Friday, September 25, 2009

ಪುನರ್ಜನ್ಮ – ಪುನರಪಿ ಜನನಂ ಪುನರಪಿ ಮರಣಂ















ಎಸ್.ಎಲ್.ಭೈರಪ್ಪನವರ ನಾಯಿನೆರಳು ನಾನು ಎರಡನೇ ವರ್ಷ ಬಿ.ಎಫ್.ಎಸ್ಸಿ (ಬ್ಯಾಚುಲರ್ ಅಫ್ ಫಿಶರೀಸ್ ಸೈನ್ಸ್) ಯಲ್ಲಿದ್ದಾಗ ನನ್ನ ಸ್ನೇಹಿತನ ಒತ್ತಡಕ್ಕೆ ತಂದು ಓದಲು ಪ್ರಾರಂಭಿಸಿದ್ದೇ ..ಅದನ್ನು ಮುಗಿಸಿಯೇ ಮಲಗಿದ್ದು..!!! ಕಾದಂಬರಿಯ ಬರವಣಿಗೆ ಮತ್ತು ಓದಿಸಿಕೊಂಡು ಹೋಗುವ ಕಥೆ ಹಾಗೂ ಕಥೆಗಾರನ ಶೈಲಿ (ನನಗೆ ಲೇಖಕನ ಬಗ್ಗೆ ಹೆಚ್ಚು ಅರಿವು ಮೂಡಿದ್ದು ನಂತರವೇ..ಆದ್ದರಿಂದ ಭೈರಪ್ಪನವರ ಹೆಸರಿಂದ ಪ್ರೇರಿತ ಎನ್ನುವಂತಿಲ್ಲ) ನನ್ನ ಆ ನಾನ್-ಸ್ಟಾಪ್ ಮ್ಯಾರಥಾನ್ ಗೆ ಕಾರಣ. ನನ್ನ ಸ್ನೇಹಿತನಿಗೆ ಮರುದಿನ ಬೆಳಿಗ್ಗೆ.. “ಬಹಳ ಚನ್ನಾಗಿದೆಯೋ ಕಾದಂಬರಿ..” ಎಂದುದಕ್ಕೆ ..ಅವನೋ ..ಸ್ಥಬ್ಧ...!!!! “ಸಂಜೇನೇ ಅಲ್ವೇನೋ ತಂದಿದ್ದು ಲೈಬ್ರರಿಯಿಂದ..?? ಅಷ್ಟು ಬೇಗ ಓದ್ಬಿಟ್ಯಾ??” ಹುಬ್ಬೇರಿತ್ತು ಅವಂದು.
ಈಗ ಅದೇ ಕಾದಂಬರಿ ಆಧಾರಿತ ಅದೇ ಹೆಸರಿನ ಚಲನಚಿತ್ರಕ್ಕೆ ಪವಿತ್ರಾ ಲೋಕೇಶ್ ಅದ್ಭುತ ಅಭಿನಯಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದೆ ಒಂದೆರಡು ವರ್ಷಕ್ಕೆ ಹಿಂದೆ. ಕಥಾ ವಸ್ತು..ಪುನರ್ಜನ್ಮದ್ದೇ... ಹಲವಾರು ಚಲನಚಿತ್ರಗಳು ಬಂದಿವೆ..ಬಾಲಿವುಡ್, ಸ್ಯಾಂಡಲ್ವುಡ್ ಎಲ್ಲ ವುಡ್ ಗಳಲ್ಲೂ ಬಹುಶಃ. ಇವನ್ನು ಕಂಡವರಿಗೆ ಕಾಡುವುದು...ಸತ್ತಮೇಲೆ ಮನುಷ್ಯ ಮತ್ತೆ ಹುಟ್ಟುತ್ತಾನೆಯೇ..? ಪುನರ್ಜನ್ಮ ಎಂಬುವುದಿದೆಯೇ? ಅದು ಹೇಗೆ ಸಾಧ್ಯ..?? ಅಥವಾ ಇದೊಂದು ಗಿಮಿಕ್ಕೇ?? ಇತ್ಯಾದಿ...
ನಮ್ಮ ಪುರಾಣಗಳು ದೇವತಾ ಸ್ವರೂಪರಿಗೆ ಅವತಾರಗಳನ್ನು ಕೊಟ್ಟು ದೇವತೆಗಳು ಹಲವಾರು ರೂಪಗಳಲ್ಲಿ ಬಂದರು ಎಂದು ಹೇಳುತ್ತವೆ. ಇಲ್ಲಿಯೂ ಕೆಲ ಅವತಾರಗಳು ತಮ್ಮ ಜನ್ಮದ ಬಗ್ಗೆ ತಾವೇ ಹೇಳುವುದು ಕಡಿಮೆಯೇ..ಉದಾಹರಣೆಗೆ ..ರಾಮಾವತಾರ...? ಆದರೆ ಅದೇ ವಿಷ್ಣುವಿನ ಅವತಾರವೆಂದೇ ಪ್ರಸಿದ್ಧಿಯಾಗಿರುವ ಬುದ್ಧ ತನ್ನ ಪುನರ್ಜನ್ಮದ ಬಗ್ಗೆ ನಿಖರವಾಗಿ ಹೇಳುತ್ತಾನೆ...ಹಾಗೆ ನೋಡಿದರೆ..ಪುನರ್ಜನ್ಮದ ಬಗ್ಗೆ ನಿಖರವಾಗಿ ಸೈದ್ಧಾಂತಿಕವಾಗಿ ನಂಬುವುದು ಬೌದ್ಧ ಧರ್ಮವೇ? ಹಿಂದೂ ಧರ್ಮ ಇದನ್ನು ಮೊದಲೇ ಪ್ರತಿಪಾದಿಸಿದೆ.

ಪುನರ್ಜನ್ಮ – ಕಟ್ಟು ಕಥೆಯೇ? ವಾಸ್ತವವೇ??
ಸಾವಿನ ನಂತರ ಮತ್ತೊಂದು ಜನ್ಮ ಇದೆಯೇ? ಅದೇ ಜೀವಿ ಮತ್ತೆ ಹುಟ್ಟುತ್ತದೆಯೇ? ಎನ್ನುವುದು ಹಲವರು ಘಟನಾವಳಿಗಳನ್ನು ನೋಡಿರುವವರಲ್ಲಿ ಅಥವಾ ಕೇಳಿರುವವರಲ್ಲಿ ಕೌತುಕ ಕೆರಳಿಸುವ ಪ್ರಶ್ನೆಗಳು.
ಇನ್ನು ಧರ್ಮಗಳ ಪ್ರಕಾರ, ಕೇವಲ ಹಿಂದೂ ಧರ್ಮ ಸೈದ್ಧಾಂತಿಕವಾಗಿ ಪುನರ್ಜನ್ಮವನ್ನು ಪ್ರತಿಪಾದಿಸಿತು..ಅದೇ ನಿಟ್ಟಿನಲ್ಲಿ ಬೌದ್ಧ ಧರ್ಮವೂ ಈ ನಂಬಿಕೆಯನ್ನು ಧರ್ಮ-ಸಮ್ಮತ ಮಾಡಿತು. ಬುದ್ಧ ತನ್ನ ಶಿಷ್ಯರಿಗೆ ನಿಖರವಗಿ ಈ ಬಗ್ಗೆ ಬೋಧಿಸಿದ್ದಾನೆಂದು ಉಲ್ಲೇಖವಿದೆ. ಒಟ್ಟಿನಲ್ಲಿ ಇದು ಒಂದು ಸರ್ವಕಾಲಿಕ ಕೌತುಕ ಹುಟ್ಟಿಸಿದ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ.
ಇಲ್ಲಿ ಹಲವಾರು ವಾದಗಳನ್ನು ನಾವು ಪರಿಗಣಿಸೋಣ. ಯಾರೋ ಒಬ್ಬರು ತಾವು ನೋಡದೇ ಇರುವ ಸ್ಥಾನ, ವ್ಯಕ್ತಿ, ಪರಿಸರ, ಘಟನಾವಳಿಯನ್ನು ನಿಖರವಾಗಿ ಹೇಗೆ ವಿವರಿಸಲು ಸಾಧ್ಯ...?? ಅದನ್ನು ಅವರು ಸ್ವತಃ ಅನುಭವಿಸದೇ?? !! ಅದರಲ್ಲೂ ನೆನಪಲ್ಲಿ ಹೆಚ್ಚು ಶೇಖರವಾಗಿರದ ಮಕ್ಕಳು ಅಸಹಜವೆಂಬಂತೆ ತಾವು ಅದಾಗಿದ್ದೆವು, ಅಲ್ಲಿದ್ದೆವು, ಅಂತಹವರ ಗಂಡನೋ ಹೆಂಡತಿಯೋ ಆಗಿದ್ದೆವು..ಎಂದೆಲ್ಲಾ ಹೇಳುವುದು ಹೇಗೆ ಸಾಧ್ಯ?? ಇನ್ನು ಪುನರ್ಜನ್ಮ ಎನ್ನುವಷ್ಟರ ಮಟ್ಟದ್ದಲ್ಲವದರೂ ನಮಗೇ ಕೆಲವೊಮ್ಮೆ ತಾವು ಮೊದಲು ಕಂಡಿರದ ಯಾವುದೋ ಸ್ಥಾನವನ್ನು ನೋಡಿದಾಗ ತೀರಾ ಪರಿಚಿತ ಎನಿಸುವುದು ಏಕೆ? ಕೆಲವರನ್ನು ಮೊದಲೇ ಕಂಡಿಲ್ಲದಿದ್ದರೂ ನಮಗೆ ಅಸಹ್ಯ ಅನಿಸುವುದೇಕೆ? ಕೆಲವರು ತೀರಾ ಹತ್ತಿರದವರು, ಮಿತ್ರರು ಎನಿಸುವುದೇಕೆ?? ಹೀಗೆ ಹತ್ತು ಹಲವು ವಿಜ್ಞಾನಕ್ಕೆ ನಿಲುಕದ ವಿಷಯ ನಮ್ಮನ್ನು ದ್ವಂದ್ವಗಳಿಗೆ ಕೆಡಹುತ್ತವೆ.
ಅಮೇರಿಕೆಯ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸ್ಟೀವನ್ ಸನ್ ತಮ್ಮ ಅಧ್ಯಯನದ ನಲವತ್ತು ವರ್ಷಗಳನ್ನು ಪುನರ್ಜನ್ಮದ ಸುತ್ತಲ ಪವಾಡ ಸದೃಶ ಘಟನಾವಳಿಗಳನ್ನು ಕೂಲಂಕುಷ ಪರಿಶೀಲನೆ ಮತ್ತು ಅಧ್ಯಯನದಲ್ಲಿ ಕಳೆದಿದ್ದಾರೆ. ಪ್ರಪಂಚದ ಹಲವಾರು ದೇಶಗಳಿಂದ ಘಟನಾವಳಿಗಳನ್ನು ಶೇಖರಿಸಿ, ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಪ್ರಕಟಿಸಿದ್ದಾರೆ. ಇವರು ಪುನರ್ಜನ್ಮಿ ನೀಡಿದ ಅಹವಾಲು, ಹೇಳಿಕೆಗಳನ್ನು ಅಕ್ಷರಶಃ ಪರಿಶೀಲಿಸಿ ವೈದ್ಯಕೀಯ ದಾಖಲೆಗಳನ್ನು ತಾಳೆಹಾಕಿ ಅಧ್ಯಯನ ನಡೆಸಿದ್ದಾರೆ, ಹಲವಾರು ಇಂತಹ ಹೇಳಿಕೆಗಳು ವಾಸ್ತವವಾಗಿ ನಡೆದಿವೆ. ಇಲ್ಲಿ ಇನ್ನೊಂದು ವಾದವೆಂದರೆ, ಪುರ್ಜನ್ಮ ಇದ್ದರೂ ಆ ರೀತಿ ಜನ್ಮ ಪಡೆದವರೆಲ್ಲರಿಗೂ ಹಿಂದಿನ ಜನ್ಮದ ನೆನಪಿರುವುದಿಲ್ಲ. ಆದರೆ ಸತ್ತವರೆಲ್ಲ ಪುನರ್ಜನ್ಮ ಪಡೆಯುತ್ತಾರೆಂದೂ ಏನಿಲ್ಲವಲ್ಲ??!! ಪ್ರೊಫೆಸರ ಅಧ್ಯಯನದ ಪ್ರಕಾರ ಇಂತಹ ನಿಖರ ಪುನರ್ಜನ್ಮದ ನಿದರ್ಶನಗಳಲ್ಲಿ ತಿಳಿದು ಬಂದ ಅಂಶ, ಸತ್ತು ಮತ್ತೆ ಹುಟ್ಟಿದವರು ಅಕಾಲಿಕ ಅಥವಾ ಅತೃಪ್ತ ಅಥವಾ ಘೋರವೆನಿಸುವ ಸಾವಿಗೀಡಾದವರು ಎಂದು. ಅಂದರೆ ಯಾವುದೋ ಅವ್ಯಕ್ತ ಶಕ್ತಿ ಮೃತ ದೇಹದಿಂದ ಮತ್ತೊಂದು ದೇಹಕ್ಕೆ ವರ್ಗಾಯಿತಗೊಂಡು ಪುನರ್ಜನ್ಮದ ನೆನಪುಗಳಿಗೆ ಕಾರಣವಾಗುತ್ತದೆಯೇ?? ಅಥವಾ ಎಲ್ಲ ಪುನರ್ಜನ್ಮಿತ ಜೀವಿ ತನ್ನ ಪೂರ್ವದ ನೆನಪು ಉಳಿಸಿಕೊಂಡಿರುವುದಿಲ್ಲ ಎಂದೇ..?? ಅಥವಾ ಘೋರ ಅತೃಪ್ತ ಆತ್ಮವೇ ಪುನರ್ಜನ್ಮಕ್ಕೆ ಕಾರಣವೇ? ? ಸದ್ಯಕ್ಕೆ ಏನೂ ಹೇಳಲಾಗದು...ಸತ್ತನಂತರವೇ ಇದನ್ನು ನಿಖರವಾಗಿ ಹೇಳಲು ಸಾಧ್ಯ..ಅಂದರೆ ..???!!!
ಇಸ್ಲಾಂ ಅಂತ್ಯದ ನಂತರವೂ ಜೀವ ಇದೆ ಎನ್ನುತ್ತದೆಯಾದರೂ ಪುನರ್ಜನ್ಮವೆನ್ನುವುದು ಇದೆ ಎಂದು ಒಪ್ಪುವುದಿಲ್ಲ ಏಕೆಂದರೆ ಆ ರೀತಿ ನಿರೂಪಿಸಲು ಸಾಧ್ಯವಿಲ್ಲ. ಇಸ್ಲಾಂ ಪ್ರಕಾರ ಸತ್ತವನೇ ಪುನರ್ಜನ್ಮ ಹೊಂದಿದಾತ ಎನ್ನುವುದಕ್ಕೆ ಪುರಾವೆ ಇರುವುದಿಲ್ಲ ಹಾಗೆ ಇದೆ ಎನಿಸಿದರೂ ಅದು ಕೇವಲ ಕಾಕತಾಳೀಯವಾಗಿರಬಹುದು ಎನ್ನುತ್ತದೆ. ಆದರೆ ಸಾವಿನ ನಂತರದ ಜೀವನ ಇದೆ ಎಂತಲೂ ಆ ಜೀವದಲ್ಲಿ ಸುಖ ಅಥವಾ ಕ್ರೂರ ಶಿಕ್ಷೆಗಳು ಈ ಜನ್ಮದ ನಿನ್ನ ಕರ್ಮಗಳನ್ನು ಅವಲಂಬಿಸಿದೆ ಎಂದೂ ಹೇಳುತ್ತದೆ. ನಿನ್ನ ಮರಣಾನಂತರದ ಸ್ಥಿತಿ ಸುಖದಾಯಕ ಆಗಬೇಕಾದರೆ ಈ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡು ಎನ್ನುತ್ತದೆ ಆದರೆ ನೀನೇ ಮತ್ತೆ ಹುಟ್ಟಿ ಬರುವೆ ಎನ್ನುವುದಿಲ್ಲ. ನರಕ ಮತ್ತು ಸ್ವರ್ಗ, ಈ ಸಿದ್ಧಾಂತ ಬಹುಶಃ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಕಂಡು ಬರುವ ಸಮಾನ ಅಂಶ. ಕ್ರಿಸ್ಚಿಯನ್ನರೂ ಪುನರ್ಜನ್ಮದ ಬಗ್ಗೆ ನಿಖರವಾಗಿ ಏನೂ ಹೇಳುವುದಿಲ್ಲ, ಕಿಸ್ತನು ಮತ್ತೆ ಜೀವ ಪಡೆದ ಎನ್ನುವರೇ ಹೊರತು, ಪುನರ್ಜನ್ಮ ಪಡೆದ ಎಂದು ಹೇಳಿಲ್ಲ. ಇನ್ನು ಜೊರಾಸ್ಟ್ರಿಯನ್ನರು ಒಂದು ರೀತಿಯ ಜೀವ-ಮರುಕಳಿಕೆಯನ್ನು ಒಪ್ಪುವರಾದರೂ ಖಚಿತವಾಗಿ ಪುನರ್ಜನ್ಮದ ಬಗ್ಗೆ ಹೇಳಿಲ್ಲ.
ಬೌದ್ಧ ಧರ್ಮ ಪುನರ್ಜನ್ಮ ಒಂದು ಸತ್ಯ ಎನ್ನುತ್ತದೆ. ಇನ್ನೂ ಮುಂದುವರೆದು, ಪುನರ್ಜನ್ಮದ ಆರು ಆಯಾಮಗಳು ಸಾಧ್ಯ ಎನ್ನುತ್ತದೆ. ಇವು ದೇವತಾ, ಗಂಧರ್ವ (ಭಾಗಶಃ ದೇವತಾ ಅಥವಾ ಅತಿಮಾನವ), ಮಾನವ, ಪಶು, ಪೈಶಾಚ ಮತ್ತು ದೈತ್ಯ (ನರಕವಾಸಿ) ಎನ್ನುತ್ತದೆ. ಇವುಗಳಲ್ಲಿ ದೇವತಾ, ಗಂಧರ್ವ ಮತ್ತು ಮಾನವ ಆಯಾಮಗಳು ಸುಖದಾಯಿಯಾದರೆ ಪಶು, ಪೈಶಾಚ ಮತ್ತು ದಾನವ ಆಯಾಮಗಳು ಪೀಡಿತ ಅಯಾಮಗಳು ಎನ್ನುತ್ತದೆ. ಮೊದಲನೆಯ ಮೂರು ಆಯಾಮಗಳು ಸುಕರ್ಮಗಳಿಗೆ ಸಿಗುವ ಫಲವಾದರೆ ದುಷ್ಕೃತ್ಯಗಳಿಗೆ ಸಿಗುವ ಫಲ ಪೀಡನಾದಾಯಕ ಆಯಾಮ. ಬುದ್ಧನ ಪ್ರಕಾರ ಆತ್ಮ ಶುದ್ಧಿ, ಯೋಗ ಸಿದ್ಧಿಹೊಂದಿದ ಜೀವಿಗೆ ತನ್ನ ಬುದ್ಧಿ ಅಥವಾ ಜ್ಞಾನವಾಹಕಗಳನ್ನು ನಿಯಂತ್ರಿಸುವ ಅಥವಾ ವರ್ಗಾಯಿಸುವ ಶಕ್ತಿಯಿರುವುದೆಂದೂ, ಅಂತಹ ಜೀವಿ ತನ್ನ ಪುನರ್ಜನ್ಮದಲ್ಲೂ ಪೂರ್ವದ ಎಲ್ಲ ಅರಿವನ್ನು ಉಳ್ಳವರಾಗಿತ್ತಾರೆಂದೂ ಇದು ಕೆಲವರಿಗೆ ಮಾತ್ರ ಸಾಧ್ಯವೆನ್ನಲಾಗಿದೆ.
ಇನ್ನು ವೈಜ್ಞಾನಿಕ ನಿದರ್ಶನಗಳನ್ನು ಪರಿಶೀಲಿಸಿದವರಿಗೂ ಪುನರ್ಜನ್ಮವನ್ನು ಅಲ್ಲಗಳೆಯುವ ಯಾವಿದೇ ತರ್ಕ ಸಿಗದಿದ್ದರೂ ಇದೆಯೆನ್ನಲೂ ಸಾಕಷ್ಟು ಪುರಾವೆಗಳು ಸಿದ್ಧಾಂತಗಳು ಸಿಗುತ್ತಿಲ್ಲ.

ಕೆಲವು ದಾಖಲೆಯಾಗಿರುವ ನಿದರ್ಶನಗಳನ್ನು ಗಮನಿಸೋಣ.
ಅಮೇರಿಕೆಯ ಶ್ರೀಮತಿ ರೂಥ್ ಸಿಮೋನ್ಸ್ ಎನ್ನುವಾಕೆ ತನ್ನ ನೂರು ವರ್ಷಕ್ಕೂ ಹಿಂದಿನ ಐರ್ಲೆಂಡಿನ ಜನ್ಮದ ಬಗ್ಗೆ ನಿಖರ ಮಾಹಿತಿ ನೀಡಿದ್ದಾಳೆ, ಪರಿಶೀಲನೆ ನಂತರ ಈ ಎಲ್ಲ ಮಾಹಿತಿ ಅಕ್ಷರಶಃ ನಿಜವೆಂದು ತಿಳಿದುಬಂತು, ಮತ್ತೂ ಅಚ್ಚರಿಯೆಂದರೆ ಆಕೆ ಯಾವತ್ತೂ ಅಮೇರಿಕಾ ಬಿಟ್ಟು ಬೇರೆ ದೇಶಕ್ಕೆ ಹೋಗೇ ಇಲ್ಲದ್ದು.
ಇನ್ನೂ ಅಶ್ಚರ್ಯದ ನಿದರ್ಶನ ಇಂಗ್ಲೇಂಡಿನ ಶ್ರಿಮತಿ ನಾವೋಮಿ ಎಂಬಾಕೆಯದು. ಈಕೆ ತನ್ನ ಹಿಂದಿನ ಎರಡು ಜನ್ಮಗಳ ವಿವರಗಳನ್ನು ನಿಖರವಾಗಿ ನೀಡಿದ್ದಾಳೆ. ತಾನು ಏಳನೇ ಶತಮಾನದಲ್ಲಿ ಐರಿಶ್ ಮಹಿಳೆಯಾಗಿ ಗ್ರೀಹಾಲ್ಘ್ ಎಂಬ ಹಳ್ಳಿಯಲ್ಲಿ ಜೀವಿಸಿದ್ದಳೆಂದೂ, ತಾನು ೧೯೦೨ ರಲ್ಲಿ ಆಂಗ್ಲ ನರ್ಸ್ ಮಹಿಳೆಯಾಗಿ ಡೌನ್ ಹಾಮ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಳೆಂದು ಹೇಳಿದ್ದಾಳೆ. ಈ ಎರಡೂ ವಿವವರಗಳೂ ನಿಜವಾಗಿದ್ದವು.
ನಮ್ಮಲ್ಲಿಯೇ ಬೆಂಗಳೂರಿನ ನಿಮ್ಹಾನ್ಸ್ (ಮಾನಸಿಕ ಆಸ್ಪತ್ರೆ) ನಲ್ಲಿರುವ ಮನಶಾಸ್ತ್ರಜ್ಞ ಡಾ. ಪಶ್ರೀಚಾ ಸ್ಟಿವನ ಸನ್ರ ಜೊತೆ ಅಧ್ಯಯನ ನಡೆಸಿದ ಮತ್ತು ಪುನರ್ಜನ್ಮವನ್ನು ಪರೀಕ್ಷಿಸಿದವರಲ್ಲಿ ಒಬ್ಬರು. ಅವರೇ ವಿವರಿಸಿರುವ ನಿದರ್ಶನ ಮಹಾರಾಸ್ಟ್ರದ ಉತ್ತರೆ ಎಂಬುವರ ಕುರಿತದ್ದು. ಆಕೆ ಇದ್ದಕ್ಕಿದ್ದಂತೆ ತಮಗೆ ಗೊತ್ತಿರದ ಬಂಗಾಳಿ ಭಜನ್ ಹಾಡಲು ಪ್ರಾರಂಭಿಸಿದ್ದು ಮತ್ತು ೧೧೦ ವರ್ಷಕ್ಕೆ ಹಿಂದೆ ತಾನು ಅಂದಿನ ಬಂಗಾಳದ ಚಟ್ಟೋಪಾದ್ಯಾಯ ಕುಟುಂಬದಲ್ಲಿ ಶಾರದೆಯಾಗಿದ್ದಳೆಂದೂ ಹೇಳಿದ್ದು ಇವು ನಿಜವಾಗಿದ್ದವೆಂದೂ ತಿಳಿಸಿದ್ದಾರೆ.
ಇನ್ನೂ ವಿಸ್ಮಯಕಾರಿ ನಿದರ್ಶನ ಈಗಲೂ ಸೇವೆ ನಿರತ ಭೋಪಾಲಿನ ನವೀನ ಕಾಲೇಜಿನ ಪ್ರಾಂಶುಪಾಲೆ ಡಾ. ಸ್ವರ್ಣಲತಾ ತಿವಾರಿಯವರದ್ದು. ಇವರಿಗೆ ತಮ್ಮ ಮೂರು ಜನ್ಮಗಳ ವಿವರಗಳು ತಿಳಿದಿವೆ..!!!!! ಈ ನಿದರ್ಶನ ಪ್ರಪಂಚದ ಏಳು ಅಧ್ಯಯನಾಧೀನ ನಿದರ್ಶನಗಳಲ್ಲಿ ಒಂದಾಗಿದೆ.
ಮೊದಲಿಗೆ ಆಕೆ ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ನದಿಯೊಂದನ್ನು ದಾಟುವಾಗ ಒಮ್ಮೆಗೇ ನೆನಪಾದ ಪುನರ್ಜನ್ಮ ಆಗ ಆಕೆಗೆ ನಾಲ್ಕು ವರ್ಷ ವಯಸ್ಸು.. ಆಕೆ ತಾನು ಬಿಯಾ ಪಾಥಕ್ ಎಂದು ಹೇಳಿ ತಂದೆ ತಾಯಿಯರಲ್ಲಿ ಆತಂಕಕ್ಕೆ ಎಡೆಮಾಡಿ ಅವರು ಮನಶಾಸ್ತ್ರಜ್ಞರನ್ನು ಕಂಡು ತಮ್ಮ ಮಗಳಬಗ್ಗೆ ವಿಚಾರಿಸಿದಾಗ ಆಕೆ..ಪೂರ್ಣ ಆರೋಗ್ಯವಂತಳೆಂದೂ ಅವಳಿಗೆ ಪುನರ್ಜನ್ಮದ ನೆನಪು ಬಂದಿದೆಯೆಂದೂ ...ಹೇಳಿದರು.. ವಿಚಾರಿಸಿದಾಗ ಬಿಯಾ ಪಾಥಕ್ ಎಂಬಾಕೆ ಸತ್ತ ಒಂಭತ್ತು ವರ್ಷಗಳ ನಂತರ (೧೯೪೮) ಸ್ವರ್ಣಲತಾ ಹುಟ್ಟಿದೆಂದೂ ತಿಳಿದು ಬಂತು. ಬಿಯಾ ಪಾಥಕ್ ಸತ್ತು ಅಸ್ಸಾಂ ನಲ್ಲಿ ಸಿಲಹಟ್ ಎಂಬಲ್ಲಿ ೧೯೪೦ ರಲ್ಲಿ ಕಮಲೆಶ್ ಎಂಬ ಹೆಣ್ಣುಮಗಳಾಗಿ ಜನಿಸಿ ೧೯೪೭ ರಲ್ಲಿ ಹೃದಯಾಘಾತದಿಂದ ಸತ್ತಳೆಂದೂ ತಿಳಿಯಿತು.
ಮೂರು ಜನ್ಮ- ಈಗಿನ- ಸ್ವರ್ಣಲತಾ (ಹುಟ್ಟಿದ್ದು ೧೯೪೮)
ಅದಕ್ಕೂ ಹಿಂದೆ ಕಮಲೆಶ್ ಅಸ್ಸಾಂ ನಲ್ಲಿ (ಹುಟ್ಟಿದ್ದು ೧೯೪೦ ಸತ್ತದ್ದು ೧೯೪೭)
ಅದಕ್ಕೂ ಹಿಂದೆ ಬಿಯಾ ಪಾಥಕ್ ಆಗಿ ಕತ್ನಿ, ಮಧ್ಯಪ್ರದೇಶದಲ್ಲಿ (ಸತ್ತದ್ದು ೧೯೩೯)
ಸ್ವರ್ಣಲತಾರ ವಿವರಗಳನ್ನು ಸ್ಟಿವನಸನ್ ಪರಿಶೀಲಿಸಿ ಎಲ್ಲಾ ಸತ್ಯವೆಂದು ಕಂಡುಕೊಂಡಿದ್ದಾರೆ...!!!

ಈ ಎಲ್ಲ ವಿಷಯಗಳನ್ನು ಎಷ್ಟು ಆಸಕ್ತಿ, ಕೌತುಕತೆಯಿಂದ ನೀವು ಓದುವಿರೋ ತಿಳಿಯದು,,,ನನಗಂತೂ ಈ ಲೇಖನವನ್ನು ಮುಗಿಸುವ ವೇಳೆಗೆ ನನ್ನದೂ ಯಾವುದಾದರೂ ಪುನರ್ಜನ್ಮವೇ ??? ಎನಿಸಲಾರಂಭಿಸಿದೆ..!!!! ಹಹಹ
(ನಿಮಗೆ ಆಶ್ಚರ್ಯ ಎನಿಸಬಹುದು..ಈ ಲೇಖನ ಒಂದೇ ಉಸಿರಿನಲ್ಲಿ...ಮೂರು ತಾಸು..ಮಾಹಿತಿ ಸಂಗ್ರಹಿಸಿ ಬರೆದದ್ದು..ಪ್ರಾರಂಭ ರಾತ್ರಿ ೧೦ಕ್ಕೆ ಮುಕ್ತಾಯ ೧೨.೫೫ಕ್ಕೆ..!!!)
I am thankful to Uday for a correction, also request you to forward this many of your friends for feedback.

Friday, September 18, 2009

ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ














All hopes lost, search for drowned Bangalore boy called off

1 post - 1 author - Last post: 17 hours agoThe entire episode has brought to light the callous attitude of Bangalore's civic authorities in failing to fence the open storm water ...www.thaindian.com/.../all-hopes-lost-search-for-drowned-bangalore-boy-called-off_100249261.html - 17 hours ago - Similar -
All hopes lost, search for drowned Bangalore boy called off ...

18 Sep 2009 ... Bangalore, Sep 18 (IANS) The search operation to find the body of ... Vijay is the second boy to die in the last few months after falling in a drain. ... in failing to fence the open storm water drains that dot the city. ...www.sindhtoday.net/news/1/51635.htm - 17 hours ago - Similar -
All hopes lost, search for drowned Bangalore boy called off
ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ
ಎಲ್ಲಿದೆ ವ್ಯವಸ್ಥೆ? ಯಾರು ಹೊಣೆ? ಮತ ಹಾಕಿ ಮತು ಕೆಡಿಸಿಕೊಳ್ಳಬೇಕೆ? ಯಾಕಂದ್ರೆ ಮತ ಹಾಕದವರಿಗೆ ಇದು ಅರಿವಾಗದು..ಎತ್ತರದ ಮಹಡಿಗಳಲ್ಲೋ..ವಿಪತ್ತುಗಳೆಂದರೇನೆಂಬ ಅರಿವೇ ಇಲ್ಲದೆ ಬೆಳೆವಲ್ಲೋ ಇರುತ್ತಾರೆ..ಬಡವ ಮತವನ್ನು ತನ್ನ ಹೊಟ್ತೆಗೆ ಹಾಕುವ ಅನ್ನವೆನ್ನುವಷ್ಟರ ಮಟ್ಟಿಗೆ ನಿಯ್ಯತ್ತಿನಿಂದ ಹಾಕಿ --ಈ ಪಾಡು ಪಡುತ್ತಾನೆ......
ಹೌದು ಸ್ವಾಮಿ...ಮನಸ್ಸು ಅತ್ತು ಅತ್ತು ಹರಿದು ಹಂಚಿಹೋಗಿರುವ ದುಃಖ ತಪ್ತ ಲಕ್ಷ್ಮಮ್ಮ ಮತ್ತು ವರದರಾಜು ದಂಪತಿಗಳನ್ನು ಕೇಳಿ...ಕೇವಲ ಹದಿನೆಂಟು ತಿಂಗಳ ಕರುಳ ಕುಡಿ ನೀರಿನಲ್ಲಿ ಕೊಚ್ಚಿಹೋಗಿ ಇಂದಿಗೆ ಮೂರು ದಿನ...ಬದುಕಿರುತ್ತಾನೆಂಬ ಭ್ರಮೆಯೂ ಈಗ ಬತ್ತಿಹೋಗಿದೆ...ಇನ್ನು ದೇಹ ಸಿಕ್ಕರೂ..ಅದನ್ನು ನೋಡುವ ಮನೋಸ್ಥೈರ್ಯ ಅವರಿಗಿರಲಾರದು..ತಾಯಿ ಕರಳು ಇಂಚಿಂಚೂ ಕತ್ತರಿಗೆ ಸಿಕ್ಕಂತೆ..ರಕ್ತ ಸಿಕ್ತವಾಗಿದ್ದರೂ ಅತಿಶ್ಯೋಕ್ತಿ ಅಲ್ಲ...(ಈ ಬ್ಲಾಗ್ ಬರಿಯುವಾಗ ದೂರದ ಕುವೈತಿನಲ್ಲಿರುವ ನನ್ನ ಕಣ್ಣಲ್ಲಿ ನೀರು ಹನಿಯಾಗುವುದನ್ನು ನಾನು ತಡೆಯಲಾಗಲಿಲ್ಲ..ಇನ್ನು ಆ ತಂದೆ ತಾಯಿಯ ಪಾಡೇನು..?? ದೇವರೇ..ಆ ದಂಪತಿಗಳಿಗೆ..ದುಃಖ ತಡೆಯುವ ಶಕ್ತಿ ಕೊಡು...).
ನಮ್ಮ ಸರ್ಕಾರ ನಿದ್ರಿಸುತ್ತಿದೆಯೇ?? ನಮ್ಮ ಬೊಬ್ಬಿರಿಸಿ ಬೊಬ್ಬಿಡುವ (ಬಾಡೂಟದ ಬೊಂಬಾಯಿಗಳು) ಮಹಾನಗರ ಪಾಲಿಕೆಯ ಮಹಾ ವೈಫಲ್ಯಗಳಿಗೆ...ಏನು ಹೇಳ ಬೇಕು. ಪ್ರತಿಷ್ಟೆಯನ್ನೇ ಬಂಡವಾಳವೆನ್ನುವ ಸರ್ಕಾರ ಅತಂತ್ರದ ಆಡಳಿತವಿರುವ ಬಿ.ಬಿ.ಎಂ.ಪಿ. ಚುನಾವಣೆಗಳನ್ನು ಮುಂದೂಡುತ್ತಲೇ ಇದೆ...ಗೊತ್ತು ಗುರಿಯಿಲ್ಲದ ಮ.ನ.ಪಾ. ಕೆಯ ಅಧಿಕಾರಿಗಳು ತಮ್ಮನ್ನಾಳುವ ಭಾವೀ ಕಾರ್ಪೊರೇಟರುಗಳ ಜೀ-ಹುಜೂರಿಯಲ್ಲಿರುವಾಗ ಎಳೆ ಕಂದಮ್ಮಗಳ ಆರ್ತ ನಾದ ಎಲ್ಲಿ ಕೇಳಿಸುತ್ತೆ???
ಹೋಗಲಿ..ಬಿಡಿ..ಏನೋ ಆಯಿತು ಎನ್ನಲು ಹೊಸದಲ್ಲವಲ್ಲಾ..ಇದು.. ಈಗ ೧೯ ತಿಂಗಳ ಹಸುಗೂಸು ವಿಜಯ ಯಮಕೂಪದಂತೆ ಬಾಯ್ದೆರೆದು ಗುಮ್ಮನಂತಿರುವ ಚರಂಡೀ ಡ್ರೌನ್ ಮ್ಯಾನ್ ಹೋಲುಗಳ ಬಲಿಯಾದ ಮೂರೇ ತಿಂಗಳಿಗೆ ಮುಂಚೆ ಆರು ವರ್ಷದ ಅವಿನಾಶ್ ಎಂಬ ಇನ್ನೊಂದು ಕಂದಮ್ಮ ಬಲಿಯಾಗಿದ್ದು ನೆನಪಿಂದ ಮಾಸೇ ಇಲ್ಲ ಅಷ್ಟರಲ್ಲೇ ಈ ಅವಘಡ. ಪ್ರಕಾಶ್ ಮತ್ತು ಭಾರತೀದೇವಿಯರ ಏಕಮಾತ್ರ ಪುತ್ರನನ್ನು ನುಂಗಿ ನೀರ್ಕುಡಿದ ಈ ವ್ಯವಸ್ಥೆಯನ್ನು ಸರಿಪಡಿಸುವ ಆಶ್ವಾಸನೆಗಳ ಸುರಿಮಳೆಯೇ ಆಯಿತು. ಅಷ್ಟೇ ಏಕೆ ಇದಕ್ಕೆ ಐದು ದಿನ ಮುಂಚೆ ಅರವತ್ತರ ಇಳಿವಯಸ್ಸಿನ ಹಿರಿಯರೊಬ್ಬರು ತಮ್ಮ ಸ್ಕೂಟರ್ ಸಮೇತ ಇಂತಹುದೇ ಕೂಪದೊಳಕ್ಕೆ ಬಿದ್ದು ಸತ್ತದ್ದು ನೆನೆಪಿಲ್ಲವೇ? ಇನ್ನು ನೀರಾವರಿ ಬೋರ್-ಬಾವಿಗಳ ಕಥೆಯೂ ಒಂದು ದುರಂತವೇ..ಆಟವಾಡುವ ಕಂದಮ್ಮಗಳು ಬಲಿಯಾಗಿವೆ. ಏಕೆ ಈ ಪರಿ ನೀರವ ಮೌನ ಅಧಿಕಾರಿಗಳಿಂದ..?? ನಮ್ಮ ಶ್ರೇಯೋಭಿಲಾಷೆಯೇ ತನ್ನ ಜೀವಾಳ ಎನ್ನುವ ಸರ್ಕಾರದಿಂದ...???!! ಇನ್ನೂ ಎಷ್ಟು ಬಲಿ ಬೇಕು ಇವರಿಗೆ??
ಅಲ್ಲಿ ನಾಡಿನಲ್ಲಿರುವ ನಮ್ಮವರು ಎಚ್ಚೆತ್ತುಕೊಳ್ಳಬೇಕು...ಬಡಿದೆಬ್ಬಿಸಬೇಕು..ವ್ಯವಸ್ಥೆಯನ್ನು...ಆದರೆ ಕಣ್ತೆರೆದು ನಿದ್ರಿಸುವವರನ್ನು ಹೇಗೆ ತಾನೆ ಎಚ್ಚರಿಸುವುದು..ಹೇಗೆ..ಹೇಗೆ..ಹೇಗೆ..ತಿಳಿಸುವುದು ಇವರಿಗೆ...ನಮ್ಮ ಮಗುವೂ ಮಗುವೇ..ನಮ್ಮ ಕನಸುಗಳೂ ನಿಮ್ಮ ಕನಸುಗಳಂತೆಯೇ..ಎಂದು.????

Friday, September 4, 2009

ಕವಿತೆಯೆಂದರೇನು?

ಕವಿತೆ,
ಕೆಲವು ಪದಗಳ ಸಾಲೇ?
ಸಾಲಿನ ಕೊನೆಯ ಪ್ರಾಸವೇ?
ಪ್ರಾಸದೊಳಗಿನ ಭಾವವೇ?
ಭಾವದೊಳಗಿನ ಕಲ್ಪನೆಯೇ?
ಕಲ್ಪನೆಗೊಂದು ಚಿಂತನೆಯೇ?
ಚಿಂತನದೊಳಿಹ ವಿಷಯವೇ?
ವಿಷಯದ ಹಿಂದಿನ ಘಟನೆಯೇ?
ಘಟನೆಗೊಂದು ತರ್ಕವೇ?
ತರ್ಕಕ್ಕೆ ನಿಲುಕದ ಸತ್ಯವೇ?
ಸತ್ಯದೊಳಗಿನ ಸೌಂದರ್ಯವೇ?
ಸೌಂದರ್ಯವೆಂಬ ಕನಸೇ?
ಕನಸಿಂದ ದೊರೆತ ಸ್ಪೂರ್ತಿಯೇ?
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ?
ಪದಗಳ ಅಂತರಾಳವೇ?
ಅಂತರಾಳದಲ್ಲಡಿಗಿದ ದುಗುಡ ದುಮ್ಮಾನವೇ?
ಮಾನಕಂಜಿದ ಸಮ್ಮಾನವೇ?
ಸಮ್ಮಾನ ಗಿಟ್ಟಿಸಿಸಿದ ವಿಪರ್ಯಾಸವೇ?
ವಿಪರ್ಯಾಸ ತರಿಸಿದ ಪರ್ಯಾಯವೇ?
ಪರ್ಯಾಯ ಹೇಳಲಿಚ್ಛಿಸಿದ್ದೇ?
ಹೇಳಲಿಚ್ಛಿಸುದೇ ಬರೆದುದೇ?
ಬರೆದುದೇ ಒಂದು ಕವಿತೆಯೇ?
ಕವಿತೆಯೆಂದರೇನು? ???

ಕವಿತೆ
ಕವಿತೆ ಕವಿ
ತಾ ತೆರೆದ ಮನ
ವಿ (ಆ)ಷಯ ಕ್ಷಣ
ಕ್ಷಣ ತುಡಿತದ
ಭಾಷೆ ಸುರುಳಿ
ಬಿಚ್ಚಿಡುವ ಸರಪಳಿ
ಅನಿಸಿದ್ದು ಬರೆ
ಬರೆದದ್ದು ತೆರೆ
ತೆರೆವವನದೊಂದು ಪರಿ
ಹೆಪ್ಪುಗಟ್ಟಿದ ಭಾವ
ಮಂಥಿಸಲು ಕವನ
ಬಿಂಬಿಸಲು ಕಥನ
ಮನತುಂಬಿ
ಹೊನಲು ಗೀತೆ
ಮನಸೀಳಿ ಲೇಖಾಂಕವಿತೆ

ಅವನು-ಅವಳು
ಅವನು ಕಥೆ-
ರಸ-ನೀರಸ
ಏಳು-ಬೀಳು
ಪುಟಗಟ್ಟಲೆ ಗೋಳು
ಅಲ್ಲೊಂದು
ಇಲ್ಲೊಂದು
ರಸಿಕತೆಯ ಓಳು
ಕೊನೆಗೊಂದೇ
ಉಳಿದದ್ದು ಹೇಳೋಕೆ
ಯಾಕದ್ರೂ ಬೇಕು
ಬಾಳಬೇಕು ಈ ಬಾಳು?

ಅವಳು ಕವಿತೆ-
ಸುಂದರ ಸವಿತೆ
ಬಲು ಆಕರ್ಷಿತೆ
ಪುಟವೆಲ್ಲಿ..ಪದಗಳು?
ಕಣ್ಣಲ್ಲೇ ನುಡಿಗಳು
ತುಟಿ ಬರೆವ ಸಾಲುಗಳು
ನಕ್ಕರೆ ಉದುರುವ
ಬಹುಮೂಲ್ಯ ಮುತ್ತುಗಳು
ಲತಾಂಗಿ, ಸುಕೋಮಲೆ
ಬಿಂಬವೊಂದೇ..
ಸಾವಿರ ಕನಸಲೂ
ಅದಕೇ ಇವಳು
ನಡೆದಾಡುವ
ಜೀವಂತ ಕವಿತೆ.

ದಾಂಪತ್ಯ
ಅವಳಜೊತೆ ಅವನು
ಬೆಸೆದ ಸಾಂಗತ್ಯ
ಕಥೆಯಲ್ಲಿ ಬೆರೆತ ಕವಿತೆ
ಒಂದು ವಾಸ್ತವದ ಭಾಷೆ
ಮತ್ತೊಂದು ಬಾಳರಸ
ಹಿಂಗಿಸಲು ತೃಷೆ
ಮಹಾಕಾವ್ಯದ ರಚನೆಗೆ
ಇಬ್ಬರೂ ಸಮ, ಹೇಳಲಾದೀತೆ?
ಇದು ಕಥನ ಇದೇ ಕವಿತೆ?