Monday, November 30, 2009

ಏನ್ಮಾಡೋಕೆ ಹೋದೆ ...ಏನಾಯ್ತು...?


(ನನ್ನ ಫೋಟೋ ನೋಡ್ದೆ ಇರೋರಿಗೆ....ಮಧ್ಯೆ ಇರೋದೇ...ನಾನು..ಅಂದರೆ ಜಲನಯನ...)
ನನ್ನ ಬ್ಲಾಗಾಯಣದ ಮೂಲ ಕಾರಣ ಸುಗುಣ (ಮನಸು)...ನಮ್ಮ ಕನ್ನಡ ಕೂಟದ ಯಾವುದೋ ಒಂದು ಮೀಟಿಂಗ್ ನಲ್ಲಿ ತಾನು ಬ್ಲಾಗ್ ಮಾಡ್ತಿದ್ದೇನೆ..ನೋಡಿ ನಿಮ್ಮ ಅನಿಸಿಕೆ ತಿಳಿಸಿ ಸಾರ್..(ಗಮನಿಸಿ ಈ ಸಂಬೋಧನೆಯನ್ನ..!!!), ಅವರ ಪತಿ ಪರಮೇಶ್ವರ (ಮಹೇಶ್..ಉರ್ಫ್..ಸವಿಗನಸು..ಒಂದು ರೀತೀಲಿ ಅವರು ಬ್ಲಾಗ್ ಪ್ರಾರಂಭಿಸೋಕೆ ಅವರ ಅರ್ಧಾಂಗಿ ಇನ್ನೊಂದು ಕಡೆಯಿಂದ ನಾನು ಕಾರಣ...ಇಲ್ಲ ಅಂತ ಹೇಳ್ಲಿ..ಕೇಳಿ ನೀವೇ...ಹಾಂ ಮತ್ತೆ...) ಹೌದು ಸರ್ (ಇವರ ಸಂಬೋಧನೇನೂ...ಹೇಗೆ ಛೇಂಜ್ ಆಗುತ್ತೆ ನೀವೇ ನೋಡಿ...) ನೀವು ನೋಡಿ ನಿಮ್ಮ ಅನಿಸಿಕೆಯನ್ನ ತಿಳಿಸಿ ಅಂತ ದನಿಗೂಡಿಸೋದೇ?? ....
ಸರಿ ಒoದು ಶುಭ ದಿನ ಪ್ರಾರಂಭಿಸಿಯೇ ಬಿಟ್ಟೆ ನನ್ನ ಬ್ಲಾಗುಬಂಡಿ ಪಯಣ....ಮೊದ ಮೊದಲಿಗೆ ಮನಸು...ಪ್ರತಿಕ್ರಿಯೆ, ನಂತರ ಅವರಿಗೆ ತಿಳಿದ ಒಂದಿಬ್ಬರು ಬ್ಲಾಗು ಮಿತ್ರರು...ಹೀಗೆ..ನನ್ನ ಹಿಂಬಾಲಕರು, ..sorry...ಇಂಗ್ಲೀಷಿನಲ್ಲಿ ಹೇಳಿದ್ರೆ..ಸರಿ..blog followers...!! , ಈಗ ಸರಿಯಾಯ್ತು..
ನನ್ನ ಬ್ಲಾಗನ್ನು ಓದಿ ಪ್ರತಿಕ್ರಿಯೆ ನೀಡೊಕೆ ಶುರು ಹಚ್ಚಿದರು...ನೋಡ್ ನೋಡ್ತಾ ಇದ್ದಂತೆ ನನ್ನ followers ಲಿಸ್ಟ್ ದೊಡ್ದದಾಯ್ತು... ’ಮನಸು’ ನ overtake ಮಾದ್ಬಿಟ್ಟೆ...ನನ್ನ ಎದೆ ಉಬ್ಬಿ...Arnold ಥರ ಆಗೋಯ್ತು....ಇನ್ನೇನು..ನಾನು...ಕನ್ನಡ ಬ್ಲಾಗಿಗರ Numero Uno ಅಗ್ಬಿಟ್ಟೆ ಅಂತ ಊದಿಕೊಳ್ಳುವಾಗ ನನ್ನ ಉತ್ಸಾಹದ ಬಲೂನಿಗೆ ಸೂಜಿ...??.!! ಅಲ್ಲಲ್ಲ....ದಬ್ಬಣ....!!!ಚುಚ್ಚಿದ್ರು ನಮ್ಮ ಗಂಡು ಬ್ಲಾಗು ಮಿತ್ರರು (ಅವರ ಪ್ರತಿಕ್ರಿಯೆಗಳು ಈಗ ಬಹುಶಃ ತಪ್ಪೋದೇ ಇಲ್ಲ)...
ನನ್ನ ಒಂದು ಬ್ಲಾಗ್ ಪೋಸ್ಟಿಗೆ..ಅವರ ಪ್ರತಿಕ್ರಿಯೆ...."ಜಲನಯನ ಮೇಡಂ...ನೀವು ತುಂಬಾ..ತುಂಬಾ..ಚನ್ನಾಗಿ ಬರೀತೀರಿ...ನಿಮ್ಮ ಟಾಪಿಕ್ ಬಹಳ ಸಮಯೋಚಿತ ವಾಗಿರುತ್ತೆ...ನಿಮ್ಮ ಬಗ್ಗೆ ತಿಳಿಸಿ...ನಾನು ನಿಮ್ಮೊಂದಿಗೆ ಚರ್ಚಿಸಬೇಕೆಂದಿದ್ದೇನೆ...ನನ್ನ...ಮೈಲ್ ಐಡಿ.........@.......com." ಅಂತ ಬರೆಯೋದೇ...?? ಇದ್ಯಾಕೋ ಎದವಟ್ಟಾಗ್ತಾ ಇದೆ...ನನ್ನ ಅಪ್ಪ-ಅಮ್ಮ ನಿಗೆ ಮೊದಲ ಮಗು ಹೆಣ್ಣು ಆಗ್ಬೇಕು ಅನ್ನೋ ಉತ್ಕಟ ಅಭಿಲಾಷೆ ಇದ್ದದ್ದು ನಿಜ...ಆದ್ರೆ ಬೆಳೆದು ಮದುವೆ ಆಗಿ ಮೊಮ್ಮಗಳನ್ನು ಕೊಟ್ಟಿರೋ ಮಗ ಹೀಗೇ ರಾತ್ರೋ ರಾತ್ರಿ ಲಿಂಗ ಪರಿವರ್ತನೆಯಾದ ಅಂದ್ರೆ...?? ಅದೂ ಕುವೈತ್ ನಲ್ಲಿದ್ದುಕೊಂಡು ದೀನಾರ ದವಲತ್ತು ಮಾಡೋನಿಗೆ..!!! ??? ಛೆ..ಛೆ...ಸರಿಯಿಲ್ಲ,,, ಎನಿಸಿ ತಲೆ ಕೊಡವಿಕೊಂಡೆ...
ನಾನು ಬರೆದೆ... “ಧನ್ಯವಾದ ನನ್ನ ಬ್ಲಾಗ್ ಗೆ ಪ್ರತಿಕ್ರಿಯೆ ನೀಡಿದಿರಿ..ಆದ್ರೆ..ನಿಮಗೆ ನನ್ನ ಬಗ್ಗೆ confusion ..!!! ಇರೋ ಹಾಗಿದೆ....ದಯವಿಟ್ಟು ನನ್ನ ಪ್ರೊಫೈಲ್ ಒಮ್ಮೆ ನೋಡಿ..ನಿಮ್ಮ confusion ನ್ನೂ..ದೂರ ಆಗುತ್ತೆ...ಮತ್ತು ನಿಮಗೆ ನನ್ನ ಈ ಮೈಲ್ ಗೆ ಲಿಂಕೂ ಸಿಗುತ್ತೆ..." ಅಂತ ಬೆವರು ಒರೆಸಿಕೊಳ್ಳುತ್ತಾ ...ಟೈಪಿಸಿದೆ...
ನಂತರ..ಸ್ವಲ್ಪ ಥಂಡ--ಥಂಡ,,ಕೂಲ್..ಕೂಲ್,,,ಅಂತ ಒಂದು ಪೆಪ್ಸಿ ಕ್ಯಾನ್ ಕೊಡಮ್ಮ ಅಂತ ಮಗಳಿಗೆ ಹೇಳಿ cool ಕುಡಿದು..ಯೋಚಿಸ್ದಾಗ...ಎಡವಟ್ಟು ಎಲ್ಲಿ ಆಗಿದೆ ಅಂತ ಅರ್ಥ ಆಯ್ತು...
ನನ್ನ ಬ್ಲಾಗ್ ಹೆಸರು..."ಜಲನಯನ" .....ಆದ್ರೂ ನಾನು ಪ್ರತಿಕ್ರಿಯೆ ಕೊಡುವಾಗಲೆಲ್ಲಾ ಎಲ್ಲೂ ಪ್ರತಿಕ್ರಿಯಿಸುತ್ತಿರುವುದು ಹೆಣ್ಣು ಅನ್ನೋ..ಕ್ಲೂ ಕೊಡೋ ತರಹ ಬರ್ದಿಲ್ಲವಲ್ಲಾ...??!! ..ಛೇ..ಹೋಗ್ಲಿ..ಬಿಡು...ಈಗ confusion ದೂರ ಆಯ್ತಲ್ಲ..ಅಂತ ನಿಟ್ಟುಸಿರು ಬಿಟ್ಟೆ...
…ಹಾಂ...ಹಿಂದೇನೇ..ಆತಂಕ ಶುರು ಆಯ್ತು..ನಾನು ಅಂದರೆ ಜಲನಯನ ಹೆಣ್ಣು ಅಂತ..ಎಲ್ಲಾ ಗಂಡು ಬ್ಲಾಗಿಗಳು ಪ್ರತಿಕ್ರಿಯೆ ನೀಡ್ತಾ ಇದ್ರ...ಮತ್ತೆ ಪರ್ವಾಯಿಲ್ಲ ಇದು ಹೆಣ್ಣು ಬ್ಲಾಗಿ ...ಅಂತ ಹೆಣ್ಣು ಬ್ಲಾಗಿಗಳು...ಓ..my God..!!! ಅನ್ನಿಸಿ ಕ್ಷಣ ವಿಚಲಿತನಾದೆ...ನಂತರ...ಛೇ...ನನ್ನ profile ನಲ್ಲಿ ಕ್ಲಿಯರ್ ಆಗಿ ಬರೆದಿದ್ದೇನಲ್ಲಾ..??!! ಯಾರೇ ಆದ್ರೂ ಪ್ರೊಫೈಲ್ ನೋಡಿ ಪ್ರತಿಕ್ರಿಯಿಸೋದು...ಹೀಗೆ ಇರಲಿಕ್ಕಿಲ್ಲ...ಅಂತ ಸಮಾಧಾನ ಮಾಡಿಕೊಂಡೆ...
ಈ ನೆನಪು ಹಸಿಯಾಗಿರುವಾಗಲೇ ಬಂತು..ತೇಜಸ್ವಿನಿಯವರ shocking ಬ್ಲಾಗ್ ಪೋಸ್ಟ್...ಅವರನ್ನ ಯಾರೋ ಒಬ್ಬ (ತನ್ನ ನಿಜ ಪರಿಚಯವನ್ನು ಗುಪ್ತವಾಗಿಟ್ಟು) ಹುಡುಗಿಯ ಹೆಸರಿಟ್ಟ ಬ್ಲಾಗಿನ ಮೂಲಕ ..ಕೀಟಲೆಗೆ ಪ್ರಯತ್ನಿಸಿದ್ದು..ಅವನ ಬಣ್ಣ ಬಯಲಾಗಿದ್ದು ...ಇತ್ಯಾದಿ...
ಆಗಲೇ... ನಾನು.. ಬ್ಲಾಗ್ ಎಡವಟ್ಟು ಬಗ್ಗೆ ಕವನ ಬರೆದದ್ದು...
ಇಷ್ಟೇ ಆದ್ರೆ ತಾಪತ್ರಯ ನನ್ನದು ಪರವಾಗಿಲ್ಲ...ಮಹೇಶ್..ನನ್ನ ಮಿತ್ರ...ಆಗ..., ಈಗ...ತಮ್ಮ (ನನ್ನನ್ನ ಆಝಾದಣ್ಣ ಅಂತಾನೆ...)..ಮಹೇಶನ ಅರ್ಧಾಂಗಿ...ಮನಸು...ಸಹಾ ..ಆಜಾದಣ್ಣ ಅನ್ನೋದೇ...??!! ಈಗ..ಹೇಳೇಬಿಡ್ತೀನಿ.. ಅವರಿಗೆ, “ನೋಡಿ ಯಾರಾದ್ರೂ ಒಬ್ರು...ಅಣ್ಣ ಅನ್ನಿ...ಇಬ್ರೂ ಅಂದ್ರೆ ಸಂದಾಕಿರಕಿಲ್ಲಾ...ಅಂತ....” ಹಹಹಹ..
ನಮ್ಮ ಜಯಲಕ್ಷ್ಮಿಯವರು ಏನು ಕಮ್ಮೀನಾ...?? ಅವರ ಮುಕ್ತ ಮುಕ್ತದ ಮಂಗಳತ್ತೆ ಪಾತ್ರ ನೋಡಿ...ಅವರು ಹಾಕಿದ ಕಾಮೆಂಟಿಗೆ ನಾನು ಪ್ರತಿಕ್ರಿಯಿಸುತ್ತಾ...."ಜಯಕ್ಕಾ ನೀವು ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ..ಕೆಟ್ಟ ಅತ್ತೆ ಪಾತ್ರ..ಬೇರೇದು ಸಿಗಲಿಲ್ಲವೇ..?"...ಅದಕ್ಕೆ ಅವರು...
ಆಜಾದ್..ನೀವು ವಯಸ್ಸಲ್ಲಿ ನನ್ಗಿಂತ ಹಿರಿಯರು (ಇವರು ಎಲ್ಲರಿಗಿಂತ ಬುದ್ಧಿವಂತರು..ನನ್ನ ಕರ್ಮಕ್ಕೆ..!!! ನನ್ನ ಪ್ರೊಫೈಲ್ ನಲ್ಲಿ age ಗಮನಿಸಿದ್ದಾರೆ..!!!) ನನ್ನನ್ನ ಅಕ್ಕ ಅಂತ ಕರೆಯೋದೇ...??(ಯಾವ್ ಹೆಣ್ಣು ಮಗಳಿಗೆ ತಾನೇ ತಾನು ಅಜ್ಜಿಯಾಗಿದ್ದರೂ ..aunty ಅನ್ನಿಸಿಕೊಳ್ಳೊದಕ್ಕಿಂತಾ sister ಅನ್ನಿಸಿಕೊಳ್ಳೊದು ಇಷ್ಟ ಇರೊಲ್ಲ, ಜಯಲಕ್ಷ್ಮಿಯವರು ತಪ್ಪು ತಿಳಿಬಾರ್ದು..ಓಕೆ..). ಸದ್ಯಕ್ಕೆ ಅವರು ನನ್ನನ್ನ "ಅಣ್ಣ" ಅಂದಿಲ್ಲ ಈ ವರೆಗೂ...(ಆರ್ಕುಟ್..ಅಥವಾ ನನ್ನ ಬ್ಲಾಗ್ ನ title bar ಮೇಲಿರೋ 47,48,49,50 ನೋಡ್ದೇ ಇದ್ರೆ ಸಾಕು..).
ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!"
ಅಲ್ಲ...ನಾಲ್ಕು ಜನ ನಾವು..ನಾನು ಜೇಷ್ಟ..ನಮ್ಮ ಪಕ್ಕದ ಮನೆ ..ಶಾರದಕ್ಕ ನ ಮಗಳನ್ನ (ನನ್ನ ಮೂರನೇ ತಮ್ಮನ ವಯಸ್ಸು) ನಾನು ಎತ್ತಿ ಕೊಂಡು ಮುದ್ದು ಮಾಡೋದನ್ನ ನೋಡಿ..ಶಾರದಕ್ಕ ನಮ್ಮಪ್ಪನಿಗೆ.."ಅಜಾದನಿಗೆ ಹೆಣ್ಣುಮಕ್ಳು ಅಮ್ದ್ರೆ ಪ್ರಾಣ ..ಕಾಸೀಮಣ್ಣ...ಅವನಿಗೆ ಒಬ್ಬಳು ತಂಗಿ ಬಂದ್ರೆ ಚನ್ನ" ಅಂತ ನಮ್ಮಪ್ಪನ್ನ ಗೋಳುಹುಯ್ಕೊಳ್ತಿದ್ದಳು ಅಂತ ನಮ್ಮಮ್ಮ ನನ್ನ ತಂಗಿ ಹುಟ್ಟಿದಾಗ ಹೇಳಿದ್ದು ನೆನಪು...ಹಂಗಂತ,,,ಈಗ ಸಾಲು..ಸಾಲು ತಂಗೀಯರನ್ನ ಕೊಟ್ಟುಬಿಡ್ತು ನನ್ನ ಬ್ಲಾಗ್...ಜಲನಯನ...
ಹೋಗ್ಲೀ ಅಂದ್ರೆ...ಈ ಪಾಟಿ ತಮ್ಮಂದಿರೇ...???
ಈಗ ನಾನು ಬ್ಲಾಗ್ ಲೋಕಾನ ಜಾಲಾಡ್ಸಿತಿದೀನಿ...ನನಗಿಂತ ವಯಸ್ಸಿನಲ್ಲಿ ಹಿರಿಯರು ಸಿಗ್ತಾರಾಂತ..ಅಮಿತಾಭ್ ಸಿಕ್ಕರು....ಆದ್ರೆ..ನನ್ನ ವಯಸ್ಸಿಗೂ ಅತಿ ಕಡಿಮೆ ವಯಸ್ಸಿನ ಹೀರೋಯಿನ್ ಜೊತೆ ಹೀರೋ ಆಗಿ ನಟಿಸಿದ್ದು ನೋಡಿ..ಅವರೂ ನನ್ನ "ಅಣ್ಣ"..ಅಂದ್ಬಿಟ್ರೆ…..???!!! ಅಂತ ಹೆದರಿ ಅವರಿಗೆ ಮೈಲ್ ಕಳಿಸ್ಲಿಲ್ಲ...ಈಗ ಧೈರ್ಯವಾಗಿ ಸಂಪರ್ಕ ಮಾಡ್ಬೇಕು ಅಂತ ಇರೋದು..ನಮ್ಮ ಹೋಂ ಮಿನಿಸ್ಟರ್..ವಿ.ಎಸ್.ಆಚಾರ್ಯ, ನಮ್ಮ ಫ್ರೆಸಿಡೆಂಟ್...ಪ್ರತಿಭಾ ಪಾಟೀಲ್, ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್......
ನೀವೆಲ್ಲಾ...ನಿಮ್ಮಣ್ಣನಿಗೆ,,,,,ಶುಭಕೋರಿ...ಇವ್ರಾದ್ರೂ ನನ್ನ ತಮ್ಮ ಅಂತ ಒಪ್ಪಿಕೊಳ್ಳಲಿ....
(ಇದೊಂದು ಕೇವಲ ಮನರಂಜನೆಯ ಪ್ರಹಸನ ಎಂದುಕೊಳ್ಳಿ...ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ.....ಕ್ಷಮೆಯಿರಲಿ)

Saturday, November 28, 2009

ಅಂದ ಚೆಂದದ ವಯಸ್ಸಿನ ಹುಡುಗೀರನ್ನ ಹಿಡೀತಿದ್ದ ಅವನು...!!!

“ಲೇ...ಈ ಕಡೆ ಬಾರೆ...ಆ ಗಡವ ಏನು ತಿನ್ನೋತರಹ ನೋಡ್ತಿದ್ದಾನೆ...??!! ಅಲ್ಲ ನಿಮ್ಮ ಸ್ಕೂಲ್ ನಲ್ಲಿ ಇಷ್ಟೊಂದು ಹುಡುಗೀರು ಇದ್ದೀರಲ್ಲಾ...?? ನೀವು ಎಲ್ಲಾದ್ರೂ ಹೋದ್ರೂ ಗುಂಪು ಗುಂಪಾಗೇ ಹೋಗ್ತೀರಾ....? ಅದೇ ಒಳ್ಳೆದು ಕಣೆ...ಮೊನ್ನೆ ಮೂರ್ನಾಲ್ಕು ದಿನದಿಂದ ಒಬ್ಬ ತನ್ನ ಕಾರಿನಲ್ಲಿ ಆ ಕಡಿಯಿಂದ ಈ ಕಡೆ..ಈ ಕಡೆಯಿಂದ ಆ ಕಡೆ ಸುಮಾರು ಐದಾರು ಸರ್ತಿ ಓಡಾಡ್ತಿದ್ದ...ಮಧ್ಯೆ ಮಧ್ಯೆ ಅದೇನೋ ಟಾರ್ಚ್ ತರಹ ಇದ್ದದ್ದನ್ನು ನಮ್ಮ ಕಡೆ ಹಾಕ್ತಿದ್ದ...ನಾವೆಲ್ಲ ತಪ್ಪಿಸ್ಕೊಂಡು ಅವನ ಕಣ್ಣಿಗೆ ಭೀಳ್ದ ಹಾಗೆ ಇದ್ವಿ....”
“ಹೌದೇ..ನಮಗೂ ಹಾಗೇ ಅನ್ನ್ಸಿತು..ನಿಮ್ ಸ್ಕೂಲ್ ಕಡೆ ಜಾಸ್ತಿ ಇದ್ದದ್ದು ಅವನು...ನಮ್ಮದು ಹೈಸ್ಕೂಲು ನಿಮ್ಮದು ಹೈಸ್ಕೂಲು-ಕಾಲೇಜು...ವಯಸ್ಸಿಗೆ ಬಂದ ಅಂದ ಚಂದ ಇರೋ ನಿಮ್ಮನ್ನೇ ಹಿಡೀಬೇಕು ಅಂತ ಇರ್ಬೇಕು...
ಅಷ್ಟೇ ಅಲ್ಲ ಕಣೆ...ಅವನ ತರದ ಕಾರೇ ಇನ್ನೊಂದೂ ಇತ್ತು..ಅದರಲ್ಲಿ ಇಬ್ಬ್ರು ಮೂವರು ಇದ್ದರು...ನಮಗೆಲ್ಲಾ ಬಹಳ ಗಾಬರಿಯಾಗಿತ್ತು...ಕಣ್ರೇ...ಇವರು ಹೊಂಚಾಕಿ ವಯಸ್ಸಿನವರನ್ನೇ ಹಿಡೀಯೋದು...ಒಂದು ವಾರಕ್ಕೆ ಹಿಂದೆ..ಪಕ್ಕದ ಹೈಸ್ಕೂಲಿನಿಂದ ಒಬ್ಬ ಮದುವೆ ವಯಸ್ಸಿನವಳನ್ನ ಇಂತಹವನೇ ಯಾರೋ ಹಿಡ್ಕಂಡ್ ಹೋದನಂತೆ...ಎಲ್ಲ ಗಾಬರಿಯಾಗವ್ರೆ ಆ ಸ್ಕೂಲಿನಲ್ಲಿ..”
“ಚೆನ್-ಚೆನ್ನಗಿ ಇರೋರೇ ಬೇಕು ಅಂತ ಯಾರೋ ಫಾರಿನ್ ನವ್ರು ಬಂದವ್ರಂತೆ..ಪಕ್ಕದ ಮೊಹಲ್ಲಾದ ಕಪ್ಪು ಬುರ್ಕಾ ಹಾಕಿರೋ ವಯಸ್ಸಿಗೆ ಬಂದ ಇಪ್ಪ್-ಇಪ್ಪತ್ತೈದು ಹಿಡ್ಕೊಂಡೋಗಿ ಮಾರ್ಕಂಡ್ರಂತೆ ಈ ಮೋಟಾರ್ ನಲ್ಲಿ ಬರೋರು...ನಮ್ಮನ್ನ ನಾವೇ ನೋಡ್ಕೋ ಬೇಕು ...ಹುಷಾರಾಗಿರಬೇಕು.......”

ಇದು.. ಅಕ್ವೇರಿಯಂ ಮೀನನ್ನು ಬೆಳೆಯುತ್ತಿದ್ದ ದೊಡ್ಡದೊಂದುಕೊಳದಲ್ಲಿನ ಬಣ್ಣ ಬಣ್ಣದ ಮೀನುಗಳು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾಗ ಕದ್ದು ಅವರ ಮಾತುಗಳನ್ನು ಅಲೈಸಿ ನಿಮಗೆ ತಿಳಿಸ್ತಾ ಇದ್ದೀನಿ...ಮೋಟಾರ್ ನಲ್ಲಿ ಬರೋದು ಅಂದ್ರೆ...ಮೋಟಾರ್ ಬೋಟಿನಲ್ಲಿ ಬರುತ್ತಿದ್ದ ಮೀನುಗಾರ-ಕೆಲಸದಾಳು....!!! ಹೈಸ್ಕೂಲು-ಕಾಲೇಜು ಹುಡ್ಗೀರು ಅಂದ್ರೆ...ಕೋಯಿ ಕಾರ್ಪ್ ಮೀನು (ಇವು ಸ್ವಲ್ಪ ದೊಡ್ಡಗಾತ್ರದಲ್ಲಿದ್ದರೇ ಚೆನ್ನ...ಅಂಕಾರಕ್ಕೆ). ಕಪ್ಪು ಬುರಖಾದಲ್ಲಿದ್ದವು....ಬ್ಲಾಕ್ ಮೋಲಿ ಮೀನು....
ಸ್ಕೂಲು ಅನ್ನೋದು ಗುಂಪು-ಗುಂಪಾಗಿ ಇರೋ ಮೀನಿನ ಗುಂಪನ್ನ........ಇವಕ್ಕೆ ಅಂದ ಹೆಚ್ಚು ಮತ್ತು ಬೆಲೆಯೂ ಸಿಗುತ್ತೆ.......ನಿಮ್ಮ ಅನ್ನಿಸಿಕೆ.....??? !!!!!

Friday, November 27, 2009

ನಿಸರ್ಗದ ಮೂರು ಶಕ್ತಿಗಳು

ಕಿರಣ
ಚುಮು ಚುಮು ಛಳಿಯಲಿ
ತೂರಿ ಬಂದ ಹೊಂಗಿರಣಕೆ
ಮೈಯೊಡ್ಡು ತವಕದಮನ
ನೆತ್ತಿ ಏರಿ ಸುಡು ಸುಡುವಲಿ
ಹರಡುವ ಕೊಡೆಯಡಿಯಲಿ
ಮೈಮನ ಚೆಲ್ಲುವ ಬಯಕೆ
ಮನಮಾತ್ರವಲ್ಲದೇ
ತನುವಿಗೂ ಧಗಿಸುವ ಬೇಗೆ
ಸಂಜೆ ಇದ್ದರೂ ಇಲ್ಲದೆ
ಕದ್ದೋಡಿದಂತೆ ಸೂರ್ಯ
ದಿನವಿಡೀ ಕಾದು ಕೆಂಪಾಗಿ
ಮುಳುಗುವ ಸೊಂಪಾಗಿ.....
ಒಂದು ಬೇಕೆನ್ನುವ ಹಿತಕಿರಣ
ಇನ್ನೊಂದು ಹೋಗೆನ್ನುವ ಚರಣ


ಅಲೆ
ಆಟದ ಅಲೆ
ಬೀಳುವ ಅಲೆ
ಮಲಗಿರುವುದಲೆ
ಒಮ್ಮೆಲೇ ಎದ್ದುದಲೆ
ಭೋರ್ಗಯುತ್ತಲೇ
ಪರ್ವತವಾಯಿತಲೆ
ತೋಯಿಸಿತಲೆ
ಕೊಚ್ಚಿಕೊಂಡೊಯ್ಯಿತಲೆ
ಸುನಾಮಿ, ಕತ್ರಿನಾ,
ಚಂಡಮಾರುತ, ಫಯಾನ
ಅದೇ ಅಲೆ.....
ಎಷ್ಟು ವಿಭಿನ್ನ? ವ್ಯತ್ಯಾಸ


ಬೆಳಕು
ಮಿಂಚುಹುಳು-ಚೆಲ್ಲಿಬೆಳಕು
ದೀಪ, ಕತ್ತಲ ಕಳೆವ ಮಂದ ಬೆಳಕು
ಒಂದು ಆಂತರಿಕೆ ನೆಲೆಯ ಸೆಲೆ
ಇನ್ನೊಂದು ಆಗಬಹುದು ಜ್ವಾಲೆ

ಬೆಳಕು ದಾರಿಕಾಣಲು, ದಿಕ್ಕುತೋರಲು
ಬೆಳಕು ನೋಡಲು ನೋಡಿ ನಲಿಯಲು
ಬೆಳಕು ಆಗಬಾರದು ಜ್ವಾಲೆ ಸುಡಲು
ಬಡವನ ಒಲೆ ಉರಿಯಲು ಅಲ್ಲ ಉರಿಸಲು

Saturday, November 21, 2009

ನಂಗೊತ್ತಿಲ್ಲ ಮಗು


ಅಪ್ಪಾ..
ಏನು ಮಗು?
ನಮ್ಮ ನಾಡು ನಮಗೆ ಮುಖ್ಯ ಅಲ್ಲ್ವಪ್ಪಾ?
ಹೌದು ಕನ್ನಡ ನಾಡು -ಗಂಧದ ಬೀಡು ಅನ್ನೋಲ್ಲ್ವೇ?
ಮತ್ತೆ ದೇಶಭಕ್ತಿ ತೋರ್ಸಿದ್ರೆ ತಪ್ಪಾಗುತ್ತ?
ನಾಡು ಕನ್ನಡಿಗರದು-ದೇಶ ಎಲ್ಲರದ್ದು ತಪ್ಪೆಲ್ಲಿ??
ಮತ್ತೆ ಸಚಿನ್ ಮಾಡಿದ್ದು ತಪ್ಪಂತೆ,
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳಪ್ಪ..ಏನು?
ಮದ್ಯ ಸರಾಯಿ ಕೆಟ್ಟದಲ್ಲವಾ?
ಹೌದು..ಅದೊಂದು ದುಶ್ಚಟ
ಮನೆ-ಮಠ ಅಷ್ಟೇ ಯಾಕೆ
ಪ್ರಾಣಾನೇ ಹೋದೀತು ಬಿದ್ರೆ ಚಟಕ್ಕೆ
ಮತ್ತೆ ಈಗ ಸರ್ಕಾದವರೇ ಮದ್ಯ
ಮಾರೋ ಸಾವಿರಾರು ಅಂಗಡಿ ತೆರೀತಿದಾರೆ
ಅದು ಅಬ್ಕಾರಿ ಇಲಾಖೆ ಯೋಜನೆ
ಮತ್ತೆ..ಮಕ್ಕಳ ಸ್ಕೂಲುಗಳೇ ಇಲ್ಲ
ಕೆಲವು ಕಡೆ ಅಂತಾರಲ್ಲಾ ಇದು
ಶಿಕ್ಷಣ ಇಲಾಕೆಯ ಯೋಜನೇಲಿಲ್ವಾ?
ನಂಗೊತ್ತಿಲ್ಲ ಮಗು

ಅಪ್ಪಾ,
ಇನ್ನೂ ಎನೋ ನಿನ್ನ ತರಲೆ
ಕೊಲೆ ಸುಲಿಗೆ ಮಾಡೋರನ್ನ ನಮ್ಮ ಪೋಲೀಸ್ರು
ಬಹಳ ಚಾಕ ಚಕ್ಯತೆಯಿಂದ ಹಿಡೀತಿದ್ದಾರೆ
ಹೌದು ಮಗು ನಮ್ಮವರು ದಕ್ಷರು
ಮತ್ತೆ ಮಂಗಳೂರಿನಲ್ಲೊಬ್ಬ ಕೇಡಿ
೨೦-೩೦ ಮದ್ವೆ ಆಗಿ, ಅವ್ರನ್ನ ಕೊಲೆನೂ ಮಾಡ್ದ
ಹೌದು ಮಗ..ಐದಾರು ವರ್ಷದಿಂದ
ನಡೆಸ್ದ ತನ್ನ ಧಂಧೆ ಅಂತ ಟೀವೀ ವಾರ್ತೆ ಬಂದಿತ್ತಲ್ಲ
ಮತ್ತೆ ಅಷ್ಟರವರೆಗೂ ದಕ್ಷತೆ ಮೇಯೋಕೆ ಹೋಗಿತ್ತಾ?
ನಂಗೊತ್ತಿಲ್ಲ ಮಗು

Saturday, November 14, 2009

ಬ್ಲಾಗು- ಹೀಗೂ ಒಂದು ಎಡವಟ್ಟು



ಸುಮ್ನಿದ್ದವ್ನಿಗೆ ಬ್ಲಾಗ್ರೋಗ ಹತ್ಬಿಡ್ತು
ದಿನಾ ಒಂದಷ್ಟು ಓದ್ತಿದ್ದೆ ಈಗದು ಎಕ್ಕುಡ್ತು
ಹುಡ್ಗೀ ಹೆಸರ್ನಾಗೆ ಬ್ಲಾಗ್ಮಾಡೋಕೆ ಸುರುಹಚ್ದೆ
ಹುಡ್ಗೀರ್ಸ್ನೇಹ ಆಗ್ತಾದಂದ್ರೆ ಹುಡುಗರ್ದೇ ಧಂದೆ

ಒಬ್ಬ ಬರ್ದ ನಿಮ್ ಬರಹ ಮೆಚ್ದೆ ಮೈಲ್ ಐಡಿ ಕೊಡಿ
ನಿಮ್ಜೊತೆ ಮಾತ್ನಾಡೋದೈತೆ ಒಂದ್ಡೇಟು ಕೊಡಿ
ಅವ್ನಿಗ್ ಹೆಂಗೇಳ್ಳಿ ನಿನ್ನಂಗೇ ನಾನೂ ಉಡುಗ್ನೇಯ
ಕಾಮೆಂಟ್ಮಾಡೋರ್ ಕಮ್ಮಿ ಅಗ್ತಾರ್ ಅಂಗೇಯ

ಒಬ್ಳು ಬರದ್ಳು ನನ್ ಕಷ್ಟ ನಿಂತಾವ ಹೇಳ್ಬೇಕು ಅಂತಿವ್ನಿ
ಬ್ಲಾಗ್ ಮಡೋ ಒಬ್ಬ್ ಮುದ್ಕಂಗೆ ಹೆದ್ರ್ ಕೊಂಡು ಕುಂತಿವ್ನಿ
ನನ್ ಕಷ್ಟ ಅವ್ಳಿಗೇನು ಗೊತ್ತು ಆದ್ರೂ ..ಯೋಳ್ದೆ ಕಳ್ಸು ವಿವ್ರಾನ
ಅವ್ಳು ನಾನ್ ಕೊಟ್ ಮೈಲ್ ಐಡಿಗೆ ಕಳ್ಸ್ ಬಿಟ್ಳು
ವೆಬ್ನಾಗೆ ಮುಳ್ಗಿ ಹುಡ್ಗೀ ಒಬ್ಳಿಗೆ ನನ್ ಫ್ರೆಂಡು ಬರೆದಿದ್ದ ಪತ್ರಾನ

ಮುದ್ಕಪ್ಪ ಒಬ್ಬ ಬರ್ದ, ನಿಮ್ ಬರಹ ನೋಡಿದ್ರಿ
ಭಾಳ ಅನುಭೋವಸ್ತ್ರು ನೀವ್ ಅನ್ನೋದು ಕಾಣ್ತದ್ರಿ
ನಂಗೂ ಹೇಂತೀಹೋಗಿ ಹತ್ತ್ ವರ್ಷ ಆಗೈತ್ರೀ
ಜೊತ್ ಜೊತ್ಯಾಗೇ ಇನ್ಮುಂದಿ ಬ್ಲಾಗ್ಮಾಡೋಣು ಏನಂತೀರಿ?

ಯಪ್ಪೋ ನನ್ಗೋ ಸುಸ್ತಾಯ್ತು ಈ ಪಾಟಿ ಎಡ್ಬಿಡಂಗಿ ಆಗಿ
ಅದ್ಕೆ ಮುಂದಿನ ಪೋಸ್ಟ್ನಾಗೆ ಬರ್ದೆ ನಾನ್ ಗಂಡು ಬ್ಲಾಗಿ
ಬರ್ತಿದ್ವು ಪ್ರತಿಪೋಸ್ಟ್ಗೂ ೫೦-೬೦ ಕಾಮೆಂಟ್ಸು ಆವಾಗ
ನಾಲ್ಕೈದು ವಾರ ಆಯ್ತು ಒಟ್ಟು ಐದೋ-ಆರೋ ಈವಾಗ


ಮುಚ್ಚಿಟ್ಟೆ ಮೊಸರು, ಬೆಣ್ಣೆ ತುಪ್ಪ ಅನ್ನೋರ್ಗೆನೂ ಕಮ್ಮಿಇಲ್ಲ
ತೆರೆದಿಟ್ಟೆ ಒಮ್ಮೆ ಮಜ್ಜಿಗೆ ಹುಳಿ ಹತ್ರ ಸುಳಿಯೋರೇ ಕಾಣ್ತಿಲ್ಲ
ಈವತ್ನ ಜೀವ್ನಾನೆ ಹೀಂಗೆ, ಇದ್ದದ್ದು ಇದ್ದಾಂಗೆ ಯೋಳೋಂಗಿಲ್ಲ
ಕದ್ದೋ ಮುಚ್ಚೊ ಹೊಲಸಾದ್ರೂ ಅಮೃತ ಅಂತಾರೆ ಎಲ್ಲ

Saturday, November 7, 2009

ನಿಜವಾಗ್ಲೂ ನಂಗೊತ್ತಿಲ್ಲ ಮಗು





ಅಪ್ಪಾ...ಅಪ್ಪಾ...
ಅಪ್ಪಾ.....sss
ನಿನ್ ಮಗ ಕೂಗ್ತಾನೇ ಇದ್ದೀನಿ
ಕೇಳಿಸ್ತಾ ಇಲ್ಲ್ವೇ ಅಪ್ಪಾ..??...
ಪ್ರವಾಹದಲ್ಲಿ ಮನೆಮಠ ಕಳ್ಕೊಂಡೋವ್ರು
ಸಹಾಯಕ್ಕೆ ಕೂಗಿದ್ರೂ..
ಗರ ಬಡ್ದಿರೋ ಸರ್ಕಾರದ್ ಥರಾ....
ಎದ್ದೇಳಪ್ಪಾ...ನನಗೆ ಉತ್ತರಾ ಕೊಡು..

ಹಾ..ಆಂ....ಏನ್ಮಗಾ.....
ಅಲ್ಲಪ್ಪಾ..ಅಮ್ಮನಜೊತೆ ರಾತ್ರಿ
ಜಗಳಮಾಡ್ಕಂಡು ನಾನ್ ಕರೆದ್ರೂ ಕೇಳ್ತಿಲ್ಲವಾ?
ಇಲ್ಲ ಕಣೋ..ಏನೋ ಯೋಚಿಸ್ತಿದ್ದೆ..
ಹೇಳು ಏನು ನಿನ್ನ ಗೋಳು..??
ಹೆಣ್ಣು ದೋಷ ಬಡಿದಿದೆಯಂತೆ
ಮಂತ್ರಿ ಮಂಡಳಕ್ಕೆ ಮತ್ತೆ ಸರ್ಕಾರಕ್ಕೆ ಹೌದಾಪ್ಪಾ..?
ನಂಗೊತ್ತಿಲ್ಲ ಮಗ..
ಅಲ್ಲಪ್ಪಾ ..ನೆರೆಪೀಡಿತರು
ಸಹಾಯ ಕೇಳಿದ್ರೆ .. ಸರ್ಕಾರ ಉಳೀಲಿ
ಅಂತಾರಲ್ಲಾ..
ಹೌದು ಕಣೋ ಆವಾಗ್ಲೇ ಅಲ್ಲವಾ
ಪರಿಹಾರ, ಪುನರ್ವಸತಿ ಸಾಧ್ಯ ಆಗೋದು..?
ಮತ್ತೆ ..ಎತ್ತು ಏರಿಗೆಳದ್ರೆ
ಕೋಣ ನೀರಿಗೆಳೀತಿದೆಯಲ್ಲಪ್ಪಾ..?
ನೀನೇ ಜಾಣ ಕಣೋ ..
ಸರ್ಕಾರ ಉಳಿಯೋದು ಮುಖ್ಯಾನಾ..
ಅನ್ನ, ವಸ್ತ್ರ ಸೂರಿಲ್ಲದೇ ಪರದಾಡ್ತಿರೋರಿಗೆ
ಪರ್ಯಾಯ ವ್ಯವಸ್ಥೇನಾ...?
ನನಗೆ ಮಂಕು ಕವಿದೈತೆ ಮಗಾ
ನಿಜವಾಗ್ಲೂ ನಂಗೊತ್ತಿಲ್ಲ ಮಗು

Wednesday, November 4, 2009

ಪ್ರಾಚೀನ ವೇದ, ಪುರಾಣ, ಖಗೋಳಶಾಸ್ತ್ರದ ನಮ್ಮ ಪ್ರಕಾರ...೨೦೧೨...ಏನು??









ಸ್ನೇಹಿತರೇ...(ಭಾವ ಮಂಥನಕ್ಕೆ ಭೇಟಿ ಕೊಟ್ಟಿರುವ ಮಿತ್ರರಿಗೆ ವಿಶೇಷತಃ) ಇದೇನು ಭಾವಮಂಥನದ ಪೋಸ್ಟ್ ತೆಗೆದು ಇಲ್ಲಿ ಹಾಕಿದ್ದಾನಲ್ಲ...??!! ಎಂದುಕೊಳ್ಳಬೇಡಿ..ನಿಜ ಅದನ್ನ ಹಾಕಿದ್ದು ..ಕಾರಣ ಜಲನಯನದಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದೆ ಆದರೂ ಹಲವು ಜಲನಯದ ಓದುಗ ಮಿತ್ರರು ಭಾವಮಂಥನವನ್ನು ನೋಡಲಾಗಿಲ್ಲ....ಆ ಕಾರಣಕ್ಕೆ ಈ ಉಪ-ಲೇಖನ.
"ಅರೆ ಇವನ..!! ಪ್ರಳಯದ ಇವನ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ, ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಇಲ್ಲಿ ಇನ್ನೊಂದು ಅಂಶ ಗಮನಿಸಿದಿರಾ? ಸತ್ಯಯುಗದ ಬರೋಬ್ಬರಿ ಅರ್ಧ ಮಾತ್ರ ದ್ವಾಪರ..ಅಂದರೆ ಧರ್ಮ ಒಂದು ಕಾಲಲ್ಲಿ ನಡೆದ ಯುಗ...ಅದರಲ್ಲಿ ಅರ್ಧ ಕಲಿಯುಗ..ಅಲ್ಲವಾ..? ಇಲ್ಲಿ scientific ಆಗಿ ನೋಡೊದಾದರೆ.. ಸತ್ಯ ಜನಸಂಖ್ಯೆ ಕಡಿಮೆ..ನಿಸರ್ಗ ಸಂಪದ್ಭರಿತ..ತ್ರೇತಾ..ಅದರ ನಂತರದ್ದು..ಜನ ಸಮ್ಖ್ಯೆ ಸ್ವಲ್ಪ ಜಾಸ್ತಿ ಅವರ ಅಧರ್ಮಾಚರಣೆ ಹೆಚ್ಚುತ್ತೆ..ಆದ್ರೂ ಪ್ರಕೃತಿ ಮಾನವನ ಮೇಲೆ ಹಾಗೇ ಕೃಪೆ ಮುಂದುವರಿಸುತ್ತೆ..ದ್ವಾಪರ..ಹೆಚ್ಚು ಜನಸಂಖ್ಯೆ..ಪ್ರಕೃತಿ ಹುಸಿ ಮುನಿಸು ಮತ್ತು ಮಾನವನ ಉದ್ಧಟತನ..ಅಧರ್ಮ..ಹೆಚ್ಚುತ್ತೆ..ಅಧರ್ಮಿಗಳು ಹೆಚ್ಚುತ್ತಾರೆ..ಕಲಿ ಪ್ರಕೃತಿಯ ವಿಕೋಪ ಹೆಚ್ಚುವ ಕಾಲ..ಮಾನವ ತನ್ನ ಸಜಾತಿಯಲ್ಲದೇ ಪ್ರಕೃತಿಯ ಇತರ ಜೀವಿಗಳಮೇಲೆ ಕ್ರೂರಿಕ್ರಮಕ್ಕೆ ಮುಂದಾಗುವುದು..ಪ್ರಕೃತಿಯ ವ್ಯಾಪಕ ಪ್ರಕೋಪ..ಆಗ ಹಲವೆಡೆ ನಾಶ ಕೆಲವೆಡೆ ಶಾಂತ..ಇದು ಮುಂದುವರೆದು..ಮಾನವ ಸಂತತಿ ಕಡಿಮೆಯಾಗಿ..ದುಷ್ಠನಾಶ..ಅಂದರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ದುಷ್ಟರ ದಮನ...ಉಳಿಯುವವರು ಸತ್ಯಕ್ಕಾಗಿ ಧರ್ಮಕ್ಕಾಗಿ ನಿಲ್ಲುವವರು...ಅಂದರೆ...ಸತ್ಯಯುಗದ ಪುನರಾರಂಭ....ಹೀಗೆ..೭೧ ಬಾರಿ..ಪ್ರತಿ ಬಾರಿಯೂ ಸತ್ಯವಂತರ ನೆರಳಲ್ಲಿ ಮೊದಲಿಗೆ ಕೆಲಪಾಪಿಗಳು ಉಳಿದುಬಿಡುತ್ತಾರೆ..ನಂತರದ ಚತುರ್ಯುಗದ ಕೊನೆಗೆ ಮೊದಲ ಚತುರ್ಯುಗಕ್ಕಿಂತ ಸ್ವಲ್ಪ ಹೆಚ್ಚು ಪಾಪಿಗಳು...ಹೀಗೆ..೧೪ ಮನುವಂಶಗಳು ಮುಗಿಯುವ ವೇಳೆಗೆ ಭೂಭಾರ ಹೆಚ್ಚಾಗಿ ಪಾಪಿಗಳೇ ತುಂಬಿಹೋಗಿ..ಸೃಷ್ಟಿಕರ್ತನಿಗೆ ಯುಗಗಳ ಮೂಲಕ ರಿಪೇರಿಮಾಡಲಾಗದು ಎನಿಸಿ..ಪೂರ್ತಿ ಪ್ರಳಯವಾಗಿ...ಮತ್ತೊಂದು ಪೃಥ್ವಿ ರೂಪ ಹೊರ ಹೊಮ್ಮುತ್ತೆ..ಅದರೊಂದಿಗೆ ಬ್ರಹ್ಮನ ಎರಡನೇ ಕಲ್ಪದ ಪ್ರಾರಂಭ..ಅಂದರೆ ಹದಿನಾಲ್ಕು ಮನುವಂಶಗಳಲ್ಲಿ ಏಳು ಮುಗಿದಿವೆ ಎಂಟನೆಯ ಮನು ವಂಶದ ಸೃಷ್ಟಿ.........ಹೀಗೆ ನೋಡಿದರೆ..??!!
ನನ್ನ ತರ್ಕದಿಂದ.....ಏನು ಪ್ರತಿಕ್ರಿಯೆ ಬರುತ್ತೋ ನೋಡೋಣ......


ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!