Monday, January 18, 2010

ಮೂರು ಮುತ್ತುಗಳು



ಮೂರು ಮುತ್ತುಗಳು

ಮೈಸೂರಿಗೆ ಬಿತ್ತು ಮತ್ತೊಂದು ಪೆಟ್ಟು

ಕೆ.ಎಸ್. ಅಶ್ವಥ್ ಹೋದರು ನಮ್ಮ ಬಿಟ್ಟು

ಚಾಮಯ್ಯ ಮೇಷ್ಟ್ರನ್ನು ಕಾಡಿತು ಶಿಷ್ಯನ ಅಗಲಿಕೆ

ಬೇಸರಿಸಿ ಇನ್ನೆಲ್ಲಿ ಶಿಷ್ಯ ಪಾಠವ ಕಲಿಯೋಕೆ?

ಕನ್ನಡ ಚಲನಚಿತ್ರ ಮತ್ತು ಕಲೆಗೆ ಅಪಾರ ಹಾನಿ

ಎರಡೇ ತಿಂಗಳಲ್ಲಿ ಮೂರು ಮುತ್ತು ಆದವು ಮೌನಿ

35 comments:

  1. ನಿಜ ಸರ್..
    ಮೂರು ಮುತ್ತು ಆದವು ಮೌನಿ ....
    ........................

    ReplyDelete
  2. ನಾಗರ ಹಾವು ಖ್ಯಾತಿಯ ಚಾಮಯ್ಯ ಮೇಷ್ಟ್ರು ಕೆ.ಎಸ್. ಅಶ್ವಥ್ ಕಾಲದಲ್ಲಿ ಲೀನ ಸುದ್ದಿ ತಿಳಿದು ಮನ ಮುಕವಾಯಿತು...
    ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ....
    ಮೂರು ಸಹ ಮುತ್ತುಗಳು....
    ಅವರ ಆತ್ಮಕ್ಕೆ ಶಾಂತಿ ಸಿಗಲಿ...

    ReplyDelete
  3. ಹೌದು. ಕನ್ನಡದ ಮೂರು ಅಮೂಲ್ಯ ಮುತ್ತುಗಳನ್ನು ನಾವು ಕಳೆದುಕೊಂಡೆವು.

    ReplyDelete
  4. ವಿಜಯಶ್ರೀ ಮೇಡಂ, ಯಾಕೋ ಈ ಮಧ್ಯೆ, ಟೀವಿ ನೋಡೊದೇ ಬೇಡ ಅನ್ಸಿಬಿಟ್ಟಿದೆ.....ಡಿಸೆಂಬರ್ ಮತ್ತು ಜನವರಿ ಕನ್ನಡಕ್ಕೆ ಅಪಾರ ಹಾನಿ ಮಾಡಿದ ಮಾಸಗಳು...

    ReplyDelete
  5. This comment has been removed by the author.

    ReplyDelete
  6. ಮಹೇಶ ನಿಮ್ಮ ಮಾತು ನಿಜ, ಚಾಮಯ್ಯ ಮೇಷ್ಟ್ರು ತಮ್ಮ ನೆಚ್ಚಿನ ಶಿಷ್ಯನ್ನ ಕಳಕೊಂಡು ಬೇಸರವಾಗಿ ಇಹಲೋಕ ಬೇಡ ಅಂತ ನಮ್ಮನ್ನ ಬಿಟ್ರು ಅನ್ನಿಸುತ್ತೆ

    ReplyDelete
  7. ಅಜಾದ್ ಸರ್,
    ನಿಜ ಸರ್, ಅವರ ಯಾವುದೇ ಪಾತ್ರ ನೋಡಿದರೆ ಅವರು ಅಭಿನಯಿಸಿದ್ದಾರೆ ಎನಿಸುವುದೇ ಇಲ್ಲಾ.... ಅಷ್ಟು ಸಹಜವಾಗಿ ಪಾತ್ರವಾಗಿಬಿಡುತ್ತಿದ್ದರು..... ಅವರಿಗೆ ಅವರೇ ಸಾಟಿ...... ಅವರ ಅಪ್ಪನ, ಅಜ್ಜನ ಪಾತ್ರಗಳಂತೂ ಸೂಪರ್..... ಅವರ ಆತ್ಮಕ್ಕೆ ಶಾಂತಿ ಕೊಡಲೆಂದುಪ್ರಾರ್ಥಿಸೋಣ.....

    ReplyDelete
  8. ಸುನಾಥ್ ಸರ್- ನಾವು ಕಂಡಂತೆ ಅಶ್ವಥ್, ಬಾಲಣ್ಣ, ಸಂಪತ್, ಲೋಕನಾಥ್ ಇವರೆಲ್ಲಾ ಸೌಜನ್ಯ ವರ್ತನೆ ಅಂದ್ರೆ ಏನು ಅಂತ ತೆರೆಮೇಲೆ ಮತ್ತೆ ತೆರೆಹಿಂದೆ ತೋರಿಸಿದವರು, ಪೋಷಕ ಪಾತ್ರಗಳನ್ನು ಪೋಷಿಸಿದರೂ..ಇವರ ಪೋಷಣೆಯ ಲೋಪದಿಂದ ಕೊರಗಬೇಕಾಗಿರುವುದು ಕನ್ನಡ ಸಿನಿಮಾ ರಂಗ. ಕೊನೆಗಾಲದಲ್ಲಿ ಬಹಳ ನೋವುಂಡ ಜೀವ ಅಶ್ವಥ್ ರದು...ದೇವರು ಅವರ ಆತ್ಮಕ್ಕೆ ಚಿಶಾಂತಿನೀಡಲಿ ನೀಡಲಿ ಎಂದು ಪ್ರಾರ್ಥಿಸೋಣ.

    ReplyDelete
  9. ದಿನಕರ್ ಅವರ ಪಾತ್ರಗಳು ಎಷ್ಟು ಇಷ್ಟವಾಗಿದ್ದವೋ ನನಗೆ ಅವರ ವ್ಯಕ್ತಿತ್ವವೂ ಅಷ್ಟೇ ಇಷ್ಟವಾಗಿದ್ದು. ಅವರ ಭಾವ ಪರವಶ ಅಭಿನಯ ಮೆಚ್ಚುವಂತಹುದು. ಅದರಲ್ಲೂ ಅಸಹಾಯಕ, ಕರ್ತವ್ಯನಿಷ್ಟ, ಅಭಿಮಾನಿ ಇಂತಹ ಭಾವಪೂರಿತ ಅಭಿನಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚಾಮಯ್ಯ ಮಾಸ್ತರು ಒಂದು ಧೃವದಂತೆ ಬಿಂಬಿತವಾದ ಚಿತ್ರ ನಾಗರಹಾವು. ಕನ್ನಡ ಚಲನಚಿತ್ರ ಲೋಕಕ್ಕೆ ಅಪಾರ ನಷ್ಟ...ಈ ಮೂರು ಮೇರು ವ್ಯಕ್ತಿತ್ವಗಳ ಅಗಲುವಿಕೆಯಿಂದಾಗಿದೆ.

    ReplyDelete
  10. "ಅಗಲಿದ ಹಿರಿಯ ಪೋಷಕ ನಟ ಅಶ್ವಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ... ಕನ್ನಡ ಚಿತ್ರರಂಗ ಒಳ್ಳೊಳ್ಳೆ ಮುತ್ತುಗಳನ್ನು ಕಳೆದುಕೊಳ್ಳುತ್ತಿರುವುದು ದುಃಖದಾಯಕ"

    ReplyDelete
  11. ಅಗಲಿದ ಹಿರಿಯ ಪೋಷಕ ನಟ ಅಶ್ವಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ..
    ಅವರ ಅಗಲುವಿಕೆಯಿಂದಾಗಿ ನ್ನಡ ಚಲನಚಿತ್ರ ಲೋಕಕ್ಕೆ ಅಪಾರ ನಷ್ಟ..

    ReplyDelete
  12. ನಟ ಅಶ್ವಥ್ ಅವರ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತೇನೆ.

    ReplyDelete
  13. houdu sir kalasarasvatige apara nasta

    ReplyDelete
  14. ಮಂಜು, ಅಶ್ವಥ್ ಅಭಿನಯ ಸಾಮರ್ಥ್ಯವನ್ನು ನೋಡಬೇಕೆಂದರೆ ಅವರ ಹಳೆಯ ಚಿತ್ರಗಳನ್ನು ನೋಡಬೇಕು...ಚಾಮಯ್ಯ ಮೇಷ್ಟ್ರು...ಹ್ಯಾಟ್ಸ್ ಆಫ್...

    ReplyDelete
  15. ಸೀತಾರಾಂ ಅವರ ಕೊನೆಯದಿನಗಳು ಬಹಳ ಕಷ್ಟದಿಂದ ನಡೆದವು ಎನ್ನುವುದು ನೋವಿನ ಅಂಶ...ಅವರ ಆತ್ಮಕ್ಕೆ ಶಾಂತಿಕೋರೋಣ

    ReplyDelete
  16. ಮನಮುಕ್ತಾ ನಮ್ಮ ನಿಮ್ಮೊಂದಿಗೆ ನಮ್ಮ ಸಮಸ್ತ ಕನ್ನಡ ಜನತೆಯಿದೆ ಎಮ್ದುಕೊಳ್ಳುತ್ತೇನೆ

    ReplyDelete
  17. ಮನಸು ಮೇಡಂ ಅಶ್ವಥ್ ರವರ ಸಮಕಾಲೀನರು ಬಹುಶಃ ಯಾರೂ ಉಳಿದಿಲ್ಲ...ಇದೂ ಒಂದು ಅವರ ಕೊರಗಾಗಿತ್ತೋ ಏನೋ..ಅಲ್ವೇ..?

    ReplyDelete
  18. ಗುರು, ನಿಮ್ಮ ಮಾತು ನಿಜ ಪೆಟ್ಟು ಮೇಲಿಂದ ಮೇಲೆ ಬಿದ್ದರೆ ಸಣ್ಣ ರೋಗವೂ ದೊಡ್ದದಾಗುತ್ತದಂತೆ...ಬಾಲಣ್ಣ, ರಾಜ್, ಸಿ.ಅಶ್ವಥ್, ವಿಷ್ಣು ಹೀಗೆ ಹಲವು ಸ್ನೇಹಿತರ ಅಗಲಿಕೆ ಅವರನ್ನು ಇನ್ನೂ ಹಣ್ಣು ಮಾಡಿತ್ತೋ ಏನೋ..?

    ReplyDelete
  19. ಆಝಾದ್ ಭಾಯ್...

    ಇಂದು ಬೆಳಿಗ್ಗೆ ಸುದ್ಧಿ ಕೇಳಿ ದಿನವಿಡಿ ನನ್ನ ಮೂಡ್ ಹಾಳಾಗಿತ್ತು...

    "ತಂದೆಯೆಂದರೆ ಹೀಗಿರ ಬೇಕು" ಅನ್ನುವಂಥಹ ಅಭಿನಯ ಅವರದ್ದು...!

    ನಿಜ ಜೀವನದಲ್ಲೂ ಸಜ್ಜನರು...

    ಬಹಳ ಬೇಸರವಾಗಿದೆ....

    ReplyDelete
  20. ಸಾವಂತೂ ಅನಿವಾರ್ಯ....ಆದ್ರೆ ಒಳ್ಳೆಯವರಿಗೆ ಏಕೆ ಬರುತ್ತೋ ಅನ್ನಿಸುತ್ತೆ.....ಇಂಥಾ ಕಲಾವಿದರನ್ನು ನಾವೆಂದೂ ನೋಡಲು ಸಾಧ್ಯವಿಲ್ಲ,,

    ReplyDelete
  21. ಪ್ರಕಾಶ್, ಯಾಕೋ ಎಡವಟ್ಟು ಟ್ರೈಮಿಸ್ಟರ್ ನಡಿತಿದೆ ಕನ್ನಡಕ್ಕೆ...ನಿಜ ತಂದೆ ಪಾತ್ರದಲ್ಲಿ ಸೂಪರ್ ಅಭಿನಯ ಅವರದ್ದು....

    ReplyDelete
  22. ಸುಭ ಸರ್, ಹತ್ತಿರ ಹತ್ತಿರ ನಾನೂರು ಸಿನಿಮಾ ಮಾಡಿದ್ದ ಅಶ್ವಥ್ ರಾಜ್ ಜೊತೆಗೆ ೭೦ ಕ್ಕೂ ಹೆಚ್ಚು ಚಿತ್ರ ಮಾಡಿದ್ರು ಅಂದ್ರೆ ...ಆಶ್ಚರ್ಯವಾಗುತ್ತೆ. ಬಾಲಣ್ಣ, ಸಂಪತ್ ಮತ್ತು ಅಶ್ವಥ್ ಅಪೂರ್ವ ಕಲಾವಿದರು.

    ReplyDelete
  23. ಕೆ.ಎಸ್. ಅಶ್ವಥ್ ಅವರ ನಾಗರ ಹಾವು ಚಿತ್ರದ ಪಾತ್ರ ಇನ್ನು ನನ್ನ ಕಣ್ಮುಂದೆ ಇದೆ... ಅಬ್ಬಾ...!
    ವಿಷಯ ಕೇಳಿ ತುಂಬಾ ಬೇಜಾರ್ ಆಯಿತು... :(

    ReplyDelete
  24. ವಿಷಯ ತಿಳಿದು ಬೇಜಾರಾಯ್ತು .. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ತಿಳಿದು ಎಲ್ಲ ಹೊರಟೆ ಬಿಟ್ರು .. :-(

    ReplyDelete
  25. ಆಜಾದ್
    ನಿಜ. ಯಾಕೋ ಡಿಸೆಂಬರ್ - ಜನವರಿಗಳು ಬಹಳ ದುಃಖ ತಂದಿವೆ ! ಕನ್ನಡಕ್ಕಂತೂ ತುಂಬಲಾಗದ ಹಾನಿಯೇ ಸರಿ !

    ReplyDelete
  26. ಮೊದಲ ಆಘಾತ ಗಾಯಕ ಸಿ.ಅಶ್ವತ್ಥ್ ಅವರ ನಿಧನ. ಮರುದಿನವೇ ವಿಷ್ಣುವರ್ಧನ್ ಹೊರಟುಬಿಟ್ಟರು. ರಾಮಾಚಾರಿಯೇ ಹೋದಮೇಲೆ ಇನ್ನೇಕೆ ತಡ ಎಂದು ಚಾಮಯ್ಯ ಮೇಷ್ಟ್ರು ಕೂಡ ಹೊರಟೇ ಬಿಟ್ಟರು. ದೊಡ್ಡ ಹೊಡೆತ ಕನ್ನಡ ಚಿತ್ರರಂಗಕ್ಕೆ.

    ReplyDelete
  27. ಸರ್,
    ಏನಾಗಿದೆ ಕನ್ನಡ ಚಲನ ಚಿತ್ರರಂಗಕ್ಕೆ
    ಮೂರು ಮೂರು ರತ್ನಗಳು ಅಗಲಿ ಹೋದರು
    ಅವರಿಗೆ ನಮ್ಮ ಒಂದು ನಮನಗಳು

    ReplyDelete
  28. ರಾಘು, ಈ ದಿನ ಶ್ರೀರಂಗಪಟ್ಟಣದ ಬಳಿ ಕಾವೇರಿಗೆ ಚಿತಾ ಭಸ್ಮ ಬಿಡುವಾಗ ಅಶ್ವಥ್ ರ ಮಗ ಅಶೋಕ ಅಶ್ವಥ್, ತನ್ನ ತಂದೆ ಕಡೆಯ ದಿನಗಳಲ್ಲಿ ಪಟ್ಟ ಪಾಡಿನ ಬಗ್ಗೆ ಹೇಳಿ ಕಣ್ಣೀರು ಹಾಕಿಕೊಂಡರು. ನಮ್ಮ ಮನೋರಂಜನೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು, ಸುಖವನ್ನು ಕಡೆಗಣಿಸುವ ಈ ಕಲಾವಿದರಿಗೆ ತಮ್ಮ ಕಡೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನ ಕಾರಣ ಪಾಡು ಪಡಬೇಕಾಗಿರುವುದು ನಿಜಕ್ಕೂ ದುರ್ದೈವ. ಇವರ ಕಲ್ಯಾಣಕಾಗಿ ಸರ್ಕಾರವಾದರೂ ಕ್ರಮ ಕೈಗೊಳ್ಳಬೇಕು.

    ReplyDelete
  29. ರಂಜು, ಈ ಪ್ರಕೃತಿ ನಿಯಮವೇ ವಿಚಿತ್ರ ..ನಾವೆಲ್ಲಾ ಎರಡೆ ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿ ಎಂದುಕೊಳ್ಳುತ್ತಿದ್ದಂತೆ, ಈ ದಿನ ಶುಭ ಸಮಾಚಾರ...ಕನ್ನಡಿಗ ಮೂರ್ತಿಯವರಿಗೆ ದಾದಾ ಸಹೇಬ್ ಫಾಲ್ಕೆ ಪುರಸ್ಕಾರ ಸಿಕ್ಕಿರುವುದು...... ಅಗಲಿದ ಆತ್ಮಗಳ ಕೋರೊಕೆಯೇನೋ....ದೇವರೆ ನಮ್ಮ ಅಗಲುವಿಕೆಯ ನಷ್ಟ ಕನ್ನಡಕ್ಕೆ ಏನಾದರೂ ಒಳ್ಳೆಯದಾಗಲಿ ಎಂದು ಕೋರಿಕೊಂಡರೋ ಏನೋ...? ಅಲ್ಲವಾ?

    ReplyDelete
  30. ಚಿತ್ರಾ, ನಿಜ ನೋಡಿ ...ಗ್ರಹಣವೂ ಇದೇ ಸಮಯಕ್ಕೆ...!! ಈಗ ಆಗ್ತಿರೋದು ಸಾಲದು ಎನ್ನೋ ಹಾಗೆ...ಏನಂತೀರಿ..?

    ReplyDelete
  31. ದೀಪಸ್ಮಿತಾ...ಆಘಾತಗಳ ಸರಣಿ...ಬರುವ ಸಮಯವಾದರೂ ಶುಭಕಾರಿಯಾಗುತ್ತೆ ಅನ್ನೋ ಆಶಾಭಾವ ಮೂಡಲಿ ಅಂತ ಈಗ ಕನ್ನಡಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ....ಬೇಸರದ ಸಮಯದಲ್ಲಿ ಒಂದು ಮುಗುಳ್ನಗೆ...

    ReplyDelete
  32. ಗುರು, ನಮ್ಮ ಹಿರಿ ಕಲಾವಿದರ ಸೌಜನ್ಯಪೂರ್ಣ ವರ್ತನೆ ಕಿರಿಯರಿಗೆ ಮಾದರಿ, ಅಶ್ವಥ್ ರವರ ಶಿಸ್ತಿನ ನಡವಳಿಕೆ ಮತ್ತು ಸಮಯ ಶೀಲತೆ ನಮ್ಮ ಯುವ ಪೀಳಿಗೆ ಕಲಿತು ಕೊಳ್ಳಬೇಕಾದ ಅಂಶಗಳು.

    ReplyDelete
  33. ಏನು ಹೇಳಲೂ ತೋರುತ್ತಿಲ್ಲ. ಅಶ್ವತ್ಥದ ಮರದಂತೆ ಬಾಳಿ ಬದುಕಿದವರಾಗಿದ್ದರು ಈ ಮೂವರು :(:(:(

    ReplyDelete
  34. ತೇಜಸ್ವಿನಿ, ಅಶ್ವಥ ಮರದಂತೆ ಎನ್ನುವುದು ಬಹಳ ಸಮಂಜಸ ಉಪಮೆ. ಇವರ ಭಾರೀ ವ್ಯಕ್ತಿತ್ವ, ಸಜ್ಜನಿಕೆ ಇತ್ಯಾದಿ ಈಗಿನವರು ಮೈಗೂಡಿಸಿಕೊಳ್ಳಬೇಕಾದ ಗುಣಗಳು..

    ReplyDelete