
ನಂಗೊತ್ತಿಲ್ಲ ಮಗು.

ಅಪ್ಪಾ...ಇನ್ನೊಂದು ಸಂದೇಹ...!!
ಏನಪ್ಪ ಅದು ನಿನ್ನ  ಡೌಟು?
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ
ನಾರಾಯಣ ಮೂರ್ತಿಯವರನ್ನ ಆಹ್ವಾನಿಸಿದ್ದಾರಂತೆ?
ಹೌದು ಕಣೋ ಅವರು ನಮ್ಮ ಬೆಂಗಳೂರನ್ನ ಭೂಪಟದಲ್ಲಿ ಎದ್ದು ಕಾಣೋಹಾಗೆ ಮಾಡಿದ ಮಹಾನ್ ಉದ್ಯಮಿ ಅಲ್ಲವಾ ಅದಕ್ಕೆ..
ಮತ್ತೆ ..ಕನ್ನಡ ಸಮ್ಮೇಳನಕ್ಕೆ ಕನ್ನಡ ಸಾಹಿತಿ ಕಲಾವಿದರು
ಸಿಗಲಿಲ್ಲವಾ..? ಮತ್ತೆ ಹೇಮಾಮಾಲಿನಿ ಆಂಟಿಗೇ ಹೇಳ್ಬಹುದಿತ್ತು
ನಂಗೊತ್ತಿಲ್ಲ ಮಗು