Friday, July 3, 2009

ಕನಸಲ್ಲೇ ಇರಲು ಬಿಡಿ



ಅನ್ನಕೆ ಬೇಕಾದ ಮಾಡೋದಕೆ ನಾವು
ಚಿನ್ನ ತೆಗೆಯೋದಕ್ಕೆ ನಾವು
ಕನ್ನ ಕೊರ್ದು ಬಾಚ್ಕೊಂಡು
ದರ್ಬಾರು ಮಾಡೋಕೆ ನೀವು

ಅಕ್ಷರ ಕಲಿಸೋರು ನಾವು
ಮತ್ಸರ ಉಡುಗಿಸೋರು ನಾವು
ನಮ್ಮ ಶತೃಗಳ ಜೊತೆ ವ್ಯವಹಾರ
ಮಾಡಿ ಮಜಾ ಮಾಡೋಕೆ ನೀವು

ಕರೆಂಟಿಲ್ಲದ ಮನೇಲಿ ನಾವು
ಬಂಜರಲ್ಲಿ ಬೆಳಿಯೋಕೂ ನಾವು
ಓದೋಮಕ್ಕಳಿಗೆ ದೀಪಾನೂ ಕೊಡ್ದೋರು..
ಕತ್ತಲಲ್ಲಿ ಪರ್ದಾಡೋರು ನಾವು
ಸಾವ್ರಾರು ದೀಪಾನ ಹಗಲಲ್ಲೂ
ಮನೇ ತುಂಬ ಉರಿಸೋರು ನೀವು

ನೂರು ಜನ ತಿನ್ನೋದನ್ನ ಚಲ್ಲಾಡಿ
ತಿಂದೂ ತಿನ್ನದಹಾಗೆ ಒಬ್ಬರೇ ತಿಂತೀರ
ಒಬ್ಬರು ಚಲ್ಲಾಡಿ ತಿನ್ನೋದು ಕೊಡಿ
ಹತ್ತು ಬಡವ್ರ ಹೊಟ್ಟೆ ತುಂಬುತ್ತೆ
ಅನ್ನೋದನ್ನ ಯಾಕೆ ಮರೀತೀರಾ?
ಸಾವ್ರ ದೀಪ..ಒಂದೇ ಮನೆ
ಒಂದೊಂದಾದ್ರೂ ದೀಪ ಸಾವ್ರ ಮನೆ
ಬೆಳ್ಗುತ್ತೆ.. ಬೆಳ್ಯುತ್ತೆ ಇಷ್ಟಾದರೂ ಕಲೀತೀರಾ..?

ಇದ್ದೋರು ಇಲ್ದೋರ್ಗೆ ಕೊಡೋದು ಕಲಿತ್ರೆ
ಇದ್ದೋರು-ಇಲ್ದೋರು ಅನ್ನೋ ಭೇದ ಇರುತ್ತಾ?
ಕುರ್ಚೀಲಿ ಕೂತು ದರ್ಬಾರ ಮಾಡೋರು
ಗುಡ್ಲಲ್ಲಿರೋರ ಸುಖ-ದುಃಖ ಅರಿತರೆ
ಹೊಟ್ಟೇಗಿಲ್ದೆ ಸಾಯೋರು, ಬಟ್ಟೇ ಇಲ್ದೇ ಬೇಯೋರು....,
ಓಹ್..ಹೀಂಗೂ ನನ್ ಕನಸು ನನಸಾಗ್ತದಾ,,??
ಹಗಲ್ಗನಸು ಅಲ್ಲ ಇದು ಎದ್ದು ನೋಡು ನನಸು....!!
ಅಂತ ಯಾರಾದರೂ ನನ್ನ ಎಚ್ಚರಿಸೋ ಕಾಲ ಬರುತ್ತಾ???
ಹಾಗೊಂದು ವೇಳೆ ..ಇಲ್ಲ ಅಂದ್ರೆ....
ನನ್ನನ್ನ ನನ್ನ ಕನಸಲ್ಲೇ ವಿಹರಿಸಲು ಬಿಡಿ.