Monday, March 16, 2009

ನಮ್ಮ ಕರುನಾಡು - ನಮ್ಮ ಮುಂದಿನ ದಶಕದ ಕನಸು





















ಮೈಸೂರು ಅರಸರ, ಭಾಗ್ಯಶಿಲ್ಪಿ ವಿಶ್ವೇಶ್ವರಯ್ಯನವರ ಸುಯೋಜಿತ ಯೋಜನೆಗಳು, ಕೆಂಗಲ್ ಹನುಮಂತರಾಯರ ಧೀಮಂತಿಕೆ, ನಿಜಲಿಂಗಪ್ಪನವರ ಚಾಣಾಕ್ಷ ಬುದ್ಧಿ, ಅರಸು ತಂದ ಕರ್ನಾಟಕ, ಹೆಗ್ಗಡೆ ಗೌಡರಿಂದಾದ ಬೆಳವಣಿಗೆ, ಕೃಷ್ಣರ ಐಟಿ-ಬಿಟಿಗೆ ಉತ್ತು, ಕನ್ನಡಿಗರ ಪ್ರತೀಕವೆಂಬಂತೆ ಬೆಳೆದ ನಾರಾಯಣ ಮೂರ್ತಿಗಳು, ಹೀಗೆ...ನಮ್ಮ ನಾಡಿನ ಬೆಳವಣಿಗೆ ಇತರರಿಗೆ ಈರ್ಷೆಯಾಗುವ ಮಟ್ಟಿಗೆ ಮುನ್ನಡೆದಿದೆ. ಕ್ಷುಲ್ಲಕ-ಸಂಕುಚಿತ ವಿಚಾರಧಾರೆಗಳಿಗೆ ಬಲಿಯಾಗದೆ ನಾಡ ಜನತೆ ವಿವೇಚಿತ ಯೋಜನೆಗಳನ್ನು ಸಾಕಾರ ಮಾಡುವಲ್ಲಿ ಸಹಕರಿಸಿದರೆ .......ಮುಂಬರುವ ಹತ್ತು ವರ್ಷಗಳಲ್ಲಿ....ಹೀಗೆ ಕಾಣಬಹುದೇ...??