Monday, January 28, 2013

ಭೂಮಿ - ಬಾನಂಗಳ

.....ಆಶಯ.........

ಮೇಲೊಂದು ನೀಲಾಕಾಶ

ಹೇಳಬೇಡಿರಯ್ಯಾ ಶುದ್ಧ ಸುಳ್ಳು!

ಕೆಳಗೋ ಹರಡಿವೆ ಸಹಸ್ರಾರು

ಜೀವಗಳು, ಏಕೆ ಮತ್ತೊಂದು ಸುಳ್ಳು?

ರವಿ ಚಂದ್ರರು ಕೊಡಲು ಬೆಳಕು

ಹೆಸರು ಕೊಡಬೇಡಿ, ಏಕೆ ಮತ್ತೆ ಸುಳ್ಳು?


ಆಕಾಶವೆಲ್ಲಿಹುದು, ನೀಲಿ ಮೊದಲೇ ಅಲ್ಲ


ಕೆಳಗಡೆ ಗಾಳಿ, ನೀರು ಬೆಟ್ಟ ಮಣ್ಣು


ಜೀವ..?? ಯಾವುದು ..?? ಸತ್ತರೆ!!


ರವಿ ಚಂದ್ರ ಲಾಂದ್ರ ಬೆಳಕು..???


ಕಣ್ಣಿಗೆ ಕಾಣದಿರೆ..ಎಲ್ಲಾ ಥಳುಕು


ಬಂದ ನಿಮ್ಮ ಜೀವ ಕೊಲುವುದು ಹೀಗೇ


ಸಹಸ್ರಾರು ಜೀವ, ಭಾವ –ಎಲ್ಲಾ ಸೋಗೇ


ಸಾಲದ್ದಕ್ಕೆಲ್ಲೆಡೆ ಮತ, ಧರ್ಮ, ಜಾತಿ


ತಮ್ಮಲ್ಲೇ ಹೊಡೆದಾಟ, ಅಲ್ಲವೇ ಭ್ರಾಂತಿ?


ಮೀರಿ ಬಾಳಿ ಎಲ್ಲ ಮೇರೆಗಳ, ಅಹಂ ಗಳ


ಮತ್ತೆ ಹಸಿರುಡಲಿ ಭೂಮಿ, ನೀಲಿ ಬಾನಂಗಳ


ಆ ಸಹಬಾಳ್ವೆ ಈದ್ ನವಮಿ ಜೊತೆಜೊತೆಗೆ


ರಹೀಮನು ಬಯಸಲಿ ರಾಮನ ತೋಳ್ತೆಕ್ಕೆಗೆ