ರಾತ್ರಿ ಕಂಡ ಬಾವಿ
ಬೆರೆತಾಗ ಕಣ್ಣು
ಕರಗುವುದು ಹೆಣ್ಣು.??!!
ಬೆಪ್ಪೇ, ಅದೊಂದು ಹುಣ್ಣು
ಕೆರೆದುಕೊಂಡರೆ ಏನೋ ಹಿತ
ಮರುಳಾಗಬೇಡ
ರಾತ್ರಿಕಂಡ ಬಾವಿಗೆ
ಹಗಲೇ ಬೀಳಬೇಡ
ಪ್ರೀತಿ
ತುಟಿ ಬಿಚ್ಚಲಿಲ್ಲ
ಕಣ್ಣು-ಕಣ್ಣು ಸೇರಿದ್ದವು
ಕಣ್ಣು ಮುಚ್ಚಲಿಲ್ಲ
ಮನಗಳು ಮಾತನಾಡಿದ್ದವು
ಮನ ಹಾಡಿತಲ್ಲ
ಕಣ್ಣು-ತುಟಿ ಸೇರಿರಲು
ವಿಚಿತ್ರ
ಕಣ್ಣು ಮುಚ್ಚಿದರೆ
ಚಿತ್ರ
ಮನಸಕಾಡಿದಳು
ಚಿತ್ರ
ಮನಗೆದ್ದು ಮೂಡಿದ
ಚಿತ್ರ
ಆಗದಾಯಿತು ಇದು ಹತ್ರ
ಅದಕೇ ಇದು ವಿ-
ಚಿತ್ರ
Thursday, May 14, 2009
ಕರ್ತವ್ಯ
ನೆನೆಪುಮಾತ್ರದಿ
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.
Tuesday, May 12, 2009
ಹಾಗೆಯೇ..ಅನಿಸಿದ್ದು
ವ್ಯತ್ಯಾಸ
ನನ್ನಕಣ್ಣಲ್ಲೇ
ಇರುವೆ
ನೀನು ಅಂದಿದ್ದು ತಪ್ಪಾಯ್ತೇನೋ
ಅಲ್ಲಿ ಏನು ಮಾಡುತ್ತಾ
ಇರುವೆ
ಕಣ್ಣೀರು ನಿಂತಿಲ್ಲ
ನಾ(ನಿ)ದಿನಿ
ಮದುವೆಯಾದೆ
ನನ್ನವಳು ಸುಂದರಿ
ಅವಳ ತಂಗಿ ಸಿಂಗಾರಿ
‘ಲೇ‘ ಅಂತ ಕರೆದ್ರೆ ಇವಳನ್ನ
ನಾನಿದೀನಿ
ಅಂತ ಬರಬೇಕೆ ನಾದಿನಿ?
ಅಂತರ
ಸ್ನೇಹಿತರಿಬ್ಬರೂ ನಾವು
ಮದುವೆಯಾದ ನಂತರ ಸಿಕ್ಕೆವು
ಅವನೆಂದ ಲೋ..ಎಷ್ಟು ಚನ್ನಾಗಿ
ಬಿಡಿಸ್ತಾಳೋ ನನ್ಹೆಂಡ್ತಿ ಚಿತ್ರಾನ..
ಕೊಚ್ಚಿಕೊಂಡ
ಹೋಗೋಲೋ..ನನ್ಹೆಂಡ್ತೀಯೇನು ಕಮ್ಮಿ
ಅವಳೂ ಚನ್ನಾಗೇ ಬಿಡಿಸ್ತಾಳೆ ದಿನವೂ
ನನ್ನ ಗ್ರಹಚಾರಾನ
ಗಂಡ ಭೇರುಂಡ
ಲೇ ಗುಂಡ
ಗಂಡ ಭೇರುಂಡ
ಅಂದ್ರೇನ್ಲಾ? ಕೇಳಿದ್ರು ಮೇಷ್ಟ್ರು
ಹೆಂಡ್ತೀನ ಬಿಟ್ಟು ಬೇರೆ
ಉಣ್ಣೋ ಗಂಡನ ಸ್ಥಿತಿಗೆ
ಗಂಡ ಭೇರುಂಡ ಅನ್ತಾರೆ ಸಾ..
ಅನ್ನೋದೇ ಗುಂಡ??!!
ಹೆಣ್ಣು-ಗಂಡು
ಹೆಣ್ಣು...
ಒಲಿದ್ರೆ ನಾರಿ
ಮಿನಿದ್ರೆ ಮಾರಿ
ಗಂಡು...
ಒಲಿದ್ರೆ ಗಂಡ
ಮುನಿದ್ರೆ ದಂಡ
ಕವಿಚ್ಛೆ
ಪ್ರಿಯೆ ನಿನ್ನ
ಕರೆಯಲಿಲ್ಲವೇ
ನನ್ನ ಚಿನ್ನ
ನೀನೇಕೆ ಅನ್ನಲಿಲ್ಲ
ಒಮ್ಮೆಯಾದರೂ ನನ್ನ
ಓ ನನ್ನ ಪಂಪ, ರನ್ನ
ನನ್ನಕಣ್ಣಲ್ಲೇ
ಇರುವೆ
ನೀನು ಅಂದಿದ್ದು ತಪ್ಪಾಯ್ತೇನೋ
ಅಲ್ಲಿ ಏನು ಮಾಡುತ್ತಾ
ಇರುವೆ
ಕಣ್ಣೀರು ನಿಂತಿಲ್ಲ
ನಾ(ನಿ)ದಿನಿ
ಮದುವೆಯಾದೆ
ನನ್ನವಳು ಸುಂದರಿ
ಅವಳ ತಂಗಿ ಸಿಂಗಾರಿ
‘ಲೇ‘ ಅಂತ ಕರೆದ್ರೆ ಇವಳನ್ನ
ನಾನಿದೀನಿ
ಅಂತ ಬರಬೇಕೆ ನಾದಿನಿ?
ಅಂತರ
ಸ್ನೇಹಿತರಿಬ್ಬರೂ ನಾವು
ಮದುವೆಯಾದ ನಂತರ ಸಿಕ್ಕೆವು
ಅವನೆಂದ ಲೋ..ಎಷ್ಟು ಚನ್ನಾಗಿ
ಬಿಡಿಸ್ತಾಳೋ ನನ್ಹೆಂಡ್ತಿ ಚಿತ್ರಾನ..
ಕೊಚ್ಚಿಕೊಂಡ
ಹೋಗೋಲೋ..ನನ್ಹೆಂಡ್ತೀಯೇನು ಕಮ್ಮಿ
ಅವಳೂ ಚನ್ನಾಗೇ ಬಿಡಿಸ್ತಾಳೆ ದಿನವೂ
ನನ್ನ ಗ್ರಹಚಾರಾನ
ಗಂಡ ಭೇರುಂಡ
ಲೇ ಗುಂಡ
ಗಂಡ ಭೇರುಂಡ
ಅಂದ್ರೇನ್ಲಾ? ಕೇಳಿದ್ರು ಮೇಷ್ಟ್ರು
ಹೆಂಡ್ತೀನ ಬಿಟ್ಟು ಬೇರೆ
ಉಣ್ಣೋ ಗಂಡನ ಸ್ಥಿತಿಗೆ
ಗಂಡ ಭೇರುಂಡ ಅನ್ತಾರೆ ಸಾ..
ಅನ್ನೋದೇ ಗುಂಡ??!!
ಹೆಣ್ಣು-ಗಂಡು
ಹೆಣ್ಣು...
ಒಲಿದ್ರೆ ನಾರಿ
ಮಿನಿದ್ರೆ ಮಾರಿ
ಗಂಡು...
ಒಲಿದ್ರೆ ಗಂಡ
ಮುನಿದ್ರೆ ದಂಡ
ಕವಿಚ್ಛೆ
ಪ್ರಿಯೆ ನಿನ್ನ
ಕರೆಯಲಿಲ್ಲವೇ
ನನ್ನ ಚಿನ್ನ
ನೀನೇಕೆ ಅನ್ನಲಿಲ್ಲ
ಒಮ್ಮೆಯಾದರೂ ನನ್ನ
ಓ ನನ್ನ ಪಂಪ, ರನ್ನ
Sunday, May 10, 2009
ಪುಟ್ಟಿ

ಪುಟ್ಟಿ
ಪುಟ್ಟ ಕೈ
ಮುದ್ದುಮುಖ
ಮುಚ್ಚಿಕೊಂಡೆ ಏಕೆ?
ಇಟ್ಟ ಮುದ್ದು
ಮೀಸೆಯಂಚು
ಚುಚ್ಚಿತೇನೋ ಹೇಗೆ?
ಕಣ್ಣ ಮುಚ್ಚಿ
ಕಾಡೇ ಗೋಡೇ
ಹುಡುಕೋ ಆಟ ಬೇಕೆ?
ಹೇ ಕಳ್ಳಿ ,,!!
ನೋಡಿತಿರುವಿ
ಬೆರಳ ಸಂದಿಯಲ್ಲಿ
ಹೋಗಿ ಹಿಡಿದು
ಬಿಡುವೆ ಅಕ್ಕನನ್ನು
ಮೂಟೆಸಂದಿಯಲ್ಲಿ
ಅನ್ನ ತಿನಲು ಅಳುವೆ
ಮಣ್ಣ ತಿನಲು ಒಲವೇ?
ಕೇಳಿದ್ದಕ್ಕೆ ನಿನ್ನ ಏಕೆ
ಕಣ್ಣಮುಚ್ಚಿ ಅಳುವೆ?
ಮುದ್ದು ಕೈಯ
ಬಿಡಿಸಿ ನೋಡೆ
ಕಣ್ಣಲಿಲ್ಲ ನೀರು
ಕಣ್ಣ ಹೊಳಪು
ತುಂಟತನ ಕಂಡುನನಗೆ
ಬಂತು ನಗು ಜೋರು (ಶಿವು ರವರ ಛಾಯಾಚಿತ್ರದ ಪ್ರೇರಣೆ)
ಮುದ್ದುಮುಖ
ಮುಚ್ಚಿಕೊಂಡೆ ಏಕೆ?
ಇಟ್ಟ ಮುದ್ದು
ಮೀಸೆಯಂಚು
ಚುಚ್ಚಿತೇನೋ ಹೇಗೆ?
ಕಣ್ಣ ಮುಚ್ಚಿ
ಕಾಡೇ ಗೋಡೇ
ಹುಡುಕೋ ಆಟ ಬೇಕೆ?
ಹೇ ಕಳ್ಳಿ ,,!!
ನೋಡಿತಿರುವಿ
ಬೆರಳ ಸಂದಿಯಲ್ಲಿ
ಹೋಗಿ ಹಿಡಿದು
ಬಿಡುವೆ ಅಕ್ಕನನ್ನು
ಮೂಟೆಸಂದಿಯಲ್ಲಿ
ಅನ್ನ ತಿನಲು ಅಳುವೆ
ಮಣ್ಣ ತಿನಲು ಒಲವೇ?
ಕೇಳಿದ್ದಕ್ಕೆ ನಿನ್ನ ಏಕೆ
ಕಣ್ಣಮುಚ್ಚಿ ಅಳುವೆ?
ಮುದ್ದು ಕೈಯ
ಬಿಡಿಸಿ ನೋಡೆ
ಕಣ್ಣಲಿಲ್ಲ ನೀರು
ಕಣ್ಣ ಹೊಳಪು
ತುಂಟತನ ಕಂಡುನನಗೆ
ಬಂತು ನಗು ಜೋರು (ಶಿವು ರವರ ಛಾಯಾಚಿತ್ರದ ಪ್ರೇರಣೆ)
Monday, May 4, 2009

ವೃಕ್ಷ-ಪ್ರೇಮ
ನೇಪಥ್ಯ ಮುಸುಕು
ಕಂಡಂತೆ ಈ ನಸುಕು
ಬೋಳು ಮರ ನಿಂತಿದೆ
ಆದರೂ ಹೆಮ್ಮೆ ಅದಕೆ
ನಿಂತಿರುವೆನೆಂದು
ಭರವಸೆಯ ಬಿಮ್ಮು
ಚಿಗುರಿ ಹಸಿರ ಹೊದ್ದು
ನಿಲುವೆನೆಂದು
ಇಲ್ಲವೇ ‘ಸಾಥ್‘ ನೀಡಲು
ದೂರ-ದೂರ
ಅಲ್ಲೊಂದು ಇಲ್ಲೊಂದು
ಹೆಸರಿಗೊಂದು ಮರ
ಹಸಿರೇ ಉಸಿರೆಂದು
ಮನಗಾಣಲಿ ಮನು
ಉಸಿರು ನಿಂತರೆ
ಅದು ತನ್ನದೇ ಅಂತ್ಯವೆಂದು
ಬೆಳೆಯಲಿ ಮಕ್ಕಳಲೂ
ಹಸಿರು-ಪ್ರೇಮ
ನಾಂದಿಯಾಗಲಿ ಹುಟ್ಟಲು
ಮಾನವನಲಿ
ವೃಕ್ಷ-ಪ್ರೇಮ
ಕಂಡಂತೆ ಈ ನಸುಕು
ಬೋಳು ಮರ ನಿಂತಿದೆ
ಆದರೂ ಹೆಮ್ಮೆ ಅದಕೆ
ನಿಂತಿರುವೆನೆಂದು
ಭರವಸೆಯ ಬಿಮ್ಮು
ಚಿಗುರಿ ಹಸಿರ ಹೊದ್ದು
ನಿಲುವೆನೆಂದು
ಇಲ್ಲವೇ ‘ಸಾಥ್‘ ನೀಡಲು
ದೂರ-ದೂರ
ಅಲ್ಲೊಂದು ಇಲ್ಲೊಂದು
ಹೆಸರಿಗೊಂದು ಮರ
ಹಸಿರೇ ಉಸಿರೆಂದು
ಮನಗಾಣಲಿ ಮನು
ಉಸಿರು ನಿಂತರೆ
ಅದು ತನ್ನದೇ ಅಂತ್ಯವೆಂದು
ಬೆಳೆಯಲಿ ಮಕ್ಕಳಲೂ
ಹಸಿರು-ಪ್ರೇಮ
ನಾಂದಿಯಾಗಲಿ ಹುಟ್ಟಲು
ಮಾನವನಲಿ
ವೃಕ್ಷ-ಪ್ರೇಮ
ನಾನು
ನಾನು ಮರ
ನಾನಮರ
ವಿವೇಚನೆಯಿರಲಿ
ಓ ನರ
ಹಾಕೀಯೆ ಕೊಡಲಿ
ನಿನ್ನ ಕಾಲಿಗೆ ನೀನೆ
ನಿನ್ನ ವಿಷದುಸಿರು
ನನಗುಸಿರು, ಈ ಹಸಿರು
ಹೋದರೆ ನಿಲ್ಲುವುದೋ
ಮರುಳೇ ನಿನ್ನುಸಿರು
ನಾನು ಮರ
ನಾನಮರ
ವಿವೇಚನೆಯಿರಲಿ
ಓ ನರ
ಹಾಕೀಯೆ ಕೊಡಲಿ
ನಿನ್ನ ಕಾಲಿಗೆ ನೀನೆ
ನಿನ್ನ ವಿಷದುಸಿರು
ನನಗುಸಿರು, ಈ ಹಸಿರು
ಹೋದರೆ ನಿಲ್ಲುವುದೋ
ಮರುಳೇ ನಿನ್ನುಸಿರು
ಇದುವೇ ನಿಜ
ಕಾಡು, ಕಾನನ ವನ
ಆಗುತಿವೆ ಕುರುಚಲು ಬನ
ಹಸಿರು ಹೊದ್ದು ಮೇರುಗಳು
ಎದ್ದು ಹೋಗಿವೆ
ಆಗಿ ಕೊರಕಲು ಗಣಿಗಳು
ಮಿತಿಯಿರಬೇಕು ಎಲ್ಲದಕೂ
ಇತಿಯರಿತು ಕೆಡಹುವುದಕೂ
ಮರಗಳು ಬಿದ್ದರೆ
ಏಳುವಂತಿರಬೇಕು
ಹೊಸತು,
ಎಚ್ಚೆತ್ತುಕೋ ಮನುಜ
ಹಸಿರೇ ಉಸಿರು
ಇದುವೇ ನಿಜ
ಕಾಡು, ಕಾನನ ವನ
ಆಗುತಿವೆ ಕುರುಚಲು ಬನ
ಹಸಿರು ಹೊದ್ದು ಮೇರುಗಳು
ಎದ್ದು ಹೋಗಿವೆ
ಆಗಿ ಕೊರಕಲು ಗಣಿಗಳು
ಮಿತಿಯಿರಬೇಕು ಎಲ್ಲದಕೂ
ಇತಿಯರಿತು ಕೆಡಹುವುದಕೂ
ಮರಗಳು ಬಿದ್ದರೆ
ಏಳುವಂತಿರಬೇಕು
ಹೊಸತು,
ಎಚ್ಚೆತ್ತುಕೋ ಮನುಜ
ಹಸಿರೇ ಉಸಿರು
ಇದುವೇ ನಿಜ
Wednesday, April 29, 2009
ಚುಟುಕಗಳ ಮತ್ತೊಂದು ಸರಣಿ
ಕನಸು
ಮುಚ್ಚಿದ ಕಣ್ಣ
ಹಚ್ಚಿದ ಬಣ್ಣ
ಕೊಚ್ಚಿಹೋಯಿತೇಕೆ?
ತೆರೆದರೆ ಕಣ್ಣ
ಲವ್ವು
ತಾಳ ತಪ್ಪಿದ ಬಡಿತ
ಹೃದಯ ಬಿಚ್ಚಿ ಮಿಡಿತ
ಕಣ್ಣ-ಕಣ್ಣು ಕಲೆತಾಗ
ತುಟಿ ಎರಡಾಗದೇ ಹೊಮ್ಮಿದ್ದು
ಗಾಯ
ಸ್ವಲ್ಪವೇ ಏಕೋ ಉಜ್ಜಿಕೊಂಡೆ
ಹಿತವೆನಿಸಿತು ಕೆರೆದುಕೊಂಡೆ
ಈಗ ಅನಿಸುತಿದೆ-ತಲೆಚಚ್ಚಿಕೊಂಡೆ
ನಾನೇಕೆ ಕೈಯಾರೆ ಗಾಯ ಮಾಡಿಕೊಂಡೆ ?
ಟ್ವಿಸ್ಟರ್
ನ್ಯಾಯಾನ್ಯಾಯದ ತಕ್ಕಡಿ
ಅನ್ಯಾಯದೆಡೆಗೆ ವಾಲುವುದು
ಅನ್ಯಾಯವಾದಿಯ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯಾಸ್ಥಾನದ
ನ್ಯಾಯಾಧೀಶರು
ಅನ್ಯಾಯವಾದರೂ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯವೆಂದು
ಎತ್ತಿ ಹಿಡಿದಾಗ
ವಿಪರ್ಯಾಸ
ಹೆಣ್ಣನ್ನು
ಅಬಲೆಯೇ
ಅಬಲೆಯೆಂದು
ಬಣ್ಣಿಸುವುದು.
ಸರಣಿ
ಅಂದು - ಇಬ್ಬರದೂ ಮಾತು, ಇನಿಮಾತು
ಪ್ರೇಮಿಗಳು
ನಂತರ - ಅವನದೇ ಮಾತು ಸವಿ ಮಾತು
ಮಧುಚಂದ್ರ-ರಾತ್ರಿ
ಆಮೇಲೆ- ಇವಳದೇ ಮಾತು, ಇವನು ಮೂಕ
ಸಂಸಾರದ ಪ್ರಾರಂಭ
ತದನಂತರ- ಇಬ್ಬರದೂ ಮಾತು..ಅಲ್ಲಲ್ಲ ಕಿರುಚಾಟ
ಸಂಸಾರದಲಿ ಜಂಜಾಟ
ಈಗ- ಮೌನ, ಇಬ್ಬರೂ
ವೃದ್ಧಾಶ್ರಮದಲಿ...
ಇವರು ಮಾಡಿದ್ದನ್ನು
ಮುಂದುವರೆಸಿದ್ದಾರೆ ಅವರ ಮಕ್ಕಳು
ತಂತಂಮ್ಮ ಮನೆಗಳಲ್ಲಿ
ಮುಚ್ಚಿದ ಕಣ್ಣ
ಹಚ್ಚಿದ ಬಣ್ಣ
ಕೊಚ್ಚಿಹೋಯಿತೇಕೆ?
ತೆರೆದರೆ ಕಣ್ಣ
ಲವ್ವು
ತಾಳ ತಪ್ಪಿದ ಬಡಿತ
ಹೃದಯ ಬಿಚ್ಚಿ ಮಿಡಿತ
ಕಣ್ಣ-ಕಣ್ಣು ಕಲೆತಾಗ
ತುಟಿ ಎರಡಾಗದೇ ಹೊಮ್ಮಿದ್ದು
ಗಾಯ
ಸ್ವಲ್ಪವೇ ಏಕೋ ಉಜ್ಜಿಕೊಂಡೆ
ಹಿತವೆನಿಸಿತು ಕೆರೆದುಕೊಂಡೆ
ಈಗ ಅನಿಸುತಿದೆ-ತಲೆಚಚ್ಚಿಕೊಂಡೆ
ನಾನೇಕೆ ಕೈಯಾರೆ ಗಾಯ ಮಾಡಿಕೊಂಡೆ ?
ಟ್ವಿಸ್ಟರ್
ನ್ಯಾಯಾನ್ಯಾಯದ ತಕ್ಕಡಿ
ಅನ್ಯಾಯದೆಡೆಗೆ ವಾಲುವುದು
ಅನ್ಯಾಯವಾದಿಯ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯಾಸ್ಥಾನದ
ನ್ಯಾಯಾಧೀಶರು
ಅನ್ಯಾಯವಾದರೂ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯವೆಂದು
ಎತ್ತಿ ಹಿಡಿದಾಗ
ವಿಪರ್ಯಾಸ
ಹೆಣ್ಣನ್ನು
ಅಬಲೆಯೇ
ಅಬಲೆಯೆಂದು
ಬಣ್ಣಿಸುವುದು.
ಸರಣಿ
ಅಂದು - ಇಬ್ಬರದೂ ಮಾತು, ಇನಿಮಾತು
ಪ್ರೇಮಿಗಳು
ನಂತರ - ಅವನದೇ ಮಾತು ಸವಿ ಮಾತು
ಮಧುಚಂದ್ರ-ರಾತ್ರಿ
ಆಮೇಲೆ- ಇವಳದೇ ಮಾತು, ಇವನು ಮೂಕ
ಸಂಸಾರದ ಪ್ರಾರಂಭ
ತದನಂತರ- ಇಬ್ಬರದೂ ಮಾತು..ಅಲ್ಲಲ್ಲ ಕಿರುಚಾಟ
ಸಂಸಾರದಲಿ ಜಂಜಾಟ
ಈಗ- ಮೌನ, ಇಬ್ಬರೂ
ವೃದ್ಧಾಶ್ರಮದಲಿ...
ಇವರು ಮಾಡಿದ್ದನ್ನು
ಮುಂದುವರೆಸಿದ್ದಾರೆ ಅವರ ಮಕ್ಕಳು
ತಂತಂಮ್ಮ ಮನೆಗಳಲ್ಲಿ
Saturday, April 18, 2009
XX ಮತ್ತು XY
Subscribe to:
Posts (Atom)

