Sunday, October 30, 2011

ಕಿರಣ......

ಚಿತ್ರ: ದಿಗ್ವಾಸ್ ಹೆಗಡೆ

ಕಿರಣ
ಮರೆಯಾಗಹೊರಟ ಸೂರ್ಯ
ಅಡಗಿ ದಿಗಂತದಿ, ಆಯ್ತು ದಿನವೆಲ್ಲವೂ
ಧರಿತ್ರಿಯ ಒಂದೆಡೆಯ ಕಾರ್ಯ
ನಿರಂತರ ಅವಗೆ, 
ಇಲ್ಲ ರಾತ್ರಿ, ಇಲ್ಲ ನೆಳಲು, 
ಇಲ್ಲ ತಂಪು, ಇಲ್ಲ ಕಡಲು.
ಒಡಲೊಳಗಿಹ ಕೆಂಡದುಂಡೆ
ಹೊರ ಉಗುಳುವ ಜೀವ ಕಿರಣ
ಆವಿಯಾಗಿಸಿ ಮಾಡಿ ನೀರಹರಣ
ಜಲವುಂಡ ಸಾಗರವೇ ಹಂಡೆ
ಒಬ್ಬ ಸೂರ್ಯ ಬ್ರಹ್ಮಾಂಡದಿ
ಎಷ್ಟೋ ಭೂಮಿಗಳ ಬೆಳಗಿಹ
ಎಷ್ಟೋ ಸಾಗರಗಳ ತೊಯ್ದಿಹ
ಆದರೂ, ಸುಮ್ಮನೆ ಮರೆಯಾಗುವ
ದಿಗಂತದಿ ಚಿನ್ನದೋಕುಳಿಯಾಡಿ
ಒಂದೆಡೆ ತಂಪಿಗೆ ಒಂದೆಡೆ ಕಂಪಿಗೆ
ಒಂದೆಡೆ ಚುಮುಚುಮು ಛಳಿಯಪ್ಪುಗೆ
ಭ್ರಮರ ಹಾತೊರೆವ ಹೂ ಕಂಪಿಗೆ
ಜೀವ ಜಾಲದ ಹೂರಣ ಅವನಲ್ಲಿ
ಮರಗಿಡ ಚರಾಚರ ಇವೆ ಬಳಿಯಲ್ಲಿ
ಬೆಳಕೂ ಅವನೇ ಕತ್ತಲೂ ಅವನೇ
ಶಕ್ತಿಸಾರದ ಮೂಲವೂ ಅವನೇ

Wednesday, October 12, 2011

ತ್ರಿವಳಿ ----THREE More for the PIC


ಆಗಲಿ ಸಾರ್ಥಕ

ಕನಸಲ್ಲಿ ವಿಹರಿಸಿದ್ದಿಲ್ಲಿ
ಮನಸ-ಮನಸು ಬೆಸೆದು
ಕೈ-ಕೈ ಹಿಡಿದು, ಸಂಜೆ
ಕತ್ತಲಾದದ್ದೂ ಅರಿಯದ
ಮನ ಮುದಗೊಂಡದ್ದೂ ಇಲ್ಲಿ.
ಅದೇ ಈ ಒಂಟಿ ಮರ
ಈ ಒಂಟಿ ಬೆಂಚು
ನಮ್ಮಿಬ್ಬರನು ಜಂಟಿಮಾಡಿ
ಹಿತ ನೆಳಲ ನೀಡಿ
ಬಿಡಿಸದ ಬಂಧ ಬೆಸೆದದ್ದೂ ಇಲ್ಲಿ.
ನಮ್ಮಂತೆ ಎಷ್ಟು ಮನ
ಮಿಡಿದಿವೆಯೋ ಇಲ್ಲಿ..?
ಎಷ್ಟು ಒಂಟಿಗಳು ಸೇರಿ
ಜಂಟಿಯಾಗಿವೆಯೋ ಇಲ್ಲಿ..?
ಟೊಂಗೆ ನೀಡಿವೆ ಎಲೆ-ಹಸಿರು
ಕೆಳ-ಮೇಲ್ ನೆಲಸಿದವಗೆ ಉಸಿರು
ಬೇರು ಹಿಡಿದಿವೆ ಮಣ್ಣ ಕೊರೆತ
ನೆಳಲು ತಣ್ಣನೆ ತಂಪು.
ಸಾರ್ಥಕವಾದರೆ ಸಾಕು ನಮ್ಮೀ ಬಾಳು
ಈ ಒಂಟಿ ಮರದಂತೆ,
ಅದರ ಹಸಿರೆಲೆಯಂತೆ,
ಬೇರಂತೆ ನೆಳಲಂತೆ..
ಕಡೇ ಪಕ್ಷ ಈ ಬೆಂಚಂತೆ..
Destiny

Oh the light!
Sunny and so bright
to see the twinkle
the magic of magnets
and hope so up right,
I could see in your
Sparkling sight…
No wonder, we sat
With hand-in hand
Under the lonely tree
With green and shadow
Like the magic wand.
I still feel the virgin
Warmth of our breath
On that lonely bench
Where we longed to sit
The day’s gone and
 So the sunny light
But the souls and feelings
We hold and nurtured
Are always verdant
Like the tree, the Sun,
The shadow and the
Lonely Bench

पेड् तलॆ-प्यार् पलॆ

वॊह् शीतल् सी साया
झुलस्तॆ किर्णोंकॊ रोकॆ
फैलाकॆ बाहे दूर् तक्
ममता की आंचल् सा मॆह्कॆ
अकेले थे दोनों,
मैं तुम् और् अकॆला था बॆंच्
बना हसीं मिलन का ऎह् मंच्
अकॆलोंका साथ्,
पिया का ऎह् हाथ्,
मौसम् की बात्
टहल्ना यूं साथ्..
पंची जानॆ कितने पर्देस् गयॆ
अप्नॆ बच्चोंकॆ भी घर् बस् गयॆ
पर् हम् सॆ न छूठा
न पेढ् हम् सॆ रूठा
न बना बॆंच् कभी झूठा
वही साया, वही पेढ्,
वही बॆंच् ऎक् बंधन् सा अनूठा.



Saturday, October 8, 2011

ಭಾನುವಾರದ - ಕಚಗುಳಿ

ಜಯತು ಜಯ - ಎಂಕ್ಟೇಸಾ
"ಇದೇನಪ್ಪಾ ಮೀನಿನ ರೋಗ ನಿವಾರಣೆಗೆ ಮೀನಿನ ಡಾಕ್ಟರು ವೆಂಕಟೇಶನ ಜಪ ಹೊರಡಿಸ್ತಾ ಇದ್ದಾರಾ ಮೀನಿನ ಬಾಯಿಂದ...!!!" ಅಂದ್ಕೊಂಡ್ರಾ..?? ಅಯ್ಯೋ ಇಲ್ಲಾರೀ... ನಮ್ಮ ಪಕ್ಕು ಮಾಮನ ಪ್ರಭಾವ ಇದು..., ಎಂಕ್ಟೇಸಾ!?...ಪಕ್ಕೂ ಮಾಮಾ??.....
ಬ್ಯಾಡ್ವೇ ಬ್ಯಾಡ ಕನ್ ಪೂಸನ್ನು....ಹಹಹ. 
ಬಂದೇ ಬಿಡ್ತೀನಿ ವಿಷಯಕ್ಕೆ.

ಶುಕ್ರವಾರ ನನಗೆ ರಜಾ...ಹಾಗಾಗಿ ನಮಾಜ್ ಗೆ ಮುಂಚೆ ಚಾಟಲ್ಲಿ ನಮ್ಮ ಪಕ್ಕು ಮಾಮನ ಭೇಟಿ ಆಯ್ತು, ಪ್ರೇಯರ್ ಗೆ ಮುಂಚೆ. ಹಾಗೇ ಲೋಕಾಭಿರಾಮ ಚಾಟ್ ಆಗ್ತಿದ್ದಾಗ...ನನಗೆ ಅನಾಯಾಸವಾಗಿ ನೆನಪಿಗೆ ಬಂದಿದ್ದು ಈ ಸುಲಲಿತ, ಮಧುರ, ಭಕ್ತಿಭಾವಪೂರಿತ ಆಲ್ ಟೈಮ್ ಹಿಟ್ ಹಾಡು "ಜಯತು ಜಯ ವಿಠಲ..ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮಾ...”


ಈ ಹಾಡನ್ನ ಹಾಕಿದೆ ಚಾಟ್ ಬಾಕ್ಸಲ್ಲಿ....



“ಇದೇನೋ..ಶುಕ್ರವಾರ ನಮಾಜ್ ಅಂತ ಹೇಳಿ ದೇವರನಾಮ ಶುರು ಮಾಡಿದ್ದೀಯಾ..??” ಅಂತ ಪ್ರಕಾಶನ ಚಾಟ್ ಉತ್ತರ.
ಅದಕ್ಕೆ ನಾನು..
 “ಒಂದು ಸ್ವಾರಸ್ಯಕರ ಘಟನೆ ನಮ್ಮ ಸ್ಕೂಲಲ್ಲಿ ನಡೆದದ್ದು” ಅಂತ ಚಾಟಲ್ಲೇ ಸಂಕ್ಷಿಪ್ತವಾಗಿ ಹಾಕ್ದೆ...
ಅವನಿಗೆ ಏನನ್ನಿಸ್ತೋ..
 “ಬ್ಲಾಗಲ್ಲಿ ಹಾಕೋ ಮಾರಾಯಾ”.....
ನಾನು “ಎಸ್ ಬಾಸ್” ಎಂದವನೇ ಟೈಪಿಸೋದಕ್ಕೆ ಸುರು ಅಚ್ಕಂಡೆ.... ಅದರ ಫಲವೇ ಈ ಭಾನುವಾರದ ಕಚಗುಳಿ....
ಅದು ಹಳ್ಳಿ ಹೈಯರ್ ಪ್ರೈಮರಿ ಸ್ಕೂಲ್ ನ ಏಳನೇ ತರಗತಿ ಕ್ಲಾಸ್ ರೂಮು, ಹಳ್ಳಿ ಸ್ಕೂಲು ಅಂದ್ರೆ ಗೊತ್ತಲ್ಲ...?? ಕೆಳಗಡೆ ಮಣೆಗಳು.. ಸುಮಾರು ೬ ಅಡಿ ಉದ್ದ ಒಂದೊಂದೂ...ಹೆಚ್ಚು ಅಂದ್ರೆ ಅರ್ಧ ಅಡಿ ಎತ್ತರ...!!! ಹೂಂ...
ನೆಲದ ಮೇಲೆ ಕೂತಿಲ್ಲ.... ಅಥವಾ ಪಟ್ಟಣದ ಸ್ಸೂಕ್ಲೂಲಿನಲ್ಲಿರುವಂತೆ ಬೆಂಚಿನ ಎತ್ತರದಲ್ಲೂ ಕೂತಿಲ್ಲ... ಅನ್ನೋ ರೀತಿಯ ಎಡಬಿಡಂಗಿ ಸೀಟಿಂಗ್... ಈಗ್ಲೂ ಇದೆಯೇನೋ ಆ ಸಿಸ್ಟಮ್ ಗೊತ್ತಿಲ್ಲ....
ಓಕೆ...ಬಂದೆ..ಪ್ರಸಂಗಕ್ಕೆ...

ಕ್ಲಾಸಿನಲ್ಲಿ ಆ ದಿನ ಏನೋ ಕಾತರ ಮತ್ತೆ ಆಸಕ್ತಿ ಎಲ್ಲಾರಿಗೂ... ಯಾಕಂದ್ರೆ ಆ ದಿನ ನಮ್ಮ  ಹಳ್ಳಿಗಿಂತಾ ಹಳ್ಳಿ ಅನ್ನೋ ಸ್ಕೂಲಿಗೆ ಹತ್ತಿರದ ಪಟ್ಟಣಾಂತ ಅನ್ನಲಾಗದ ಪಟ್ಟಣದ ಹೊಸಾ ಮೇಡಂ ವರ್ಗವಾಗಿ ಬರ್ತಿದ್ದುದು.
ಸರಿ.. ಮೂರನೇ ಪಿರಿಯಡ್ಡು ಗಣಿತದ್ದು.  ಪ್ರವೇಶ ಆಯ್ತು ಮೇಡಂ ದು...

“ಗೂಡ್ ಮಾರ್ನಿಂಗ್ ಸಾ....”
ಎಲ್ಲಾ ಒಕ್ಕೊರಲಲ್ಲಿ ಹೇಳ್ತಿದ್ದುದು ಬೆಳಿಗ್ಗೆ ಇದನ್ನು ಮಾತ್ರ. ಗಂಡಸಾಗಲೀ...ಹೆಂಗಸಾಗಲೀ...ಹೇಳ್ತಿದ್ದುದು “ಸಾ” ಅಂತಲೇ...

“Attention... please...ಇಲ್ಲಿ ಕೇಳಿ...” ಅಂತ ಮೇಡಂ ಕೋಮಲ ದನಿ ಕೇಳಿ ಎಲ್ಲರೂ ಗಪ್-ಚಿಪ್.
“ನನ್ನ ಹೆಸರು- ಸುವರ್ಣ ನಾನು ಪಕ್ಕದ ವಿಜಯಪುರ ಪಟ್ಟಣದವಳು...ಇಂದಿನಿಂದ ನಿಮಗೆ ಗಣಿತ ಪಾಠ ನಾನೇ ಮಾಡುವುದು... ಓಕೆ...” ಹೊಸ ಮೇಡಂ ತನ್ನ ಬಗ್ಗೆ ಪರಿಚಯಕೊಟ್ಟರು.
“ಎಸ್ಸಾ” ಮತ್ತೆ ಎಲ್ಲರ ಒಕ್ಕೊರಲು...
“ನಾನು ಸರ್ ಅಲ್ಲ... ಮಿಸ್ ಅನ್ನಿ ಇಲ್ಲಾ ಮ್ಯಾಮ ಅನ್ನಿ” ಎನ್ನುತ್ತಾ
“ಸರಿ ಈಗ ಎಲ್ಲ ನಿಮ್ಮ ನಿಮ್ಮ ಪರಿಚಯ ಮಾಡ್ಕೊಳ್ಳಿ... ಹಾಂ...”
ಮೊದಲ ಸಾಲಿನ ಹುಡುಗಿಯರಲ್ಲಿ ಮೊದಲಿನ ಹುಡುಗಿಯನ್ನ ನೋಡಿ..


“ನೀನು ಹೇಳಮ್ಮ... ನಿನ್ನ ಹೆಸರು ಯಾವ ಊರು..ಅಂತ”...



ಹೀಗೇ...ಒಬ್ಬೊಬ್ಬರಾಗಿ ಎಲ್ಲರ ಪರಿಚಯ ಆದಮೇಲೆ.. ಮೇಡಂ ...
“ನಿಮ್ಮ ಕ್ಲಾಸಿನಲ್ಲಿ ಯಾರು ಚನ್ನಾಗಿ ಹಾಡು ಹಾಡ್ತಾರೆ..?” ಎಂದು ಕೇಳಿದರು. ಒಡನೆಯೇ ಮತ್ತೆ ಒಕ್ಕೊರಲಲ್ಲಿ.... “ಎಂಕ್ಟೇಸಾ”....ಎಂದರು ಎಲ್ಲರೂ...
“ಏನಿದು...?? ಏನು..?? ಎಂಕ್ಟೇಸಾ!! ..ಅಂದ್ರೆ??” ಕೇಳಿದ್ರು ಮೇಡಂ ಏನೂ ಗೊತ್ತಾಗದೇ.
ಶೈಲಜಾ ಎದ್ದು ನಿಂತು... “ಮ್ಯಾಮ್ ವೆಂಕಟೇಶ್ ..ಅದೇ ಮೂರನೇ ಬೆಂಚಲ್ಲಿ ಕುಳಿತಿದ್ದಾನಲ್ಲಾ.....ಹಾಂ..ಅಲ್ಲಿ...,  ಅವನು ಚನ್ನಾಗಿ ಹಾಡ್ತಾನೆ” ಎಂದಳು.
“ಬನ್ರೀ ವೆಂಕಟೇಶ್.....” ಎಂದರು ಮೇಡಂ....  ಒಡನೇ ಹುಡುಗರೆಲ್ಲಾ...
“ಓ ಓ.. ಏನು ಮರ್ವಾದೆ,,??!!! ಎಂಕ್ಟೇಸನ್ಗೆ..” ಎಂದರು ಉದ್ಗಾರ ತೆಗೆಯುತ್ತಾ,,,,
“ಓಗೋ ಎಂಕ್ಟೇಸಾ..” ಎನ್ನುತ್ತ ಮೆಲ್ಲಗೆ ತಳ್ಳಿದ ಅವನ ಬೆನ್ನ ಮೇಲೆ ಕೈಯಿಟ್ಟು ಅವನ ಸ್ನೇಹಿತ ಪಕ್ಕದಲ್ಲೇ ಕುಳಿತಿದ್ದ ಸುಲೇಮಾನ್. "ಓಗೋ..ಓಗೋ..." ಎಂದರು ಎಲ್ಲಾ ಹುಡುಗರು.
ಆದರೆ....
ಯಾಕೋ ..ಬೆಳಿಗ್ಗೆಯಿಂದ ಒಂಥರಾ ಮುಖ ಮಾಡಿದ್ದ ವೆಂಕಟೇಶ... ಮೂಡಲ್ಲಿ ಇರ್ಲಿಲ್ಲ..... ಇಲ್ಲಾಂದ್ರೆ..ಸಿಳ್ಳೆ ಸೀನ, ಎಂಕ್ಟೇಸ ಇಬ್ರದ್ದು ಆರ್ಕೆಸ್ಟ್ರಾನೇ ಶುರು ಆಗ್ತಿತ್ತು. ಅದಕ್ಕೆ ತಕ್ಕ ಹಾಗೆ ಸಿಲ್ವರ್ ಸುಲೇಮಾನ್ ಬೆಂಚನ್ನೇ ತಬಲ ಮಾಡ್ತಿದ್ದ.


ಮೇಡಂ ಮೂರ್ನ್ಲಾಲ್ಕು ಬಾರಿ ಹೇಳಿ .. ಅವನ ಸ್ನೇಹಿತ್ರು..ಬಲವಂತ ಮಾಡಿದ ಮೇಲೆ...ವೆಂಕಟೇಶ ಬೋರ್ಡ್ ಬಳಿ ಹೋಗಿ ಕೈ ಕಟ್ಟಿ ನಿಂತ. ಮಕ್ಕಳೆಲ್ಲಾ ಅವನ ಹಾಡನ್ನು ಕೇಳಲು ನಿಶ್ಶಬ್ದರಾಗಿ ಕುಳಿತರು.
ವೆಂಕಟೇಶ ಪ್ರಾರಂಭಿಸಿದ...
“ಜಯತು... ಜಯ... ವಿಠಲಾ... ನಿನ್ನ ನಾಮವು..ಶಾಂತಿ..........."
ಎಲ್ಲರೂ ಮೌನ.... ಹುಡುಗ ಹುಡುಗಿಯರ ಮುಖದ ಮೇಲೆ ಅತ್ಯಾಶ್ಚರ್ಯದ ಮುಖಭಾವ.... ಮೇಡಂ ಸಹಾ...ಸ್ಟನ್....!!!!
ಸುಶ್ರಾವ್ಯ ಹಾಡು ಬಯಸಿದವರಿಗೆ!!! 
ಪಾಠವನ್ನು ಒಪ್ಪಿಸೋ ಎರಡನೇ ತರಗತಿ ಹುಡುಗ... “ಶಾಲೆ” ಪಾಠವನ್ನು ಓದಿದಂತಿತ್ತು ವೆಂಕಟೇಶನ ಹಾಡು....
“ಜಯತು ಜಯ ವಿಠಲ (ಇದು ನನ್ನ ಶಾಲೆ). ನಿನ್ನ ನಾಮವು ಶಾಂತಿಧಾಮವು (ನನ್ನ ಶಾಲೆ ನಮ್ಮ ಅಕ್ಕ ಪಕ್ಕದ ಊರುಗಳಿಗೆಲ್ಲಾ ಮಾದರಿ ಶಾಲೆ). ಸೌಖ್ಯದಾರಾಮಾ (ನನ್ನ ಶಾಲೆಯಲ್ಲಿ ಹದಿನಾಲ್ಕು ಕೊಠಡಿಗಳಿವೆ)” ಇತ್ಯಾದಿ...... 
ಕ್ಲಾಸೆಲ್ಲಾ ನಗುವಿನ ಗುಲ್ಲೋ ಗುಲ್ಲು...
ಮೇಡಂ...ಸಹನೆ ಕಟ್ಟೆ ಒಡೆಯಿತು....
“ಏಯ್... ಏಯ್.ಏಯ್.....ಸಾಕು ನಿಲ್ಲಿಸಿ...” ಎನ್ನುತ್ತಾ ಎಲ್ಲರನ್ನು ಗದರಿಸಿ, ವೆಂಕಟೇಶನ್ನ ನೋಡುತ್ತಾ
“ನಿಲ್ಲಿಸ್ರೀ ...ವೆಂಕಟೇಶ್!!....ನಾನು ಪಾಠ ಓದಿ ಅಂತ ಅಲ್ಲಾ ಹೇಳಿದ್ದು!!!,...ಹಾಡು ಹಾಡಿ ಅಂತಾ....!!” ಎಂದರು ಬೇಸರದಿಂದ
“ಹಾಡೋಕೆ ಬರೋಲ್ಲಾ ಅಂದ್ರೆ ಮುಂಚೆನೇ ಹೇಳ್ಬೇಕಪ್ಪಾ.... ಏನಮ್ಮ ಶೈಲಜಾ ನಿಮ್ಮ ಕ್ಲಾಸಿನ ಗಾನ ಗಂಧರ್ವ ಇವರೇನಾ??!!... ಬಹಳ ಚನ್ನಾಗಿದೆ....!!!!” ಎಂದರು ಬೇಸರದಿಂದ.
ಎಲ್ಲರೂ.. “ ಇಲ್ಲಾ ಮೇಡಂ ಚನ್ನಾಗಿ ಹಾಡ್ತಾನೆ ಇವನು....ಯಾಕೋ ಈವೊತ್ತು...ಗೊತ್ತಿಲ್ಲ....”
ಮೇಡಂ ಗೆ ರೇಗಿತ್ತು...
“ಸಾಕು ನಿಲ್ಲಿಸ್ರೀ ನಿಮ್ಮ ರೆಕಮೆಂಡೇಶನ್ನು... ಅಲ್ಲಾ ಹಾಡಿನ ಗಂಧಾನೇ ಗೊತ್ತಿಲ್ಲ ಇವರಿಗೆ...ಹಾಡ್ತಾರಂತೆ..ಹಾಡು...!!!”
ಎಂದು.. ಮುಖ ಗಂಟಿಕ್ಕಿ...
“ಆಯ್ತು ಬಿಡಿ.. ನಾಳೆಯಿಂದ ಪಾಠ ಪ್ರಾರಂಭಿಸ್ತೇನೆ... ಈ ದಿನ ನೀವು ಕೊಟ್ಟಿರೋ ಶಾಕೇ ಸಾಕು...” ಎನ್ನುತ್ತಾ...ತಮ್ಮ ಪುಸ್ತಕಗಳನ್ನು ಕೈಲಿ ಹಿಡಿದು ಹೊರನಡೆದರು.

ತಿಂಗಳಲ್ಲಿ ಒಮ್ಮೆ ನಡೆಯುವ ’ಶಾರದಾ” ಪೂಜೆಯೂ ಮೂರುದಿನಗಳಲ್ಲಿ ನಡೆಯುವುದಿತ್ತು.. ಆ ದಿನದ ಬೆಳಿಗ್ಗೆ ಪ್ರಾರ್ಥನೆ ನಂತರ HM ಘೋಷಣೆ ಮಾಡಿದರು...
“ನಿಮಗೆಲ್ಲಾ ಗೊತ್ತಿರೋ ಹಾಗೆ ತಿಂಗಳ ಶಾರದಾ ಪೂಜೆ ಶುಕ್ರವಾರ ಸಂಜೆ ೩.೦ ಗಂಟೆಗೆ ಎಲ್ಲಾ ಕ್ಲಾಸು ಮುಗಿದ ನಂತರ ಸ್ಕೂಲಿನ ಸಭಾಂಗಳದಲ್ಲಿ ಆಗುತ್ತೆ... ಸುಲೇಮಾನ್ ನೀನು ಪೂಜೆ ಮೆಮೋ ಪುಸ್ತಕಾನ ಊರಿನ ಹಿರಿಯರಿಗೆ ತೋರಿಸಿ ಅವರನ್ನ ಆಹ್ವಾನಿಸಿ ಬಾ... ಇನ್ನು ಪೂಜೆಯ ಸಮಯದ ಪ್ರಾರ್ಥನೆ ಜವಾಬ್ದಾರಿ... ವೆಂಕಟೇಶನದ್ದು” ಎಂದರು... 
ತಕ್ಷಣ ಹೊಸ ಮೇಡಂ ಸುವರ್ಣ...
"ಸರ್ ಸರ್.. ವೆಂಕಟೇಶಾನಾ??... ಏಳನೇ ಕ್ಲಾಸಿನ ವೆಂಕಟೇಶಾನಾ..???. ಅಯ್ಯೋ ಅವನು ಮಾತ್ರ ಬೇಡ ಸರ್..ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ ಅವನು ಹಾಡೋದು ..?? ಅವನು ಹಾಡೋದೂಂದ್ರೆ ಏನು..??!!!” 
ಎನ್ನುತ್ತಾ ತಮ್ಮ ಆತಂಕ ತೋಡಿಕೊಂಡರು..
ಅವರ ಮಾತನ್ನು ಕೇಳಿ HM  ಮತ್ತೆ ಇತರ ಉಪಾದ್ಯಾಯರು ಚಕಿತರಾದರು. ..ಆದ್ರೆ...
ಮಕ್ಕಳೆಲ್ಲಾ...ಅದರಲ್ಲೂ ಏಳನೇ ತರಗತಿ ಮಕ್ಕಳು ನಗಲು ಪ್ರಾರಂಭಿಸಿದರು.
“ಸೈಲೆನ್ಸ್.... ಯಾಕೆ ..ಯಾಕೆ ಎಲ್ಲಾರೂ ನಗೋದು...??” ಎನ್ನುತ್ತಾ HM ರವರು ಹೊಸ ಮೇಡಂ ಕಡೆ ನೋಡಿ... 
“ಯಾಕಮ್ಮಾ ..ಯಾಕೆ ಹಾಗೆ ಹೇಳಿದ್ರಿ?... ವೆಂಕಟೇಶ್ ನಮ್ಮ ಶಾಲೆಯ ಒಳ್ಳೆಯ ಗಾಯಕ...” ಎಂದಾಗ ಶಾಕ್ ಆಗೋ ಸರದಿ ಹೊಸ ಮೇಡಂದು....
“ಅಲ್ಲ ಸರ್..ಮೊನ್ನೆ ಇವರ ಕ್ಲಾಸಿಗೆ ಹೋಗಿ..........................” ಎಂದು ಪೂರ್ತಿ ವಿಷಯ ತಿಳಿಸಿದಾಗ ....
ಉಪಾದ್ಯಾಯರೂ ಸೇರಿಕೊಂಡರು ಈಗಾಗಲೇ ನಗಲು ಪ್ರಾರಂಭಿಸಿದ್ದ ಮಕ್ಕಳ ಜೊತೆ.


ಆ ನಂತರವೇ ಗೊತ್ತಾಗಿದ್ದು.... ಆ ದಿನ ಗೌಡರ ತೋಟದ ಸೀಬೇ ಕಾಯಿ ಕದ್ದು ಬಂದಿದ್ದರಿಂದ ಅವನ ಅಪ್ಪನ ಬೈಗುಳ ತಿಂದು ಬಂದಿದ್ದೂ ಅಲ್ಲದೇ ಆ ದಿನದ ಖರ್ಚಿನ ಎಂಟಾಣೆಗೂ ಖೋತಾ ಮಾಡ್ಕೊಂಡಿದ್ದ ಎಂಕ್ಟೇಸಾ ಅಂತ!!. ಹಾಡೋಕೆ ಆಗೊಲ್ಲ ಅಂತ ಸುಲೇಮಾನ್ ಗೆ ಹೇಳಿದ್ನಂತೆ...
ಅದಕ್ಕೆ ಸುಮೇಮಾನ್ “ಲೇ ಎಂಕ್ಟೇಸಾ ..ಮ್ಯಾಡಮ್ಮು ಮ್ಯಾತ್ಸ್ ಪಾಠ ಮಾಡೋದು ಆಮ್ಯಾಕೆ ಇನ್ನೂ ಟಫ್ ಮಾಡ್ಬಿಡ್ತಾರೆ ಹೋಗಿ ಹಾಡೋ” ಅಂತ ಹೆದರ್ಸಿದ್ದನಂತೆ. 
ಹೊಸ ಮೇಡಂ ಗೆ ಬೇಸರ ತರಿಸೋದು ಬೇಡ ಅಂತ ತೋರಿಸಿದ್ದು ಈ ವರಸೆ...!!! ಆಗ್ಲಿಂದ ಸ್ಕೂಲ್ ಮಕ್ಕಳೆಲ್ಲಾ... ಎಂಕ್ಟೇಸಾ ಅಂದ್ರೆ .... "ಓ..ಜಯತು ಜಯ ಎಂಕ್ಟೇಸಾ ನಾ" ಅಂತ ಹೇಳ್ತಿದ್ದರಂತೆ. 

Saturday, October 1, 2011

ಪ್ರಕಾಶನ- ಕಥೆಯ ಇನ್ನೊಂದು ..ಸಾಧ್ಯ ...ಮುಕ್ತಾಯ.....

ಪ್ರಕಾಶನ ಕಥೆ.....ಹೀಗೆ.....ಹೀಗೂ ಆಗಬಹುದು.....

ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು.................

ಇಲ್ಲಿಂದ......ಜಲನಯನದ.....ಪುಟ್ಟ ..ಮುಕ್ತಾಯ....ಯಾಕಂದ್ರೆ ಸುಂದರ ಕ್ಷಣಗಳು ಎಷ್ಟು ಪುಟ್ಟದ್ದು ಎನಿಸುತ್ತವೆಯೋ ಅಷ್ಟೇ ದೀರ್ಘ ಮತ್ತು ಮಧುರವಾಗಿರುತ್ತವೆ....ಅವರವರ ಭಾವಕ್ಕೆ ....ಅಲ್ವಾ...??.....ಸರಿ...ಕಥೆಗೆ ಬರ್ತೀನಿ..............ಮುಂದಕ್ಕೆ.....

ನನ್ನ ಕೆನ್ನೆಯನ್ನು ಅವನೆದೆಗೆ ಒತ್ತುವಂತೆ ಅವನೆದೆಯಲ್ಲಿ ಮುಖ
ಹುದುಗಿಸಿದೆ...ಅವನು ತನ್ನ ಬಲಿಷ್ಠ ಬಾಹುಗಳಿಂದ ನನ್ನ ಬಂಧಿಸಿದ...
ತೋಳ್ತೆಕ್ಕೆಯಲಿ ಅವನ ಬಿಸಿಯುಸಿರಲಿ...ಕಣ್ಮುಚ್ಚಿ ....ಮೈ ಮರೆತೆ....
ಆಹಾ ಎಂಥ ಹಿತವಾಗಿತ್ತು..! ಅವನ ತೋಳ್ಬಿಗಿತ....!!!ಎಲ್ಲೋ ತೇಲಿದ ಹಾಗೆ.....

..............................................................................

ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..

" ಒಂದು ವಿಷಯ ಕೇಳಲಾ...?"

"ಕೇಳು..ಪುಟ್ಟಣ್ಣಿ.."

ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು...
ಅಪ್ಯಾಯಮಾನವಾಯಿತು...
"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"

"ಛೇ.. ಛೇ... ನಾನು ಅಂಥವನಲ್ಲ..."

"ನಿಮ್ಮ ಕಾಲೇಜಿನಲ್ಲಿ..."

"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..

ರಾಜ್ಯಕ್ಕೆ ನಾನು ಎರಡನೆ Rank ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು ಇಷ್ಟ...

"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"

"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"

"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"

"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."

ನನಗೆ ಕುತೂಹಲ... !!

" ಹೇಗಿದ್ದಾಳೆ..??"

" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."

ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!

"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"

"ಬರುತ್ತಿದ್ದಳು..."

"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"

"ಛೇ.. ಛೇ.. ಹಾಗೇನಿಲ್ಲ"

"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"

"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."

"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"

" ಅವಳೂ ಕೆಲಸ ಮಾಡುತ್ತಾಳೆ..
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."

ನನಗೆ ಕೋಪ ಬರತೊಡಗಿತು...

ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?..

ಛೇ..!!

"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"
"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?
ಅವಳ ಚಂದ ಇಷ್ಟಪಟ್ಟೆ ಅಷ್ಟೆ...
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."

" ಇದನ್ನು ನಾನು ಹೇಗೆ ನಂಬಲಿ...? "
ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು...
ಬಹಳ ಕಠಿಣವಾಗಿ ಹೇಳಿದ...

"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ..
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."

ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...

ನನಗೂ.. ಅಸಾಧ್ಯ ಕೋಪ ಬಂತು....
ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...

ಇಲ್ಲಿಂದ ಮತ್ತೆ.....ಜಲನಯನದ ಪಯಣ...........

........ಕಿವಿಯಲ್ಲಿ..ಯಾರೋ ಪಿಸುಗುಟ್ಟಿದಂತೆ...... “ಏಯ್ ಚಿನ್ನಾ.... ಪುಟ್ಟಣ್ಣಿ....
ಏನು ...? ಇಷ್ಟೊಂದು ಗಾಢ ನಿದ್ದೇನಾ...?? ನಿಂತಲ್ಲೇ ನನ್ನ ಅಪ್ಪಿದವಳು...
ಹಾಗೇ...ಕಣ್ಮುಚ್ಚಿ ನಿಂತದ್ದು... ನಿನ್ನ ಈ ಮುಚ್ಚಿದ ಸುಂದರ ಗುಲಾಬಿ ದಳದಂತಹ
ಕಣ್ರೆಪ್ಪೆ..ನಿನ್ನ ಈ ಸುಂದರ ಮಚ್ಚೆ..., ನಿನ್ನ ಮಧುರ ತುಟಿಗಳು...ನೋಡುತ್ತಾ ನಾನೂ
ಮೈ ಮರೆತೆ.... ನಿನ್ನನ್ನು ಅನಾಮತ್ ಎತ್ತಿ.. ಹಾಗೇ ...ಕೋಮಲ ಹೂವಿನ
ಮಾಲೆಯನ್ನು ಇಡುವ ಹಾಗೆ ಹಾಸಿಗೆಮೇಲಿಟ್ಟು.....ನಾನೂ ಮಲಗಿದೆ. ಮದುವೆಯ
ಓಡಾಟ ತಡ ರಾತ್ರಿಯವರೆಗೂ ನಡೆದ ರಿಸಿಪ್ಷನ್..... ನೀನೂ ನನ್ನಂತೆ
ಆಯಾಸಗೊಂಡು ಮುಗುಳ್ನಗೆಯ ಸುಖ ನಿದ್ದೆಯಲ್ಲಿದ್ದೆ.. ನಿನ್ನ ಆ ಮುದ್ದುಮುಖವನ್ನು
 ನೋಡುತ್ತಾ ನಾನೂ ನಿದ್ರಿಸಿದ್ದು ನನಗೂ ಅರಿವಾಗಿರಲಿಲ್ಲ..... ಈಗಷ್ಟೆ.. ಅಮ್ಮ
ಬಾಗಿಲು ಬಡಿದಂತಾಗಿ ಎಚ್ಚರ ಆಯ್ತು.....”

“ಹೌದಾ....ಅಯ್ಯೋ..... ನನ್ನ ಎತ್ತಿ ಮಲಗಿಸಿದ್ರಾ...??!!”
ಕೇಳಿದೆ ನಾಚಿಕೊಂಡೇ

ಹಾಗಾದ್ರೆ.....ಹಾಗಾದ್ರೆ....ಇವರ ಅತ್ತಿಗೆ ತಂಗಿ..? ಸ್ವೀಟ್ ಹಾರ್ಟು....???!!!

ಅಯ್ಯೋ ಬರೀ ನನ್ನ ಹುಚ್ಚು ಕನಸು.........

ಅವರ ಮುಖ ನೋಡಿದೆ.... ಮಗುವಿನ ಮುಗ್ಧತೆ ..ಮತ್ತು ತನ್ನ ಮುದ್ದು ಮಡದಿಯನ್ನೇ
ಮೆಚ್ಚುಗೆಯಿಂದ ನೋಡುತ್ತಿದ್ದ ಅವರ ಧನ್ಯತಾಭಾವ.... ನನ್ನೆಲ್ಲ ಕನಸಿನ ಕಲ್ಪನೆಗಳಿಗೆ
ತೆರೆಯೆಳೆಯಿತು.... ಛೇ...ಇಂತಹವರ ಬಗ್ಗೆ ನನ್ನ ಹುಚ್ಚು ಮನಸು ಏಕೆ ಅಂತಹಾ
ಯೋಚನೆ ಮಾಡಿತು..?? ...ತಲೆಕೊಡವಿದೆ..

ಹಾಸಿಗೆ ಬಿಟ್ಟೇಳುವ ನನ್ನನ್ನು ಹಾಗೇ ತನ್ನತ್ತ ಎಳೆದುಕೊಂಡು
ಅಪ್ಪಿಕೊಂಡರು....ಮತ್ತದೇ ಸುಖ ...!! ಅವರ ತೆಕ್ಕೆಯಲ್ಲಿ ಮತ್ತೆ
ಕರಗಿಹೋದೆ.....!!!!!!!!!!!