Tuesday, December 29, 2009

ಬಾಷ್ಪಾಂಜಲಿ-ವಿಷ್ಣುಗೆ



ವಿಷ್ಣುವಾಗಿ ನಟನೆಯಲ್ಲಿ ಮೇರು ಸಂಪತ್
ಭಾವಕ್ಕೆ ಗೀತೆಕೊಟ್ಟು ಅವಿಸ್ಮರಣೀಯ ಅಶ್ವಥ್
ಒಂದೇ ದಿನದಂತರದಲ್ಲಿ ಎಂತಹ ನೋವು ಕಲೆಗೆ
ಎರಡು ಅಮೂಲ್ಯ ಪುತ್ರರತ್ನಗಳ ನಷ್ಟ ನಾಡಿಗೆ.

ಛಲ ತೋರಿ ಮಿಂಚಿ ನಟನೆಯಲಿ ಪುಟ್ಟಣ್ಣನ ನಾಗರಹಾವಾಗಿದ್ದು
ದಾರಿತಪ್ಪಿದ ಪಾತ್ರದ ಗಂಧದಗುಡಿಯಲ್ಲಿ ಅಣ್ಣನ ತಮ್ಮನಾಗಿದ್ದು
ಅಮೋಘ ನಟನೆ ದುರಂತ ಕಥೆಗೆ ಜೀವಾಳದ ಬಂಧನವಾದದ್ದು
ಕನ್ನಡ ಕುಲಕೋಟಿಗೆ ಸಾಹಸಿಂಹನಾಗಿ ಆಪ್ತಮಿತ್ರನಾದದ್ದು.

ಅಂದು ಮಾರ್ಪಟ್ಟ ಸಂಪತ್ ಇಂದು ಇಲ್ಲವಾದ ವಿಷ್ಣು
ಮಿತ ನುಡಿ ಹಿತ ನಡೆಯಿಂದ ಟೀಕೆಗೆ ಉತ್ತರಿಸಿದ ವಿಷ್ಣು
ನಾಡ-ನುಡಿಯ ರಕ್ಷಣೆಗೆ ಅಣ್ಣನಜತೆಗೂಡಿದ ವಿನಯಿ ವಿಷ್ಣು
ಎಂತಹ ನೋವು ನಾಡಿಗೆ ಅಶ್ವಥ್ ಹಿಂದೆಯೇ ಹೋದರು ವಿಷ್ಣು.

ಚಿತ್ರರಂಗ ಒಬ್ಬ ಮೇರು ನಟನನ್ನು ಕಳೆದುಕೊಂಡಿರಬಹುದು
ರಂಗದ ನಟರು ಆಪ್ತಮಿತ್ರನನ್ನು ಕಳೆದುಕೊಂಡಿರಬಹುದು
ಆದರೆ ವಿಷ್ಣು ಒಂದು ಗುರುತಾಗಿ ವ್ಯಕ್ತಿ ನಮ್ಮಲ್ಲಿ ಇಲ್ಲ
ನಟನಾಗಿ, ಯಜಮಾನನಾಗಿ ಸಿಂಹದ ಹೂಂಕಾರ ಇನ್ನಿಲ್ಲ.

ಚೇತನ ಹೊರಟಿದೆ ದೇಹ ಬಿಟ್ಟು ಇಹ ಲೋಕವ ತ್ಯಜಿಸಿ
ನೂತನ ಚಿರಂತನವಾಗಲಿ ಜನಿಸಿ ಮತ್ತೊಮ್ಮೆ ಪ್ರವೇಶಿಸಿ
ಕನ್ನಡ ಲೋಕವ, ಸಾರಸ್ವತವ ನಟನಾ ಪ್ರಪಂಚವ
ದೈವನೀಡಲಿ ಕುಟುಂಬಕೆ ಸಾಂತ್ವನ, ಆತ್ಮಕೆ ಸ್ವರ್ಗವ.


ಗಾಯನ ಗಾರುಡಿಗ ಅಶ್ವಥ್ - ಹೃದಯಪೂರ್ವಕ ಶ್ರದ್ಧಾಂಜಲಿ



ನೇಗಿಲಯೋಗಿ - ಕುವೆಂಪು - ಸಿ. ಅಶ್ವಥ್
ನೆಡೆದರೇ ಒಂದು ಚಂದ ಸಾಥ್ -ಸಾಥ್
ಗಾಯನ ಗಾರುಡಿ ಹೊರಡಲು ಕಂಠದಿ
ಸಿ. ಅಶ್ವಥ್ ಬರುವರು ಮನಃ ಪಟಲದಿ
ಕೆ.ಎಸ್.ನ. ಜೀ.ಎಸ್ಸೆಸ್,ಶಿಶುನಾಳ ರಚನೆಗೆ
ಕೋಡಗನ ಕೋಳಿ, ಮೈಸೂರು ಮಲ್ಲಿಗೆ
ಮುಕ್ತ ಕಂಠದಿ ಮನ್ವಂತರಕ್ಕೂ ಹೆಜ್ಜೆ
ಗಾಯನ ಮನದಾಳದಿ ಮಿಡಿವ ಗೆಜ್ಜೆ
ತಪ್ಪು ಮಾಡದವ್ರು ಯಾರವ್ರೇ ? ಹಾಡು
ಬೆಪ್ಪುಗೊಳಿಸಿದ್ದು ತೆರೆದು ನವ ಅಲೆಯ ಜಾಡು
ಅಣ್ಣನಾಗಿ ರೈತ, ಉಳುವಾ ಜೋಗಿಯ ತೋರಿ
ಕಣ್ಣ ತೆರೆಸಿದಾತ ಹಾಡುಗಾರಿಕೆ ಕನ್ನಡಿಗನ ಸಿರಿ
ಸಂಗೀತ ರಚನೆ ಗಾಯನಕೆ ಕೊಟ್ಟರೊಂದು ದಿಶೆ
ಕಲಿಸಿ ನಮ್ಮವರಿಗೇ ಗಾನ ಗಾರುಡಿಯ ನಶೆ
ಹುಟ್ಟುದಿನದಂದೇ ಇಲ್ಲವಾದರು ಅಶ್ವಥ್ ಹೀಗೆ
ಹಾಡಿ ಹೋದರು ಒಂದೇ ಹಾಡು ಹುಟ್ಟುಹಬ್ಬ ಪುಣ್ಯ ತಿಥಿಗೆ

Saturday, December 26, 2009

ಬ್ಲಾಗು-ಬಂಧ



ಮಂಗಳೂರಿಗೆ ಕಾರ್ಯನಿಮಿತ್ತ ಡಿಸೆಂಬರ್ ೨೨ಕ್ಕೆ ಹೋಗಿದ್ದಾಗ ದಿನಕರ್ ಮೊಗೇರ್ ನನಗಾಗಿ ಕಾಯುತ್ತಿರುವಂತೆ ಫೋನ್ ಮಾಡಿದರು, ಭೇಟಿಗೆಂದೇ ನಮ್ಮ ಮೀನುಗಾರಿಕಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಕಾದಿದ್ದರು. ತಮ್ಮ ಶ್ರೀಮತಿಯವರೊಂದಿಗೆ ಬಂದಿದ್ದ ಅವರ ಆತ್ಮೀಯತೆಗೆ ನಾನು ಮೂಕನಾಗಿದ್ದೆ. ಯಾವುದೋ ಸಂದರ್ಭದಲ್ಲಿ "ನಿಮ್ಮ ಊರಿಗೆ ಬರುವೆ" ಎಂದು ತಾರೀಖು ತಿಳಿಸಿದ್ದೆ ಅಷ್ಟೇ. ಇದನ್ನು ಯಾವ ರೀತಿಯ ಬಾಂಧವ್ಯ ಎನ್ನಬೇಕು? ಕಾಲೇಜಿನಲ್ಲಿ ನನ್ನ ಸ್ನೇಹಿತರಂತೂ ಈ ರೀತಿಯ ಉತ್ಕಟ ಬಂಧ-ಬಾಂಧವ್ಯ ಬ್ಲಾಗಿನ ಮೂಲಕ ಬರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟರು. ನನ್ನ ಘನಿಷ್ಟ ಮಿತ್ರ ಡಾ.ಶಿವಪ್ರಕಾಶ್ ಅಂತೂ ಮೂಕನಾಗಿದ್ದ ಅವರ ಆತ್ಮೀಯತೆ ಕಂಡು..ಅವನು ಆಗಲೇ ನಿರ್ಧರಿಸಿದ ತಾನೂ ಬ್ಲಾಗ್ ರಚಿಸಬೇಕೆಂದು. ಈ ಚಿತ್ರದಲ್ಲಿ ನಾನು, ದಿನಕರ್, ವನಿತಾ (ಶ್ರೀಮತಿ ದಿನಕರ್) ಮತ್ತು ನನ್ನ ಮಿತ್ರ ಡಾ. ಶಿವಪ್ರಕಾಶ್, ಎಸ್.ಎಮ್.


ಚಾಟ್ನಲ್ಲಿ ಡಿ.೨೪ಕ್ಕೆ ತನ್ನ ಹುಟ್ಟುಹಬ್ಬ ನೀವು ಬಂದಾಗ ಖಂಡಿತಾ ಮನೆಗೆ ಬರಬೇಕು ಎಂದು ಒತ್ತಾಯಿಸಿದ್ದ ಶಿವುವನ್ನು ಕಾಣಲು ಅವರ ಮನೆಗೆ ಹೊರಟೆ. ಮಲ್ಲೇಶ್ವರಂ ಸರ್ಕಲ್ ನಿಂದ ಹೊರಟು ನವರಂಗ ಟಾಕೀಸಿನ ದಾರಿಯಲ್ಲಿ ಪಾರ್ಕಿನ ಬಳಿ ಬಸ್ಸಿನಿಂದಿಳಿದೆ. ಶಿವುಗೆ ಫೋನ ಮಾಡಿದೆ..ತಮ್ಮ ಸ್ಕೂಟಿಯಲ್ಲಿ ಬಂದೇ ಬಿಟ್ತರು ಶಿವು ನನ್ನ ಪಿಕ್-ಅಪ್ ಮಾಡಲು...ಅವರ ಮತ್ತು ಹೇಮಾಶ್ರೀ (ಶ್ರೀಮತಿ ಶಿವು) ಅವರ ಸಂಭ್ರಮ ನನ್ನನ್ನು ಮೂಕನ್ನನ್ನಾಗಿಸಿದವು. ಅವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿದ್ದ ಶಿವುಗೆ ಸಂದಿದ್ದ ಪ್ರಶಸ್ತಿಗಳ ಮತ್ತು ಮನೆಯ ವೀಡಿಯೋ ಕ್ಲಿಪ್ ತೆಗೆದೆ.. ನನ್ನ, ಶಿವು ಮತ್ತು ಅವರ ಶ್ರೀಮತಿಯರ ಜೊತೆ ಫೋಟೋ ತೆಗೆದರು. ಬಿಸಿ ಬಿಸಿ ದೋಸೆಯ ಸೇವೆ, ಹಬೆಯಾಡುವ ಕಾಫಿ..ನನ್ನ ಹೊಟ್ಟೆ ತುಂಬಿಸಿದರೆ ನನ್ನ ಮನದಾಳಕ್ಕೆ ಅವರ ಅತ್ಮೀಯತೆ ಹೊಕ್ಕಿತ್ತು..

ಬೆಂಗಳೂರಿನ ಸಿಟಿ ಟ್ಯಾಕ್ಸಿಯಲ್ಲಿ ಕುಳಿತು ಸಹಕಾರನಗರಕ್ಕೆಂದು ಹೇಳಿದಾಗ ಹರೀಶ್ (ಟ್ಯಾಕ್ಸಿ ಚಾಲಕ) ಕೇಳಿದ್ದು "ಸ್ಥಳದ ಪರಿಚಯ ನಿಮಗಿದೆಯಾ ಎಂದು. ಇಲ್ಲ ಎಂದಾಗ "ಸಹಕಾರ ನಗರ ಗೊತ್ತು ಅಲ್ಲಿ ಯಾವ ನಿಗದಿತ ಜಾಗ ಎಂದು ತಿಳಿದುಕೊಳ್ಳಿ" ಎಂದಾಗ ಪ್ರಕಾಶ್ ಗೆ ಫೋನಾಯಿಸಿದೆ. ಪಾರ್ಕಿನ ಬಳಿ ಎಂದಾಗ "ಆ ಜಾಗ ಗೊತ್ತು ಅಲ್ಲಿಗೆ ಹೋಗೋಣ ನಂತರ ನಿಮ್ಮ ಸ್ನೇಹಿತರಿಗೆ ಫೋನು ಮಾಡಿ" ಎಂದು ಟ್ಯಾಕ್ಸಿ ಹೊರಡಿಸಿದ ಹರೀಶ. ಅ ಜಾಗಕ್ಕೆ ಬಂದಾಗ..ಕಾರಿನಲ್ಲಿ ಕುಳಿತಲ್ಲಿಂದಲೇ ನಮ್ಮೆಡೆ ಕೈಬೀಸಿದ್ದರು ಪ್ರಕಾಶ್...!!! ಹರೀಶನಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತಿರುವುದು ಇದೇ ಮೊದಲಿಗೆ ಎಂದಾಗ ನಂಬಲಿಲ್ಲ...ಅದುಹೇಗೆ..ಈ ರೀತಿಯ ಸ್ನೇಹ-ಬಂಧ ಹೇಗೆ ತಿಳಿಯಿತು ಇವರೇ ಎಂದು? ಎಂದೆಲ್ಲಾ ಅವನಿಗೆ ಪ್ರಶ್ನೆ ಕಾಡತೊಡಗಿದುವಂತೆ.

ಮೀನು, ಮತ್ಸ್ಯಶಾಸ್ತ್ರ ಮತ್ತು ಮತ್ಸ್ಯಕೃಷಿಗಳಲ್ಲಿ ಮುಳುಗಿದ್ದ ನನಗೆ ... ಇಷ್ಟೇ ಅಲ್ಲ ಪ್ರಪಂಚ ಎನ್ನುವುದನ್ನು ಸಾದರಪಡಿಸುವಂತೆ ಪರಿಚಯಿಸಿದ ಶ್ರೇಯ -ಮೃದುಮನಸು- ಗೆ ಸಲ್ಲಬೇಕು. ಬಹುಶಃ ಒಂದು ವರ್ಷದ ನನ್ನ ಗಳಿಕೆ... ಆತ್ಮೀಯರ, ನನ್ನ ಲೇಖನ ಅದು ಹೇಗೇ ಇದ್ದರೂ ಮೆಚ್ಚಿ ಪ್ರೋತ್ಸಾಹಿಸುವ ಬ್ಲಾಗು-ಮಿತ್ರರ ಸ್ನೇಹ. ತುಂಬು ಮನಸ್ಸಿನಿಂದ ಅಣ್ಣ ಎನ್ನುವ ತಂಗಿಯರು, ತಮ್ಮಂದಿರು, ಅಲ್ಪಸ್ವಲ್ಪ ಹತ್ತಿರ ವಯಸ್ಕರು, ಹೀಗೆ ಹಲವಾರು ಸ್ನೇಹಿತರು...ಜೊತೆಗಿದ್ದು ಹುಟ್ಟಿನಿಂದ ಪರಿಚಿತ ಬಂಧುಗಳಿಗಿಲ್ಲದ ಆಪ್ಯಾಯತೆ ಇವರಲ್ಲಿ ಕಂಡೆ...

ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...........ಅಲ್ಲವೇ...??.

Friday, December 11, 2009

ಯಾರಲ್ಲಿ ಹೇಳಿಕೊಳ್ಳಲಿ ನನ್ನ ಗೋಳು..??

ನಾನು ಗಂಡಾಗಿ ಹುಟ್ಟಿದ್ದೇ ತಪ್ಪೇ??...ನನ್ನ ನೋವನ್ನೇಕೆ ಈ ಹೆಣ್ಣುಗಳು ಅರ್ಥಮಾಡಿಕೊಳ್ಳುವುದಿಲ್ಲ..??!! ದೇವರೇ..ಯಾವ ಜನ್ಮಕ್ಕೂ ಬೇಡ ಈ ಗಂಡಾಗುವ ಕರ್ಮ... ಹಯವದನ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ...ದೇವರಲ್ಲಿ ಬೇಡಿಕೊಳ್ಳತೊಡಗಿದ... ಅಂದು.. ಹೊರಗಡೆ ಅಡ್ಡಾಡಿ...ಮನೆಗೆ ಅಲ್ಪಸ್ವಲ್ಪ ಏನಾದರೂ ತರೋಣ ಅಂತ ಹೊರಟಿದ್ದ ಹಯವದನ... ಇಡೀ ಕಾಲೊನಿಯಲ್ಲೇ ಬಹುಸ್ಫುರದ್ರೂಪಿ ಕಟ್ಟುಮಸ್ತಾದ ಅಂಗಸೌಸ್ಠವ ಹೊಂದಿದ್ದ ಯುವ ಚೇತನ ಪುಟಿಯುವ ನವ ಯುವಕ ಇವನು. ಎಲ್ಲ ಹೆಣ್ಣುಗಳ ಕಣ್ಣೂ ಇವನಮೇಲೆಯೇ.. ಆಜಾನುಬಾಹು ವ್ಯಕ್ತಿತ್ವ...ಮುಖದಲ್ಲಿ ಬಹು ಆಕರ್ಷಣೀಯ ಕಾಂತಿ, ನಡೆದಾಡಿದರೆ ರಾಜಗಾಂಭೀರ್ಯ ತುಳುಕುತ್ತಿತ್ತು. ಯಾವುದೇ ಹೆಣ್ಣು ಆಸೆ ಪಡುವ ಎಲ್ಲ ಗುಣ ಅವನಲ್ಲಿದ್ದುದರಿಂದಲೇ ಎಲ್ಲ ಹೆಣ್ಣುಗಳ ಕಣ್ಣೂ ಇವನ ಮೇಲೆ. ಕಾಲೋನಿಯ ಬಹು ಕ್ವಾಲಿಫೈಯ್ಡ್ ಗಂಡುಗಳಲ್ಲಿ ಒಬ್ಬನಾದರೂ ಇವನ ರೂಪಕ್ಕೆ ಎಲ್ಲ ಹೆಣ್ಣುಗಳೂ ಮಾರುಹೋಗಿದ್ದವು. ತನ್ನ ಮನೆಗೆ ಬೇಕಾದ ಸಾಮಾನು ಸರಂಜಾಮನ್ನು ಹುಡುಕುವ ಅವನ ಕಣ್ಣಿಗೆ ಮೂರು ನವ ಯುವತಿಯರ ಕಣ್ಣುಗಳು ಹಿಂಬಾಲಿಸುವುದನ್ನು ಕಂಡುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಬೇಗ ಬೇಗ ..ಅವಸವಸರದಲ್ಲಿ ಸಾಮಾನನ್ನು ತೆಗೆದುಕೊಂಡು ಕಡೆದಾಗಿ ಬೇಕಾಗಿದ್ದ ವಸ್ತುವಿಗೆ ಸ್ವಲ್ಪ ಬಿಕೋ ಎನ್ನುವ ಜಾಗಕ್ಕೆ ಬಂದಿದ್ದ...ಸಂಜೆ ಗತ್ತಲು ..ಅವರಿಸಿದ್ದರಿಂದ..ಭಯ ಆವರಿಸಿತು. ಹಯವದನ ಹಿಂಬಾಲಿಸಿದ ಕಣ್ಣುಗಳು ಕತ್ತಲಲ್ಲಿ ಇನ್ನೂ ಹೆಚ್ಚಾಗಿ ಮಿನುಗುತ್ತಾ ಘೋರವೆನಿಸತೊಡಗಿತು.. ತನ್ನ ಬೇಕಾದ ಸಾಮಾನನ್ನು ಇನ್ನೇನು ತಗೆದುಕೊಳ್ಳಬೇಕು ಎನ್ನುವಾಗ ಮೂವರು ಯುವತಿಯರೂ ಸುತ್ತುಗಟ್ಟಿದರು..ಅವನ ಅಂಗಗಳ ಬಗ್ಗೆ ವಿವರಿಸುತ್ತಾ ಛೇಡಿಸತೊಡಗಿದರು.. ಒಬ್ಬಳು ಅವನ ಮೈಮೇಲೆ ಮೃದುವಾಗಿ ಕೈಯಾಡಿಸಿದಳು...ಇನ್ನೊಬ್ಬಳು ತನ್ನ ಬಾಹುಗಳಿಂದ ಗಟ್ಟಿಯಾಗಿ ತಬ್ಬಿಕೊಳ್ಳಲು ಮುಂದಾದಳು...ಕೊಸರಿಕೊಂಡ ಹಯವದನ..ತಪ್ಪಿಸಿಕೊಂಡು ಸತ್ತೆನೋ ಕೆಟ್ಟೆನೋ ಎಂದು.. ಓಡಲಾರಂಭಿಸಿದ...ಕತ್ತಲಾಗಿತ್ತು.. ಗಾಭರಿಯಲ್ಲಿ ದಾರಿ ತಪ್ಪಿದ..ಕುರುಚುಲು ಗಿಡ ಎತ್ತರ ಹುಲ್ಲಿನ ಬಯಲಿಗೆ ಬಂದಿದ್ದ...ದಾರಿತಪ್ಪಿದ ಗಂಡು ಈಗ ಸುಲಭವಾಗಿ ಸಿಗುವಂತಾದ... ಇಬ್ಬರು ಹೆಣ್ಣುಗಳು ಅವನಮೇಲೆ ಬಿದ್ದು ಕೆಡಹಿದರು..ಹಯವದನನ ಕೊಸರಾಡಿದರೂ ಆಗಲಿಲ್ಲ .. ವಿಲಕ್ಷಣ ಮತ್ತು ಬಿಡೆವೆಂಬ ಛಲ ಆ ಹೆಣ್ಣುಗಳಲ್ಲಿತ್ತು...ಹಯವದನನ ಶಕ್ತಿ ಕುಗ್ಗತೊಡಗಿತು....ಕತ್ತಲೂ ಹೆಚ್ಚಾಯಿತು...ಸೋಲತೊಡಗಿದ..ಹೆಣ್ಣುಗಳು ಗೆಲ್ಲತೊಡಗಿದವು......ಏನಾಗಬಾರದೆಂದು ಜಾಗರೂಕನಾಗಿದ್ದನೋ ಅದು ಅಂದು ಆಗೇ ಹೋಯಿತು..ಹಯವದನನ ಜೀವನದಲ್ಲಿ.....ಛೇ..ದೈವವೇ..ಗಂಡಿಗೇಕೆ ಇಂಥ ಶಿಕ್ಷೆ ಎಂದು..ಗೋಳಾಡಿದ. ಈಗ..ಪಾಪದ..ಫಲ ಬೆಳೆಯುತ್ತಿದೆ ಇವನ ಹೊಟ್ಟೆಯಲ್ಲಿ..ಅದಕ್ಕೆ ಕಾರಣರಾದ ಆ ಮೂರೂ ಹೆಣ್ಣುಗಳು...ರಾಜಾರೋಷವಾಗಿ ತಿರುಗುತ್ತಿವೆ..ಊರಲ್ಲೆಲ್ಲಾ... ತನ್ನ ಪ್ರಸವ ವೇದನೆಯನ್ನು ನೆನೆದು ಹಲುಬುತ್ತಿದ್ದಾನೆ ಹಯವದನ..... ಇಗೋ ಇಲ್ಲಿದೆ ನೀವೇ ನೋಡಿ ಅವನ ಗೋಳು ಎಂತಹುದೆಂದು....





ಸ್ನೇಹಿತರೇ..ಇದು ಹೆರುವ ಗಂಡು....ಸಮುದ್ರಕುದುರೆ...ಇದೊಂದು ಮೀನು......ಇದರ ಬಗ್ಗೆ ವಿವರ ನನ್ನ ಮೇ ಬ್ಲಾಗ್ ಪೋಸ್ಟ್ ನೋಡಿ.....ಹಹಹಹ...

Tuesday, December 8, 2009

ಫಾರ್ a ಚೇಂಜ್


ಆಗೊಮ್ಮೆ
ಈಗೊಮ್ಮೆ
ಬರ್ತಾನೆ
ಎಲ್ಲರೆದುರಿಗೆ
ಬಲವಾಗಿ ಒಂದು
ಕಿಸ್ ಕೊಡ್ತಾನೆ..
ಛೀ...

(ಕಿಸಿಂಗ್-ಗೌರಾಮಿ)

ಕಪ್ಪುಕರಿಯ
ಹೊನ್ನ ಬೆಡಗಿಯ
ಬೆನ್ನಟ್ತಾನೆ
ಮೀಟ್ ಮಾಡ್ತಾನೆ
ಮೇಟ್ ಮಾಡ್ತಾನೆ
ಛೀ.....
(ಬ್ಲಾಕ್-ಸಿಲ್ವರ್ ಮೋಲಿ)



ಹುಡ್ಗೀಂತ ನೋಡೊಲ್ಲ
ಬೆನ್ನಹತ್ತಾನೆ
ಕಾಟಕೊಡ್ತಾನೆ
ಅಕ್ಕ-ಪಕ್ಕ ಕಚ್ತಾನೆ
ಮದುವೆನೂ ಮಾಡ್ಕೋತಾನೆ
ಛೀ....
(ಫೈಟರ್ ಫಿಶ್)




ಹುಡ್ಗಿ ಆದ್ರೂ ನಾಚಿಕೆ ಇಲ್ಲ
ಯಾವಾಗ್ಲೂ ಹುಡುಗ್ರ ಹಿಂದೇನೇ
ಒಬ್ಬನ್ನೂ ಬಿಡೊಲ್ಲಾ ಅಂತಾಳೆ
ಇವತ್ತು ಒಬ್ಬ
ನಾಳೆ ಇನ್ನೊಬ್ಬ
ಛೀ.....

(ಪ್ಲಾಟಿ ಮೀನು)

Friday, December 4, 2009

ಹೊಸ ಪ್ರಯೋಗ



(Pic: Shivu images)

ಸ್ನೇಹಿತರೇ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇನೆ...ನಿಮ್ಮ ವಿಮರ್ಶೆಗೆ ಸ್ವಾಗತ

Probelms
ಜನನ ಮನನ
ಜಂಜಾಟ -traffic problem
ತನನ ಮದನ
ಗುಂಜಾಟ- Romance problems
ಹನನ ಸದನ
ಗುದ್ದಾಟ- Property problem
ಹವನ ಕದನ
ಜಿದ್ದಾಟ - Province problems

Feelings
ಕಲೆತು ಬೆರೆತು
ಕುಣಿದಾಟ - feel of playing
ಕಲಿತು ಅರಿತು
ಕಲಿವಾಟ - feel of learning
ಬಲಿತು ಜಾರಿತು
ಬೆಳೆವಾಟ - feel of growing
ಅರಿತು ಸಾರಿತು
ತಿಳಿಸುವಾಟ - feel of informing
ತೋರಿತು ಮಾರಿತು
ಮಾರಾಟದಾಟ -feel of selling


My views
ಅಕ್ಕ ಭಾವ
ಪಕ್ಕ ಪಕ್ಕ- my favourites
ನೀನು ನಾನು
ಹಳ್ಳಿ ಮುಕ್ಕ -my mistakes
ಜೇನು ಬೋನು
ಸಿಕ್ಕ ಠಕ್ಕ - my confusions
ಸರ ಬೇಸರ
ಅಲ್ಲೇ ಸಿಕ್ಕ - my foolishness
ಕುರ್ಚಿ ಮರ್ಜಿ
ಅಲ್ಲಿದೆ ರೊಕ್ಕ - my passions
ಗಣಿ ಧಣಿ
ಇಲ್ಲ ಮಣ್ಮುಕ್ಕ - my miss mess

Monday, November 30, 2009

ಏನ್ಮಾಡೋಕೆ ಹೋದೆ ...ಏನಾಯ್ತು...?


(ನನ್ನ ಫೋಟೋ ನೋಡ್ದೆ ಇರೋರಿಗೆ....ಮಧ್ಯೆ ಇರೋದೇ...ನಾನು..ಅಂದರೆ ಜಲನಯನ...)
ನನ್ನ ಬ್ಲಾಗಾಯಣದ ಮೂಲ ಕಾರಣ ಸುಗುಣ (ಮನಸು)...ನಮ್ಮ ಕನ್ನಡ ಕೂಟದ ಯಾವುದೋ ಒಂದು ಮೀಟಿಂಗ್ ನಲ್ಲಿ ತಾನು ಬ್ಲಾಗ್ ಮಾಡ್ತಿದ್ದೇನೆ..ನೋಡಿ ನಿಮ್ಮ ಅನಿಸಿಕೆ ತಿಳಿಸಿ ಸಾರ್..(ಗಮನಿಸಿ ಈ ಸಂಬೋಧನೆಯನ್ನ..!!!), ಅವರ ಪತಿ ಪರಮೇಶ್ವರ (ಮಹೇಶ್..ಉರ್ಫ್..ಸವಿಗನಸು..ಒಂದು ರೀತೀಲಿ ಅವರು ಬ್ಲಾಗ್ ಪ್ರಾರಂಭಿಸೋಕೆ ಅವರ ಅರ್ಧಾಂಗಿ ಇನ್ನೊಂದು ಕಡೆಯಿಂದ ನಾನು ಕಾರಣ...ಇಲ್ಲ ಅಂತ ಹೇಳ್ಲಿ..ಕೇಳಿ ನೀವೇ...ಹಾಂ ಮತ್ತೆ...) ಹೌದು ಸರ್ (ಇವರ ಸಂಬೋಧನೇನೂ...ಹೇಗೆ ಛೇಂಜ್ ಆಗುತ್ತೆ ನೀವೇ ನೋಡಿ...) ನೀವು ನೋಡಿ ನಿಮ್ಮ ಅನಿಸಿಕೆಯನ್ನ ತಿಳಿಸಿ ಅಂತ ದನಿಗೂಡಿಸೋದೇ?? ....
ಸರಿ ಒoದು ಶುಭ ದಿನ ಪ್ರಾರಂಭಿಸಿಯೇ ಬಿಟ್ಟೆ ನನ್ನ ಬ್ಲಾಗುಬಂಡಿ ಪಯಣ....ಮೊದ ಮೊದಲಿಗೆ ಮನಸು...ಪ್ರತಿಕ್ರಿಯೆ, ನಂತರ ಅವರಿಗೆ ತಿಳಿದ ಒಂದಿಬ್ಬರು ಬ್ಲಾಗು ಮಿತ್ರರು...ಹೀಗೆ..ನನ್ನ ಹಿಂಬಾಲಕರು, ..sorry...ಇಂಗ್ಲೀಷಿನಲ್ಲಿ ಹೇಳಿದ್ರೆ..ಸರಿ..blog followers...!! , ಈಗ ಸರಿಯಾಯ್ತು..
ನನ್ನ ಬ್ಲಾಗನ್ನು ಓದಿ ಪ್ರತಿಕ್ರಿಯೆ ನೀಡೊಕೆ ಶುರು ಹಚ್ಚಿದರು...ನೋಡ್ ನೋಡ್ತಾ ಇದ್ದಂತೆ ನನ್ನ followers ಲಿಸ್ಟ್ ದೊಡ್ದದಾಯ್ತು... ’ಮನಸು’ ನ overtake ಮಾದ್ಬಿಟ್ಟೆ...ನನ್ನ ಎದೆ ಉಬ್ಬಿ...Arnold ಥರ ಆಗೋಯ್ತು....ಇನ್ನೇನು..ನಾನು...ಕನ್ನಡ ಬ್ಲಾಗಿಗರ Numero Uno ಅಗ್ಬಿಟ್ಟೆ ಅಂತ ಊದಿಕೊಳ್ಳುವಾಗ ನನ್ನ ಉತ್ಸಾಹದ ಬಲೂನಿಗೆ ಸೂಜಿ...??.!! ಅಲ್ಲಲ್ಲ....ದಬ್ಬಣ....!!!ಚುಚ್ಚಿದ್ರು ನಮ್ಮ ಗಂಡು ಬ್ಲಾಗು ಮಿತ್ರರು (ಅವರ ಪ್ರತಿಕ್ರಿಯೆಗಳು ಈಗ ಬಹುಶಃ ತಪ್ಪೋದೇ ಇಲ್ಲ)...
ನನ್ನ ಒಂದು ಬ್ಲಾಗ್ ಪೋಸ್ಟಿಗೆ..ಅವರ ಪ್ರತಿಕ್ರಿಯೆ...."ಜಲನಯನ ಮೇಡಂ...ನೀವು ತುಂಬಾ..ತುಂಬಾ..ಚನ್ನಾಗಿ ಬರೀತೀರಿ...ನಿಮ್ಮ ಟಾಪಿಕ್ ಬಹಳ ಸಮಯೋಚಿತ ವಾಗಿರುತ್ತೆ...ನಿಮ್ಮ ಬಗ್ಗೆ ತಿಳಿಸಿ...ನಾನು ನಿಮ್ಮೊಂದಿಗೆ ಚರ್ಚಿಸಬೇಕೆಂದಿದ್ದೇನೆ...ನನ್ನ...ಮೈಲ್ ಐಡಿ.........@.......com." ಅಂತ ಬರೆಯೋದೇ...?? ಇದ್ಯಾಕೋ ಎದವಟ್ಟಾಗ್ತಾ ಇದೆ...ನನ್ನ ಅಪ್ಪ-ಅಮ್ಮ ನಿಗೆ ಮೊದಲ ಮಗು ಹೆಣ್ಣು ಆಗ್ಬೇಕು ಅನ್ನೋ ಉತ್ಕಟ ಅಭಿಲಾಷೆ ಇದ್ದದ್ದು ನಿಜ...ಆದ್ರೆ ಬೆಳೆದು ಮದುವೆ ಆಗಿ ಮೊಮ್ಮಗಳನ್ನು ಕೊಟ್ಟಿರೋ ಮಗ ಹೀಗೇ ರಾತ್ರೋ ರಾತ್ರಿ ಲಿಂಗ ಪರಿವರ್ತನೆಯಾದ ಅಂದ್ರೆ...?? ಅದೂ ಕುವೈತ್ ನಲ್ಲಿದ್ದುಕೊಂಡು ದೀನಾರ ದವಲತ್ತು ಮಾಡೋನಿಗೆ..!!! ??? ಛೆ..ಛೆ...ಸರಿಯಿಲ್ಲ,,, ಎನಿಸಿ ತಲೆ ಕೊಡವಿಕೊಂಡೆ...
ನಾನು ಬರೆದೆ... “ಧನ್ಯವಾದ ನನ್ನ ಬ್ಲಾಗ್ ಗೆ ಪ್ರತಿಕ್ರಿಯೆ ನೀಡಿದಿರಿ..ಆದ್ರೆ..ನಿಮಗೆ ನನ್ನ ಬಗ್ಗೆ confusion ..!!! ಇರೋ ಹಾಗಿದೆ....ದಯವಿಟ್ಟು ನನ್ನ ಪ್ರೊಫೈಲ್ ಒಮ್ಮೆ ನೋಡಿ..ನಿಮ್ಮ confusion ನ್ನೂ..ದೂರ ಆಗುತ್ತೆ...ಮತ್ತು ನಿಮಗೆ ನನ್ನ ಈ ಮೈಲ್ ಗೆ ಲಿಂಕೂ ಸಿಗುತ್ತೆ..." ಅಂತ ಬೆವರು ಒರೆಸಿಕೊಳ್ಳುತ್ತಾ ...ಟೈಪಿಸಿದೆ...
ನಂತರ..ಸ್ವಲ್ಪ ಥಂಡ--ಥಂಡ,,ಕೂಲ್..ಕೂಲ್,,,ಅಂತ ಒಂದು ಪೆಪ್ಸಿ ಕ್ಯಾನ್ ಕೊಡಮ್ಮ ಅಂತ ಮಗಳಿಗೆ ಹೇಳಿ cool ಕುಡಿದು..ಯೋಚಿಸ್ದಾಗ...ಎಡವಟ್ಟು ಎಲ್ಲಿ ಆಗಿದೆ ಅಂತ ಅರ್ಥ ಆಯ್ತು...
ನನ್ನ ಬ್ಲಾಗ್ ಹೆಸರು..."ಜಲನಯನ" .....ಆದ್ರೂ ನಾನು ಪ್ರತಿಕ್ರಿಯೆ ಕೊಡುವಾಗಲೆಲ್ಲಾ ಎಲ್ಲೂ ಪ್ರತಿಕ್ರಿಯಿಸುತ್ತಿರುವುದು ಹೆಣ್ಣು ಅನ್ನೋ..ಕ್ಲೂ ಕೊಡೋ ತರಹ ಬರ್ದಿಲ್ಲವಲ್ಲಾ...??!! ..ಛೇ..ಹೋಗ್ಲಿ..ಬಿಡು...ಈಗ confusion ದೂರ ಆಯ್ತಲ್ಲ..ಅಂತ ನಿಟ್ಟುಸಿರು ಬಿಟ್ಟೆ...
…ಹಾಂ...ಹಿಂದೇನೇ..ಆತಂಕ ಶುರು ಆಯ್ತು..ನಾನು ಅಂದರೆ ಜಲನಯನ ಹೆಣ್ಣು ಅಂತ..ಎಲ್ಲಾ ಗಂಡು ಬ್ಲಾಗಿಗಳು ಪ್ರತಿಕ್ರಿಯೆ ನೀಡ್ತಾ ಇದ್ರ...ಮತ್ತೆ ಪರ್ವಾಯಿಲ್ಲ ಇದು ಹೆಣ್ಣು ಬ್ಲಾಗಿ ...ಅಂತ ಹೆಣ್ಣು ಬ್ಲಾಗಿಗಳು...ಓ..my God..!!! ಅನ್ನಿಸಿ ಕ್ಷಣ ವಿಚಲಿತನಾದೆ...ನಂತರ...ಛೇ...ನನ್ನ profile ನಲ್ಲಿ ಕ್ಲಿಯರ್ ಆಗಿ ಬರೆದಿದ್ದೇನಲ್ಲಾ..??!! ಯಾರೇ ಆದ್ರೂ ಪ್ರೊಫೈಲ್ ನೋಡಿ ಪ್ರತಿಕ್ರಿಯಿಸೋದು...ಹೀಗೆ ಇರಲಿಕ್ಕಿಲ್ಲ...ಅಂತ ಸಮಾಧಾನ ಮಾಡಿಕೊಂಡೆ...
ಈ ನೆನಪು ಹಸಿಯಾಗಿರುವಾಗಲೇ ಬಂತು..ತೇಜಸ್ವಿನಿಯವರ shocking ಬ್ಲಾಗ್ ಪೋಸ್ಟ್...ಅವರನ್ನ ಯಾರೋ ಒಬ್ಬ (ತನ್ನ ನಿಜ ಪರಿಚಯವನ್ನು ಗುಪ್ತವಾಗಿಟ್ಟು) ಹುಡುಗಿಯ ಹೆಸರಿಟ್ಟ ಬ್ಲಾಗಿನ ಮೂಲಕ ..ಕೀಟಲೆಗೆ ಪ್ರಯತ್ನಿಸಿದ್ದು..ಅವನ ಬಣ್ಣ ಬಯಲಾಗಿದ್ದು ...ಇತ್ಯಾದಿ...
ಆಗಲೇ... ನಾನು.. ಬ್ಲಾಗ್ ಎಡವಟ್ಟು ಬಗ್ಗೆ ಕವನ ಬರೆದದ್ದು...
ಇಷ್ಟೇ ಆದ್ರೆ ತಾಪತ್ರಯ ನನ್ನದು ಪರವಾಗಿಲ್ಲ...ಮಹೇಶ್..ನನ್ನ ಮಿತ್ರ...ಆಗ..., ಈಗ...ತಮ್ಮ (ನನ್ನನ್ನ ಆಝಾದಣ್ಣ ಅಂತಾನೆ...)..ಮಹೇಶನ ಅರ್ಧಾಂಗಿ...ಮನಸು...ಸಹಾ ..ಆಜಾದಣ್ಣ ಅನ್ನೋದೇ...??!! ಈಗ..ಹೇಳೇಬಿಡ್ತೀನಿ.. ಅವರಿಗೆ, “ನೋಡಿ ಯಾರಾದ್ರೂ ಒಬ್ರು...ಅಣ್ಣ ಅನ್ನಿ...ಇಬ್ರೂ ಅಂದ್ರೆ ಸಂದಾಕಿರಕಿಲ್ಲಾ...ಅಂತ....” ಹಹಹಹ..
ನಮ್ಮ ಜಯಲಕ್ಷ್ಮಿಯವರು ಏನು ಕಮ್ಮೀನಾ...?? ಅವರ ಮುಕ್ತ ಮುಕ್ತದ ಮಂಗಳತ್ತೆ ಪಾತ್ರ ನೋಡಿ...ಅವರು ಹಾಕಿದ ಕಾಮೆಂಟಿಗೆ ನಾನು ಪ್ರತಿಕ್ರಿಯಿಸುತ್ತಾ...."ಜಯಕ್ಕಾ ನೀವು ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ..ಕೆಟ್ಟ ಅತ್ತೆ ಪಾತ್ರ..ಬೇರೇದು ಸಿಗಲಿಲ್ಲವೇ..?"...ಅದಕ್ಕೆ ಅವರು...
ಆಜಾದ್..ನೀವು ವಯಸ್ಸಲ್ಲಿ ನನ್ಗಿಂತ ಹಿರಿಯರು (ಇವರು ಎಲ್ಲರಿಗಿಂತ ಬುದ್ಧಿವಂತರು..ನನ್ನ ಕರ್ಮಕ್ಕೆ..!!! ನನ್ನ ಪ್ರೊಫೈಲ್ ನಲ್ಲಿ age ಗಮನಿಸಿದ್ದಾರೆ..!!!) ನನ್ನನ್ನ ಅಕ್ಕ ಅಂತ ಕರೆಯೋದೇ...??(ಯಾವ್ ಹೆಣ್ಣು ಮಗಳಿಗೆ ತಾನೇ ತಾನು ಅಜ್ಜಿಯಾಗಿದ್ದರೂ ..aunty ಅನ್ನಿಸಿಕೊಳ್ಳೊದಕ್ಕಿಂತಾ sister ಅನ್ನಿಸಿಕೊಳ್ಳೊದು ಇಷ್ಟ ಇರೊಲ್ಲ, ಜಯಲಕ್ಷ್ಮಿಯವರು ತಪ್ಪು ತಿಳಿಬಾರ್ದು..ಓಕೆ..). ಸದ್ಯಕ್ಕೆ ಅವರು ನನ್ನನ್ನ "ಅಣ್ಣ" ಅಂದಿಲ್ಲ ಈ ವರೆಗೂ...(ಆರ್ಕುಟ್..ಅಥವಾ ನನ್ನ ಬ್ಲಾಗ್ ನ title bar ಮೇಲಿರೋ 47,48,49,50 ನೋಡ್ದೇ ಇದ್ರೆ ಸಾಕು..).
ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!"
ಅಲ್ಲ...ನಾಲ್ಕು ಜನ ನಾವು..ನಾನು ಜೇಷ್ಟ..ನಮ್ಮ ಪಕ್ಕದ ಮನೆ ..ಶಾರದಕ್ಕ ನ ಮಗಳನ್ನ (ನನ್ನ ಮೂರನೇ ತಮ್ಮನ ವಯಸ್ಸು) ನಾನು ಎತ್ತಿ ಕೊಂಡು ಮುದ್ದು ಮಾಡೋದನ್ನ ನೋಡಿ..ಶಾರದಕ್ಕ ನಮ್ಮಪ್ಪನಿಗೆ.."ಅಜಾದನಿಗೆ ಹೆಣ್ಣುಮಕ್ಳು ಅಮ್ದ್ರೆ ಪ್ರಾಣ ..ಕಾಸೀಮಣ್ಣ...ಅವನಿಗೆ ಒಬ್ಬಳು ತಂಗಿ ಬಂದ್ರೆ ಚನ್ನ" ಅಂತ ನಮ್ಮಪ್ಪನ್ನ ಗೋಳುಹುಯ್ಕೊಳ್ತಿದ್ದಳು ಅಂತ ನಮ್ಮಮ್ಮ ನನ್ನ ತಂಗಿ ಹುಟ್ಟಿದಾಗ ಹೇಳಿದ್ದು ನೆನಪು...ಹಂಗಂತ,,,ಈಗ ಸಾಲು..ಸಾಲು ತಂಗೀಯರನ್ನ ಕೊಟ್ಟುಬಿಡ್ತು ನನ್ನ ಬ್ಲಾಗ್...ಜಲನಯನ...
ಹೋಗ್ಲೀ ಅಂದ್ರೆ...ಈ ಪಾಟಿ ತಮ್ಮಂದಿರೇ...???
ಈಗ ನಾನು ಬ್ಲಾಗ್ ಲೋಕಾನ ಜಾಲಾಡ್ಸಿತಿದೀನಿ...ನನಗಿಂತ ವಯಸ್ಸಿನಲ್ಲಿ ಹಿರಿಯರು ಸಿಗ್ತಾರಾಂತ..ಅಮಿತಾಭ್ ಸಿಕ್ಕರು....ಆದ್ರೆ..ನನ್ನ ವಯಸ್ಸಿಗೂ ಅತಿ ಕಡಿಮೆ ವಯಸ್ಸಿನ ಹೀರೋಯಿನ್ ಜೊತೆ ಹೀರೋ ಆಗಿ ನಟಿಸಿದ್ದು ನೋಡಿ..ಅವರೂ ನನ್ನ "ಅಣ್ಣ"..ಅಂದ್ಬಿಟ್ರೆ…..???!!! ಅಂತ ಹೆದರಿ ಅವರಿಗೆ ಮೈಲ್ ಕಳಿಸ್ಲಿಲ್ಲ...ಈಗ ಧೈರ್ಯವಾಗಿ ಸಂಪರ್ಕ ಮಾಡ್ಬೇಕು ಅಂತ ಇರೋದು..ನಮ್ಮ ಹೋಂ ಮಿನಿಸ್ಟರ್..ವಿ.ಎಸ್.ಆಚಾರ್ಯ, ನಮ್ಮ ಫ್ರೆಸಿಡೆಂಟ್...ಪ್ರತಿಭಾ ಪಾಟೀಲ್, ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್......
ನೀವೆಲ್ಲಾ...ನಿಮ್ಮಣ್ಣನಿಗೆ,,,,,ಶುಭಕೋರಿ...ಇವ್ರಾದ್ರೂ ನನ್ನ ತಮ್ಮ ಅಂತ ಒಪ್ಪಿಕೊಳ್ಳಲಿ....
(ಇದೊಂದು ಕೇವಲ ಮನರಂಜನೆಯ ಪ್ರಹಸನ ಎಂದುಕೊಳ್ಳಿ...ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ.....ಕ್ಷಮೆಯಿರಲಿ)